Become a News Creator

Your local stories, Your voice

Follow us on
Download App fromplay-storeapp-store
Advertisement
Back
Mandya571426

ಮಳೆ ನೀರಿಗೆ ಕೆರೆಯಂತಾದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ

Aug 10, 2024 15:34:23
Krishnarajpete, Karnataka
ಸಂಜೆ ಸತತವಾಗಿ ಒಂದು ಗಂಟೆಗಳ ಕಾಲ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಕೆ.ಆರ್.ಪೇಟೆ ಪಟ್ಟಣದ ಕೆ‌.ಎಸ್.ಆರ್.ಟಿ .ಸಿ ಬಸ್ ನಿಲ್ದಾಣ ತುಂಬೆಲ್ಲಾ ನೀರು ತುಂಬಿಕೊಂಡು ಕೆರೆಯಂತಾಗಿದೆ. ಮಳೆ ನೀರು ನಿಲ್ದಾಣದಲ್ಲಿ ತುಂಬಿಕೊಂಡು ಬಸ್ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆನೀರು ತುಂಬಿಕೊಂಡಿದ್ದರಿಂದ ಬಸ್ ಹತ್ತಲು ಪ್ರಯಾಣಿಕರು ಜನರು ಪರದಾಡುವಂತಾಯಿತು.ಈ ಸಮಸ್ಯೆ ಇದೇ ಮೊದಲಲ್ಲ‌.ಒಂದು ದಶಕಗಳಿಂದಲೂ ಹಲವು ಬಾರಿ ಮಳೆಯ ಅವಾಂತರದಿಂದ ಬಸ್ ನಿಲ್ದಾಣ ಕೆರೆಯಂತಾದರು ಸೂಕ್ತ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com

Advertisement
Advertisement
Back to top