Back
Somashekhar
Bagalkot587102

ರಾಜ್ಯದಲ್ಲೂ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ:ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ ವಿಶ್ವಾಸ

SSomashekharJun 15, 2025 15:19:29
Bagalkote, Karnataka:
ಬರುವ 2028ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಲಾಗಿದೆ ಎಂದು ಕೆಪಿಸಿಸಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್. ಎಸ್. ಮಂಜುನಾಥ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದೇನೆ. ಎಲ್ಲೆಡೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ, ಉಮ್ಮಸ್ಸು ಕಂಡುಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಐದು ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ಕೆ ಯುವ ಕಾಂಗ್ರೆಸ್ ಮುಂದಾಗಬೇಕು. ಮುಂದಿನ ಚುನಾವಣೆಗೂ ಸಜ್ಜಾಗಬೇಕು ಎಂದರು. ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಸೂಚನೆಯಂತೆ ಈಗಿನಿಂದಲೇ ಸಂಘಟನೆ ಸದೃಢಗೊಳಿಸಿ 2028ರ ಚುನಾವಣೆಗೆ ಬಿರುಸಿನ ತಯಾರಿ ನಡೆಯುತ್ತಿದೆ ಎಂದ ಅವರು, “ಜಮಖಂಡಿಯಲ್ಲಿ ನಮಗೆ ನೀಡಿದ ಅದ್ಭುತ ಸ್ವಾಗತದಿಂದ ಈ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಎಷ್ಟು ಬಲಿಷ್ಠವಾಗಿದೆ ಎಂಬುದು ಸಾಬೀತಾಗಿದೆ” ಎಂದು ಹೇಳಿದರು.
0
Report
Bagalkot587102

ಬಾಗಲಕೋಟೆ ನಗರದಲ್ಲಿ ಯಶಸ್ವಿಯಾಗಿ ಜರುಗಿದ ಯುವ ಕಾಂಗ್ರೆಸ್ ಜಿಲ್ಲಾ ಸಮೀತಿಯ ಕಾರ್ಯಕಾರಿಣಿ ಸಭೆ

SSomashekharJun 15, 2025 15:16:34
Bagalkote, Karnataka:
ಬಾಗಲಕೋಟೆ ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ ಬಾಗಲಕೋಟ ವತಿಯಿಂದ ಬಾಗಲಕೋಟೆ ನಗರದ ಖಾಸಗಿ ರೆಸಾರ್ಟ್ ನಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್ಎಸ್ ಮಂಜುನಾಥಗೌಡ ಅವರ ಅಧ್ಯಕ್ಷತೆಯಲ್ಲಿ ಯುವ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿಗಳಾದ ನಿಗಮ್ ಭಂಡಾರಿ ಜಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ತಿಮ್ಮಾಪುರ್ ಅವರ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲಾ ಕಾರ್ಯಕಾರಿಣಿ ಸಭೆ ಜರುಗಿತು. ಸಭೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿಗಳಾದ ಅಬ್ದುಲ್ ದೇಸಾಯಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ದೀಪಕ್ , ಉಪಾಧ್ಯಕ್ಷರಾದ ಮಂಜುನಾಥ್ ಮುಚಖಂಡಿ, ಬಾಗಲಕೋಟೆ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ನಂಜಯ್ಯನಮಠ, ಜಿಲ್ಲಾ ಎಸ್ ಸಿ ಬ್ಲಾಕ್ ಅಧ್ಯಕ್ಷ ರಾಜು ಮನ್ನಿಕೆರಿ ರವರು, ಸೇರಿ ಎಲ್ಲಾ ಜಿಲ್ಲಾ, ತಾಲೂಕ, ಬ್ಲಾಕ್ ಮಟ್ಟದ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕಾರಿಣಿ ಸಭೆ ಯಶಸ್ವಿಗೊಳಿಸಿದರು.
0
Report
Bagalkot587102

ಜೂನ.19. ರಂದು ಬಾಗಲಕೋಟೆ ಜಿಲ್ಲಾಡಳಿತಭವನದ ಮುಂದೆ ಕಬ್ನು ಬೆಳೆಗಾರರ ಪ್ರತಿಭಟನೆ

SSomashekharJun 15, 2025 15:15:17
Bagalkote, Karnataka:
ಜೂನ್.19.ರಂದು ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಬಿಲ್ ಪಾವತಿಸಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.ಜಮಖಂಡಿ ನಗರದಲ್ಲಿ ನಡೆದ ಕಬ್ಬು ಬೆಳೆಗಾರರ ಸಂಘದ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.ಜೂನ್.19 ಪ್ರಸಕ್ತ ಸಾಲಿನ ಕಬ್ಬಿನ ಬಾಕಿ ಪಾತಿಗೆ ಆಗ್ರಹಿಸಿ ಬಾಗಲಕೋಟೆ ನಗರದ ಜಿಲ್ಲಾಡಳಿತಭವನದ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ರೈತ ಮುಖಂಡ ಈರಪ್ಪ ಹಂಚಿನಾಳ ತಿಳಿಸಿದ್ದಾರೆ.
0
Report
Bagalkot587102

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಜೆ.ಟಿ.ಪಾಟೀಲ್

SSomashekharJun 15, 2025 15:13:25
Bagalkote, Karnataka:
ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಮತಕ್ಷೇತ್ರದ ಬಂದಕೇರಿ ಗ್ರಾಮದ ಪರಿಶಿಷ್ಠ ಜಾತಿ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಕಾರಿ ಹಾಗೂ ಯಂಡಿಗೇರಿ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಮತ್ತು ಅನವಾಲ ಗ್ರಾಮದ ಶ್ರೀ.ಸಿದ್ದೇಶ್ವರ ದೇವಸ್ಥಾನ ಅಭಿವೃದ್ದಿಪಡಿಸುವ ಕಾಮಗಾರಿಗಳಿಗೆ ಶಾಸಕ ಜೆ.ಟಿ‌.ಪಾಟೀಲ್ ಅವರು ಭೂಮಿಪೂಜೆ ನೆರವೇರಿಸಿದರು‌.
0
Report
Advertisement
Bagalkot587102

ಬಾದಾಮಿಯ ಶಿವಯೋಗ ಮಂದಿರದ ಹಿಂಭಾಗದ ಮಲಪ್ರಭ ಸೇತುವೆ ಮುಳುಗಡೆ

SSomashekharJun 15, 2025 15:09:38
Bagalkote, Karnataka:
ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುವ ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.ಪರಿಣಾಮ ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಹಿಂಭಾಗದಲ್ಲಿನ ಸೇತುವೆ ಮುಳುಗಡೆ ಕಂಡಿದೆ. ಬಾದಾಮಿ ತಾಲೂಕಿನ ಗೋನಾಳ,ಶಿರಬಡಿಗೆ,ಮಂಗಳೂರು, ಶಿವಯೋಗ ಮಂದಿರಕ್ಕೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ.ಸಧ್ಯ ರಸ್ತೆ ಸಂಚಾರ ಬಂದಾಗಿರುವುದರಿಂದ ಪಾದಾಚಾರಿಗಳು,ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
0
Report
Bagalkot587102

ಕಲಾದಗಿ ಗ್ರಾಮದಲ್ಲಿ ವಿವಿಧ ಹಿಂದೂಪರ ಸಂಘಟನೆಗಳಿಂದ ಆಕ್ರೋಶದ ಪ್ರತಿಭಟನೆ

SSomashekharJun 13, 2025 09:38:07
Bagalkote, Karnataka:
ಬಾಲಾಜಿ‌ ಮಂದಿರದ ಮುಂದೆ ಹಸುವಿನ ತಲೆ ಹಾಗೂ ಇನ್ನಿತರ ದೇಹದ ಅವಶೇಷಗಳನ್ನು ಇಟ್ಟಿದ್ದನ್ನ ಖಂಡಿಸಿ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿವಿಧ ಹಿಂದೂಪರ ಸಂಘಟನೆಗಳ‌ ನೇತೃತ್ವದಲ್ಲಿ ಸಕಲ ಹಿಂದೂ ಸಮಾಜ ಬಾಂಧವರು ಪ್ರತಿಭಟನೆ ನಡೆಸಿದರು.ಕಲಾದಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಯಿತು‌.ಕಳೆದ ಕೆಲವು ದಿನಗಳ ಹಿಂದೆ ಕಲಾದಗಿ ಗ್ರಾಮದ ಬಾಲಾಜಿ ಮಂದಿರದಲ್ಲಿ ದುಷ್ಕರ್ಮಿಗಳು ಹಸುವಿನ ತಲೆ ಹಾಗೂ ಇನ್ನಿತರೇ ದೇಹದ ಅವಶೇಷಗಳನ್ನು ಇಟ್ಟಿ ಹೋಗಿದ್ದರು.ಈ ಹಿನ್ನೆಲೆ ಗ್ರಾಮದಲ್ಲಿ ಆಕ್ರೋಶಗೊಂಡ ಹಿಂದೂಪರ ಸಂಘಟನೆಗಳ ಮುಖಂಡರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಡಿವೈಎಸ್ಪಿ ಗಜಾನನ ಅವರ ನೇತೃತ್ವದ ತಂಡ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದರು.
0
Report
Bagalkot587102

ಹಿರೇಮಾಗಿ ಗ್ರಾಮದಲ್ಲಿ ಜಮೀನುಗಳಿಗೆ ನುಗ್ಗಿದ ಮಲಪ್ರಭ ನದಿ ನೀರು, ರೈತರು ಕಂಗಾಲು

SSomashekharJun 13, 2025 09:34:10
Bagalkote, Karnataka:
ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಬಾಗಲಕೋಟೆ ಜಿಲ್ಲೆಯ ಹಿರೇಮಾಗಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿದೆ.ಅಪಾರ ಪ್ರಮಾಣದ ಕಬ್ಬು ಬೆಳೆ ಸೇರಿದಂತೆ ಇತರೇ ಬೆಳೆಗಳು ಜಲಾವೃತಗೊಂಡಿವೆ. ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.ಪರಿಣಾಮವಾಗಿ ಹಿರೇಮಾಗಿ ಗ್ರಾಮದಲ್ಲಿ ಮಲಪ್ರಭ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಹಾಗೂ ಹಿರೇಮಾಗಿ ಮತ್ತು ಮಾದಾಪುರ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಸೃಷ್ಠಿಯಾಗಿದೆ.
0
Report
Bagalkot587103

ವಿದ್ಯಾಗಿರಿಯಲ್ಲಿ ಮಳೆಯ ಹೊಡೆತಕ್ಕೆ ಉತುಳಿದ ಬೃಹತ್ ಮರ ,ಕಾರು ಜಖಂ

SSomashekharJun 12, 2025 11:32:52
Bagalkote, Karnataka:
ಬಾಗಲಕೋಟೆ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದಾಗಿ ಬೃಹತ್ ಮರ ಉರುಳಿ ಕಾರು ಜಖಂಗೊಂಡ ಘಟನೆ ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ನಡೆದಿದೆ.ನಗರದ ವಿದ್ಯಾಗಿರಿಯಲ್ಲಿ ಬೃಹತ್ ಮರ ಉರುಳಿ ಬಿದ್ದಿದ್ದು ಖಾಲಿ ಸೈಟನಲ್ಲಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
0
Report
Bagalkot587103

ತೆಗ್ಗಿ ಗ್ರಾಮದಲ್ಲಿ ತುಂಬಿದ ಹಿರೇಹಳ್ಖ, ಜಮೀನುಗಳಿಗೆ ನುಗ್ಗಿದ ನೀರು

SSomashekharJun 12, 2025 11:31:19
Bagalkote, Karnataka:
ಬಾಗಲಕೋಟೆ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದ ಸಮೀಪ ಹಿರೇಹಳ್ಳ ತುಂಬಿ ಹರಿಯುತ್ತಿದೆ.ಪರಿಣಾಮ ಹಳ್ಳದ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ.ಈಗತಾನೆ ಜಮೀನುಗಳು ಬಿತ್ತನೆಗೊಂಡಿದ್ದು,ಇನ್ನು ಕೆಲವೆಡೆ ಬಿತ್ತನೆಗೆ ಭೂಮಿ ಹದಗೊಳಿಸಲಾಗುತ್ತಿದೆ. ಸಧ್ಯ ಯಾವುದೇ ಬೆಳೆಹಾನಿಯಿಲ್ಲ. ಇನ್ನು ಮುಂಗಾರು ಮಳೆ ಸಕಾಲಕ್ಕೆ ಸುರಿಯುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
0
Report
Bagalkot587103

ಮಳೆಯ ಹೊಡೆತಕ್ಕೆ ಮುಳುಗಡೆಕಂಡ ಗುಳೇದಗುಡ್ಡದ ಪರ್ವತಿ ಸೇತುವೆ

SSomashekharJun 12, 2025 11:30:14
Bagalkote, Karnataka:
ಬಾಗಲಕೋಟೆ ಜಿಲ್ಲೆಯಾದ್ಯಂತ ರಾತ್ರಿಯಿಡಿ ಸುರಿದ ಮಳೆಯಿಂದಾಗ ಬೆಣ್ಣೆ ಹಳ್ಳದ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬಂದ ಪರಿಣಾಮವಾಗಿ ಗುಳೇದಗುಡ್ಡ ಪಟ್ಟಣದ ಪರ್ವತಿ ಸೇತುವೆ ಹಾಗೂ ಆಸಂಗಿ ಗ್ರಾಮಕ್ಕೆ ತೆರಳುವ ಸೇತುವೆ ಸಂಪೂರ್ಣ ಜಲಾವೃತಗೊಂಡಿವೆ. ಗುಳೇದಗುಡ್ಡ ಪಟ್ಟಣದಿಂದ ಆಸಂಗಿ ಗ್ರಾಮಕ್ಕೆ ತೆರಳುವ ದರ್ಗಾ ಹತ್ತಿರದ ಸೇತುವೆ ಹಾಗೂ ಪಟ್ಟಣದಿಂದ ಪರ್ವತಿಗೆ ತೆರಳುವ ಸೇತುವೆಯ ಮೇಲೆ ಅಪಾರ ಪ್ರಮಾಣದಲ್ಲಿ ಮಳೆ ಮತ್ತು ಹಳ್ಳದ ನೀರು ಹರಿದು ಬಂದ ಪರಿಣಾಮವಾಗಿ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದಾಗಿ ಪರ್ವತಿ ಹಾಗೂ ಆಸಂಗಿ ಕಟಗಿನಹಳ್ಳಿ ಗ್ರಾಮಗಳಿಂದ ಪಟ್ಟಣಕ್ಕೆ ಆಗಮಿಸುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲತೆ ಉಂಟಾಗಿದೆ. ಗುಳೇದಗುಡ್ಡದಿಂದ ಆಸಂಗಿ ಲಾಯದಗುಂದಿ ಗ್ರಾಮಕ್ಕೆ ತೆರಳುವ ಸೇತುವೆ ಸಂಪೂರ್ಣ ಮಳೆ ನೀರಿನಿಂದ ಜಲಾವೃತಗೊಂಡ ನಿಮಿತ್ತ ಪಟ್ಟಣದ ಪುರಸಭೆ ಅತ್ತ ಸೇತುವೆ ಮೇಲೆ ಯಾರೂ ತೆರಳದಂತೆ ಬ್ಯಾರಿಕೇಡ್ ಅಳವಡಿಸಿದ್ದಾರೆ.
0
Report
Bagalkot587103

ನವನಗರದಲ್ಲಿ ಶಾಲಾ ವಿದ್ಯಾರ್ಥಿಗಳನ್ನ ಸ್ವಾಗತಿಸುತ್ತಿದೆ ಚರಂಡಿ ನೀರು

SSomashekharJun 12, 2025 11:29:02
Bagalkote, Karnataka:
ಬಾಗಲಕೋಟೆ ನಗರಸಭೆಯ ನಿರ್ಲಕ್ಷತನದಿಂದ ಚೇಂಬರಗಳು ಬ್ಲಾಕ್ ಆದ ಪರಿಣಾಮ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಚರಂಡಿ ನೀರಿನಲ್ಲೆ ನೀರಿನಲ್ಲೇ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ.ಬಾಗಲಕೋಟೆಯ ನವನಗರದ ಸೆಕ್ಟರ್ ನಂ. 46 ರಲ್ಲಿನ ಕನ್ನಡ ಹಿರಿಯ ಗಂಡುಮಕ್ಕಳ ಶಾಲೆಯ ಗೇಟ ಬಳಿ ಚೇಂಬರ್ ಬ್ಲಾಕ್ ಅಗಿದೆ.ಪರಿಣಾಮ ಚರಂಡಿ ನೀರು ರಸ್ತೆ ಸೇರುತ್ತಿದ್ದು,ಶಾಲಾ ವಿದ್ಯಾರ್ಥಿಗಳು ಚರಂಡಿ ನೀರನ್ನೇ ತುಳಿದು ಶಾಲೆ ಪ್ರವೇಶಿಸಬೇಕಾಗಿದೆ. ವಾಹನ ಸವಾರರು,ಪಾದಾಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
0
Report
Bagalkot587103

ಜಮಖಂಡಿಯಲ್ಲಿ ಯಶಸ್ವಿಯಾಗಿ ಜರುಗಿದ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ

SSomashekharJun 12, 2025 11:27:27
Bagalkote, Karnataka:
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಯಶಸ್ವಿಯಾಗಿ ಜರುಗಿದ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ. ಜಮಖಂಡಿ ತಾಲೂಕು ಕಾನೂನು ಸೇವಾ ಸಮಿತಿ,ನ್ಯಾಯವಾದಿಗಳ ಸಂಘ ಹಾಗೂ ತಾಲೂಕಾಡಳಿತ ಮತ್ತು ಬಾಲಿಕೆಯರ ಸರಕಾರಿ ಪದವಿ ಪೂರ್ವ ಪ್ರೌಡ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಸರ್ಕಾರಿ ಬಾಲಿಕೆಯರ ಪ್ರೌಢಶಾಲೆಯಲ್ಲಿ ನಡೆದ ಈ ಕಾರ್ಯಕ್ರಮವನ್ನ ತಾಲೂಕು ಕಾನೂನು ಸೇವಾ ಸಮಿತಿ ಅದ್ಯಕ್ಷರು ಹಾಗೂ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ರಾಜಶೇಖರ ಎಸ್ ಹರಸೂರ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಾಲಕೀಯರ ಸರ್ಕಾರಿ ಪ.ಪೂ. ಕಾಲೇಜು, ಪ್ರೌಢ ವಿಭಾಗದ ಪ್ರಾಚಾರ್ಯರ ಮಹಾಂತೇಶ ನರಸನಗೌಡ, ಮುಖ್ಯ ಅತಿಥಿಗಳಾದ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ಅರ್ಶದ ಎ.ಅನ್ಸಾರಿ,ನ್ಯಾಯವಾದಿಗಳ ಸಂಘದ ಉಪಾದ್ಯಕ್ಷ ಎಸ್.ಬಿ.ಕಾಳೆ,ನ್ಯಾಯವಾದಿ ಎಲ್.ಎಲ್ ಸವದಿ,ಕಾರ್ಮಿಕ ನೀರಿಕ್ಷಕ ಪಿ.ವಿ.ಮಾವರಕರ
0
Report
Bagalkot587103

ಗುಳೇದಗುಡ್ಡದಲ್ಲಿ ಪೆಟ್ತೋಲ್ ಬಂಕ್ ಗೆ ನುಗ್ಗಿದ ಮಳೆ ನೀರು

SSomashekharJun 12, 2025 11:26:10
Bagalkote, Karnataka:
ಬಾಗಲಕೋಟೆ ಜಿಲ್ಲೆಯಾದ್ಯಂತ ರಾತ್ರಿಯಿಡಿ ಸುರಿದ‌ ಮಳೆಯಿಂದಾಗಿ ಗುಳೇದಗುಡ್ಡ ಪಟ್ಟಣದ ಪೆಟ್ರೋಲ್ ಬಂಕ್ ಗೆ ನೀರು ನುಗ್ಗಿದೆ. ಪಟ್ಟಣದ ಬಸ್ ನಿಲ್ದಾಣ ಹತ್ತಿರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ದುತ್ತರಗಿ ಪೆಟ್ರೋಲ್ ಬಂಕ್ ಆವರಣದ ತುಂಬೆಲ್ಲ ಮಳೆ ನೀರು ಆವರಿಸಿಕೊಂಡು ಬೈಕ್ ,ಕಾರ್ ಜೊತೆ ಇತರೆ ವಾಹನಗಳಿಗೆ ಪೆಟ್ರೋಲ್ ಡೀಸೆಲ್ ತುಂಬಿಸಿಕೊಳ್ಳಲು ಗ್ರಾಹಕರಿಗೆ ಬಹಳಷ್ಟು ಅಡೆತಡೆ ಉಂಟು ಮಾಡಿದ ಪ್ರಸಂಗ ನಡೆಯಿತು. ಗುಳೇದಗುಡ್ಡ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳದಲ್ಲಿ ಭಾರಿ ಪ್ರಮಾಣದ ನೀರು ಹರಿದು ಬಂದಿದೆ, ಹಳ್ಳದ ನೀರು ಪೆಟ್ರೋಲ್ ಬಂಕ್'ಗೆ ನುಗ್ಗಿದೆ.
0
Report
Bagalkot587101

KARNATAKA - ಮಹಿಳಾ ಸಾಮೂಹಿಕ ಶೌಚಾಲಯದಲ್ಲಿ ನವಜಾತ ಶಿಶು ಎಸೆದು ಹೋಗಿರುವ ಪಾಪಿಗಳು

SSomashekharJun 10, 2025 06:50:21
Bagalkote, Karnataka:
ಮಹಿಳಾ ಸಾಮೂಹಿಕ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಡೆದಿದೆ. ಮಹಿಳಾ ಸಾಮೂಹಿಕ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಯಾರೋ ಪಾಪಿಗಳು ಶೌಚಾಲಯದಲ್ಲಿ ನವಜಾತ ಶಿಶುವನ್ನ ಎಸೆದು ಹೋಗಿದ್ದಾರೆಂದು ತಿಳಿದು ಬಂದಿದೆ.ಪಾಪಕೃತ್ಯ ಮಾಡಿದವರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಗ್ರಾಮೀಣ ಪೊಲಿಸ್ ಠಾಣೆ ಪಿ.ಎಸ್.ಐ ಗಂಗಾಧರ ಪೂಜೇರಿ, ಎ.ಎಸ್.ಐ ಕೆ.ಪಿ.ಸವದತ್ತಿ ಹಾಗೂ ಪೋಲಿಸ್ ತಂಡ ಆಗಮಿಸಿ ಪರಿಶೀಲನೆ ನಡೆಸಿ ಶವ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಎಮ್.ಆರ್.ಮೇತ್ರಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ಎ.ಸಾರವಾನ ಅವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0
Report
Bagalkot587102

Karnataka News- ರಬಕವಿಯಲ್ಲಿ ಎರಡು ಸಾವಿರ ರೂಪಾಯಿಗಳಿಗಾಗಿ ಹೊಟ್ಟೆಗೆ ಕತ್ತರಿ ಇರಿತ

SSomashekharJun 10, 2025 05:44:14
Bagalkote, Karnataka:

ಎರಡು ಸಾವಿರ ರೂಪಾಯಿಗಾಗಿ ನಡೆದ ಜಗಳದಲ್ಲಿ ವ್ಯಕ್ತಿಯೋರ್ವನ ಹೊಟ್ಟೆಗೆ ಕತ್ತರಿ ತಾಗಿದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ನಗರದ ಕುಂಚನೂರ್ ಕಾಂಪ್ಲೆಕ್ಸ್ ಬಳಿ ಜರುಗಿದೆ.ಗಾಯಗೊಂಡ ವ್ಯಕ್ತಿಯನ್ನ ಶ್ರೀಧರ ಟರ್ಕಿ(39) ಎಂದು ಗುರ್ತಿಸಲಾಗಿದೆ. ಗಾಯಾಳುವನ್ನ ಜಮಖಂಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ವೃತ್ತಿಯಲ್ಲಿ ಟೇಲರ್ ಆಗಿರುವ ಕುಮಾರ ಬಕ್ರೆ ಅವರು ಹೊಟ್ಟೆಗೆ ಕತ್ತರಿ ತಾಗಿಸಿದ್ದಾರೆ ಎಂದು ತಿಳಿದುಬಂದಿದೆ.ಬಾಕಿ ಹಣದ ವಿಚಾರವಾಗಿ ವಾಗ್ವಾದ ನಡೆದು ಕತ್ತರಿ ಇತಿತವಾಗಿದೆ.ಕುಮಾರ್ ಎನ್ನುವ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ

0
Report
Bagalkot587103

ಪ್ರದಾನಿ ಮೋದಿ ಅಪಮಾನಿಸಿ ಪೋಸ್ಟ್: ಯುವಕನನ್ನು ವಶಕ್ಕೆ ಪಡೆದ ಕಲಾದಗಿ ಪೊಲೀಸರು

SSomashekharMay 22, 2025 13:25:36
Bagalkote, Karnataka:
ಬಾಗಲಕೋಟೆ‌ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಸರಿ ಸಮವಸ್ತ್ರದಲ್ಲಿ ಕೈದಿಯಂತೆ ಅಪಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಟ್ಟಿದ್ದ ಯುವಕನ ಮೇಲೆ ಬಾಗಲಕೋಟೆ ಜಿಲ್ಲೆಯ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಹಮ್ಮದ್ ಅಜಿಜ್ ಅಬ್ದುಲ್ ಸಾಬ್ ರೋಣ(೨೭) ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಕೈದಿ ವೇಷದಲ್ಲಿ ಹಾಗೂ ಎಐಎಂಐಎಂ ಮುಖ್ಯಸ್ಥ ಅಸದುದ್ಧೀನ್ ಒವೈಸಿಯನ್ನು ಪೊಲೀಸ್ ವೇಷದಲ್ಲಿ ಬಿಂಬಿಸುವ ಫೋಟೋ ಹಾಕಿದ್ದ. ಇದನ್ನು ಗಮನಿಸಿದ ಪೊಲೀಸರು ಆತನ ಮೇಲೆ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
0
Report
Bagalkot587103

Bagalkote: ವಿಜಯಪುರ-ಬೆಂಗಳೂರು ಸೂಪರ್ ಫಾಸ್ಟ್ ರೈಲ್ವೆ ಒದಗಿಸಿ:ಎಂ.ಎಲ್.ಸಿ. ಪೂಜಾರ್ ಕೇಂದ್ರ ಸಚಿವರಿಗೆ ಮನವಿ

SSomashekharMay 22, 2025 13:24:01
Bagalkote, Karnataka:
ವಿಜಯಪುರದಿಂದ ಬೆಂಗಳೂರಿನ ವರೆಗೆ ಸೂಪರ ಫಾಸ್ಟ್ ಎಕ್ಸಪ್ರೆಸ್ ರೈಲ್ವೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬಾಗಲಕೋಟೆಯಲ್ಲಿಂದು ಎಂ.ಎಲ್.ಸಿ ಪಿ.ಹೆಚ್‌.ಪೂಜಾರ್ ಅವರು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು. ಬಾಗಲಕೋಟೆ ನಗರಕ್ಕೆ ಪುನರಾಭಿವೃದ್ಧಿಗೊಂಡ ರೈಲು ನಿಕ್ದಾಣದ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ರೈಲ್ವೆ ಸಚಿವ ವೀ.ಸೋಮಣ್ಣನವರನ್ನ ಭೇಟಿಯಾಗಿ ಮನವಿ ಸಲ್ಲಿಸಿದರು.
0
Report
Bagalkot587103

Bagalkote: ನಮ್ಮ ಪಾಕಿಸ್ತಾನ ಹೇಳಿಕೆಗೆ ಕೇಂದ್ರ ಸಚಿವ ವಿ.ಸೋಮಣ್ಣ ನಯವಾಗಿ ತಿರುಗೇಟು

SSomashekharMay 22, 2025 13:22:58
Bagalkote, Karnataka:
ನಮ್ಮ‌ ಪಾಕಿಸ್ತಾನ ಎಂದ ಮಲ್ಲಿಕಾರ್ಜುನ ಖರ್ಗೆ ವಿಚಾರ,ಬಾಗಲಕೋಟೆ ನಗರದಲ್ಲಿ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿರಾಶೆಯಾಗಿ ಈ ರೀತಿ ಹೇಳಿದ್ದಾರೆ‌.ಹಿರಿಯ ನಾಯಕರು ಈ ರೀತಿ ಯಾಕೆ ಹೇಳಿದ್ದಾರೆ ಗೊತ್ತಿಲ್ಲ,ಯಾರನ್ನ ಮೆಚ್ಚಿಸೋಕೆ ಹೇಳಿದ್ದಾರೆ ಗೊತ್ತಿಲ್ಲ.ಆದರೆ ದೇಶ ಮೊದಲು ,ದೇಶ ಇದ್ದರೆ ನಾವು ಎಂದು ತಿರುಗೇಟು ನೀಡಿದ್ದಾರೆ.
0
Report
Bagalkot587103

Bagalkote: ಬೀಳಗಿ ಪಟ್ಟಣದ ತಾಲೂಕ ಆಸ್ಪತ್ರೆಯಲ್ಲಿ ವೈದ್ಯರು,ಸಿಬ್ಬಂದಿಗಳ ಕೊರತೆ: ರೋಗಿಗಳ ಪರದಾಟ

SSomashekharMay 22, 2025 13:21:50
Bagalkote, Karnataka:

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಯ ಕೊರತೆಯಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಕೂಗು ಕೇಳಿ ಬಂದಿದೆ.ನಿತ್ಯ ಅಸ್ಪತ್ರೆಗೆ ಬರುವ ರೋಗಿಗಳು ಸರಿಯಾದ ಚಿಕಿತ್ಸೆ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈಗ ಬೀಳಗಿ ಪಟ್ಟಣದಲ್ಲಿ ರೈತ ಸಂಘದ ಅಧ್ಯಕ್ಚ ಗಂಗಪ್ಪ ಮೇತ್ರಿ ಅವರು ಆರೋಪ ಮಾಡಿದ್ದಾರೆ.ನಿತ್ಯ ಸುಮಾರು ಎಂಟನೂರು ಜನ ರೋಗಿಗಳು ತಾಲೂಕಾ ಆಸ್ಪತ್ರೆಗೆ ಬರ್ತಾರೆ,ಆದ್ರೆ ಇಲ್ಲಿ ಸಿಬ್ಬಂದಿ ಕೊರತೆ ಇರೋದರಿಂದ ಹೆಸರು ನೋಂದಾಯಿಸಲು ಗಂಟೆಗಟ್ಟಲೇ ಕಾಯಬೇಕು,ಇನ್ನು ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್ ಅವರ ಅವಶ್ಯಕತೆಯಿದ್ದು ಇದು ವರೆಗೂ ಸರ್ಜನ್ ಕೂಡ ಲಭ್ಯವಾಗಿಲ್ಲ.ಇರುವ ಬೆರಳಣಿಕೆಯಷ್ಟು ಸಿಬ್ಬಂದಿಯಿಂದ ರೋಗಿಗಳಿಗೆ ಸೂಕ್ತ ಸೇವೆ ಒದಗುತ್ತಿಲ್ಲ ಎಂದು ಆರೋಪಿಸಿದ್ದಾರೆ.ಪಂಚ ಗ್ಯಾರಂಟಿ ಭಾಗ್ಯಗಳನ್ನ ಕೊಟ್ಟಿರುವ ಸರ್ಕಾರ ಅರೋಗ್ಯ ಭಾಗ್ಯವನ್ನು ಕೂಡ ಕೊಡಬೇಕು.ಕೃಷ್ಣ ಮೇಲ್ದಂಡೆ ಯೋಜನೆಯಿಂದ ಮುಳುಗಡೆ ಕಂಡ ಸಂತ್ರಸ್ತರು, ಕೂಲಿಕಾರ್ಮಿಕರು,ಗರ್ಭಿಣಿ ಮ.

0
Report
Bagalkot587103

Bagalkote: ಲೋಕಾರ್ಪಣೆಗೊಂಡ ಬಾಗಲಕೋಟೆ ನಗರದ ರೈಲು ನಿಲ್ದಾಣ,ವರ್ಚುವಲ್ ಪ್ರಧಾನಿ ಮೋದಿ ಉದ್ಘಾಟನೆ

SSomashekharMay 22, 2025 09:57:03
Bagalkote, Karnataka:

ಬಾಗಲಕೋಟೆ ನಗರದಲ್ಲಿಂದು ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಪುನರಾಭಿವೃದ್ಧಿಗೊಂಡ ಬಾಗಲಕೋಟೆ ನಗರದ ರೈಲು ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಹಳೆ ಬಾಗಲಕೋಟೆ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ನಗರದ ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣವನ್ನು ಉದ್ಘಾಟನೆಗೊಳಿಸಿದರು. ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್,ಮಾಜಿ ಡಿಸಿಎಂ ಚಿತ್ರದುರ್ಗದ ಹಾಲಿ ಸಂಸದ ಗೋವಿಂದ ಕಾರಜೋಳ,ಮಾಜಿ ಸಚಿವ ಮುರಗೇಶ ನಿರಾಣಿ,ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ,ಎಂ.ಎಲ್.ಸಿ ಪಿ.ಹೆಚ್.ಪೂಜಾರ್ ಅವರು ಸೇರಿಸಂತೆ ಸ್ಥಳೀಯ ಜನಪ್ರತಿನಿಧಿಗಳು,ರೈಲ್ವೆ ಇಲಾಖೆ ಅಧಿಕಾರಿಗಳು,ವಿವಿಧ ಇಲಾಖೆಗಳು ಕಾರ್ಯಕ್ರಮದಲ್ಲಿ ಭಾಗಿಯಾದ್ರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರು,ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಕೂಡ ಮೋದಿ ಸರ್ಕಾರದ ಅವಧಿಯಲ್ಲಿ ಏಳು ಲಕ್ಷ ಐ.

0
Report
Bagalkot587103

Bagalkot: ನಮ್ಮ ಪಾಕಿಸ್ತಾನ ಹೇಳಿಕೆಗೆ ತಿರುಗೇಟು ಕೊಟ್ಟ ಮಾಜಿ ಡಿಸಿಎಂ ಗೋವಿಂದ ಕಾರಜೋಳ

SSomashekharMay 22, 2025 09:52:21
Bagalkote, Karnataka:

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ಪಾಕಿಸ್ತಾನ ಎಂದು ಭಾಷಣ ಮಾಡಿದ‌ ವಿಚಾರಕ್ಕೆ, ಬಾಗಲಕೋಟೆ ನಗರದಲ್ಲಿ ಮಾಜಿ ಡಿಸಿಎಂ ಸಂಸದ ಗೋವಿಂದ ಕಾರಜೋೞ ತಿರುಗೇಟು ನೀಡಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ಅವರು, ಬಹುಶಃ ಕಾಂಗ್ರೆಸ್ ನಾಯಕರ ನೆಂಟರೆಲ್ಲ ಪಾಕಿಸ್ತಾನದಲ್ಲಿ ಇದ್ದಂಗೆ ಕಾಣುತ್ತೆ ಎಂದು ಲೇವಡಿ ಮಾಡಿದ್ದಾರೆ. ಅದಕ್ಕಾಗಿ‌ ನಮ್ಮ ಪಾಕಿಸ್ತಾನ ಅಂತ ಸಂಬೋಧನೆ ಮಾಡ್ತಾ ಇದ್ದಾರೆ ಎಂಸು ಕಿಡಿಕಾರಿದರು. ನೋಡಿ ನಮ್ಮವೈರಿ ರಾಷ್ಟ್ರ,ನಮ್ಮ ಶತ್ರು ರಾಷ್ಟ್ರದ ಬಗ್ಗೆ ಯಾವ ಶಬ್ದಗಳಲ್ಲಿ ಮಾತಾಡಬೇಕೊ ಅದನ್ನೇ ಮಾತಾಡಬೇಕು. ನಮ್ಮ ಪಾಕಿಸ್ತಾನ ಅಂತ ಹೇಳಿದ್ರೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.ಯಾರೂ ಕೂಡ ಆ ಮಾತನ್ನ ಹೇಳಬಾರದು,ನಾವು ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಕಳೆದ 1947 ರಿಂದ ಇಲ್ಲಿಯವರೆಗೂ ಯುದ್ಧ ಮಾಡುತ್ತಲೇ ಬಂದಿದ್ದೇವೆ, ನಮಗೆ ಸಾಕಷ್ಟು ನಷ್ಟ ಪಾಕಿಸ್ತಾನದಿಂದ ಆಗಿದೆ. ಈವತ್ತು ಪಾಕಿಸ್ತಾನ ಉಗ್ರರನ್ನ ಪೋಷಣೆಮಾಡ್ತೆ,ಪಾಕಿಸ್ತಾನವನ್ನು ಒಬ್ಬ ಹಿರಿಯ ನಾಗರಿಕರಾಗಿ ಖಂಡಿಸಬೇಕಿತ್ತು.ನಮ್ಮ ಪಾಕಿಸ್ತಾನ ಅಂತ ಶಬ್ದ ಬಳಸಿದ್ದನ್.

0
Report
Bagalkot587102

Bagalkote: ಸರ್ಕಾರದ ಆದೇಶದಂತೆ ಸಲಹಾ ಸಮೀತಿ ರಚಿಸಿದ ಕಲಾದಗಿ ಹೆಸ್ಕಾಂ ಶಾಲೆ

SSomashekharMay 21, 2025 12:53:14
Bagalkote, Karnataka:
ಬಾಗಲಕೋಟ ತಾಲೂಕಿನ ಕಲಾದಗಿಯ ಹೆಸ್ಕಾಂ ಕಚೇರಿಯಲ್ಲಿ ಸರಕಾರದ ಆದೇಶದಂತೆ ಗ್ರಾಹಕರ ಸಲಹಾ ಸಮಿತಿ ರಚನೆ ಮಾಡಿಲಾಯಿತು. ನಂತರ ಸಭೆಯನ್ನ ನಡೆಸಲಾಯಿತು. ಕಲಾದಗಿ ಹೆಸ್ಕಾಂ ಕಚೇರಿಯ ಶಾಖಾಧಿಕಾರಿ ಜಿ.ಬಿ. ಛಬ್ಬಿ ಅವರು ಅಧ್ಯಕ್ಚತೆಯನ್ನ ವಹಿಸಿದ್ದರು . ಸಲಾಹ ಸಮಿತಿಯ ಸದಸ್ಯರುಗಳಾದ ಭೀಮಪ್ಪ ನಾವಲಗಿ ಪರಮಾನಂದ ಮಂಟೂರ್, ಜಾನಕಿ ಪಾಟೀಲ್, ಕರಿಯಪ್ಪ ಪೂಜಾರಿ, ನೂರಮ್ಮ ಪೀರಜಾದೆ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನ ಹಾಗೂ ಸ್ವಾಗತವನ್ನು ಸಂಗಣ್ಣ ಕೆಂಚಪ್ಪಗೋಳ ನೆಡೆಸಿಕೂಟ್ಟರು.ಒಟ್ಟಾರೆ ಸಲಹಾ ಸಮೀತಿಯ ರಚನೆ ಹಾಗೂ ಸಭೆ ಯಶಸ್ವಿಯಾಗಿ ಜರುಗಿತು.
0
Report
Bagalkot587102

Bagalkote - ಜಮಖಂಡಿಯಲ್ಲಿ ಒಳಮೀಸಲಾತಿ ಸಮೀಕ್ಷೆ ಪರಶೀಲಿಸಿದ ಎಸಿ ಶ್ವೇತಾ ಬೀಡಿಕರ್

SSomashekharMay 21, 2025 12:51:57
Bagalkote, Karnataka:
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಉಪವಿಭಾಗಾ ಧಿಕಾರಿ ಶ್ವೇತಾ ಬೀಡಿಕರ್ ಅವರು ಒಳಮೀಸಲಾತಿ ವಗಿ೯ಕರಣ ಸಮೀಕ್ಷೆಯ ಗಣತಿ ಕಾರ್ಯವನ್ನು ಪರಿಶೀಲನೆ ಮಾಡಿದರು. ಜಮಖಂಡಿ ನಗರದ ಚೌಡಯ್ಯಾನಗರ,ಶಿಕ್ಕಲಗಾರ ಕಾಲೋನಿ,ಭಂಜತ್ರಿಗಲ್ಲಿ ಸೇರಿದಂತೆ ನಗರದ ವಿವಿಧ ಬಡಾವಣೆಗಳಿಗೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಭೇಟಿ ನಿಡಿ ಪರಶೀಲಿಸಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಜಗದೇವ ಪಾಸೋಡೆ,ಕಂದಾಯ ನಿರಿಕ್ಷಕ ಮಂಜುನಾಥ ದೋಡಮನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿರಿದ್ದರು
0
Report
Bagalkot587102

Bagalkote: ಜಿಲ್ಲೆಯಲ್ಲಿ ಮುಂದುವರೆದ ಮಳೆ,ಕುಸಿದು ಬಿದ್ದ ಮನೆ

SSomashekharMay 21, 2025 12:51:24
Bagalkote, Karnataka:
ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆ ಹಿನ್ನೆಲೆ ಮನೆಯ ಮೇಲ್ಛಾವಣಿ ಕುಸಿದ ಘಟನೆ ಬಾಗಲಕೋಟೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ನಡೆದಿದೆ.ಮನೆಯ ಮಾಲೀಕರು ಬೇರೆ ಊರಿಗೆ ಹೋದ ಹಿನ್ನೆಲೆ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.ಯಲ್ಲನಗೌಡ ಗೌಡರ್ ಅವರಿಗೆ ಸೇರಿದ ಮನೆ ಇದಾಗಿದೆ. ಅವರು ನಿತ್ಯ ಮಲಗುತ್ತಿದ್ದ ಜಾಗದಲ್ಲೇ ಮೇಲ್ಛಾವಣಿ ಕುಸಿದು ಬಿದ್ದಿದ್ದು,ಪರಿಣಾಮ ಮನೆಯಲ್ಲಿನ ಸಾಮಾನುಗಳು ಛಿದ್ರ ಛಿದ್ರವಾಗಿವೆ. ಮಣ್ಣಿನ ಜಂತಿ ಮನೆ ಆದ್ದರಿಂದ ನಿರಂತರ ಮಳೆಗೆ ಕುಸಿತ ಕಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರ ಮಳೆ ಸಯರಿಯುತ್ತಿದ್ದು ಮಣ್ಣಿನ ಮನೆಯಲ್ಲಿ ವಾಸಿಸುವವರಿಗೆ ಆತಂಕತ ಶುರುವಾಗಿದೆ.
0
Report
Bagalkot587102

Bagalkote: ಜಮಖಂಡಿ ನಗರದ ಕ್ಷೇತ್ರ ಶಿಕ್ಷಣಾಧಿಜಾರಿ ಕಾರ್ಯಾಲಯದಲ್ಲಿ ಭಯೋತ್ಪಾದನಾ ವಿರೋಧಿ ದಿನ ಆಚರಣೆ

SSomashekharMay 21, 2025 12:49:39
Bagalkote, Karnataka:

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ನೇತೃತ್ವದಲ್ಲಿ ಭಯೋತ್ಪಾದನಾ ವಿರೋಧಿ ದಿನದ ಪ್ರಮಾಣ ವಚನ ಮಂಡಿಸುವ ಮೂಲಕ ಭಯೋತ್ಪಾದನಾ ವಿರೋಧಿ ದಿನ ಆಚರಣೆ ಮಾಡಲಾಯಿತು ಇದೆ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಮಾತನಾಡಿ ಸರ್ಕಾರದ ಆದೇಶದಂತೆ ಹಾಗೂ ಜಿಲ್ಲಾಧಿಕಾರಿಗಳ ನಿರ್ದೆಶನದ ಮೇರೆಗೆ ನಮ್ಮ ಕಾರ್ಯಾಲಯದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ನಿಟ್ಟಿನಲ್ಲಿ ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮೆಲ್ಲ ಶಕ್ತಿ ಸಾಮರ್ಥ್ಯದಿಂದ ಎದುರಿಸುತ್ತೇವೆ ಎಂದು ಈ ಮೂಲಕ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡಿದ್ದೆವೆ ಎಂದರು ಇನ್ನೂ ಇದೆ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದ್ದಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

0
Report
Bagalkot587102

Bagalkote: ಮುಧೋಳದಲ್ಲಿ ಎಲ್ಲರ ಗಮನ ಸೆಳೆದ ತಿರಂಗಾ ಯಾತ್ರೆ

SSomashekharMay 21, 2025 12:46:49
Bagalkote, Karnataka:
ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದ ತಿರಂಗಾ ಯಾತ್ರೆ ಗಮನ ಸೆಳೆಯಿತು.ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ಯಾತ್ರೆ, ಗಾಂಧಿ ಸರ್ಕಲ್, ಶಿವಾಜಿ ಸರ್ಕಲ್ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮಾರೋಪಗೊಂಡಿತು. ಯಾತ್ರೆಯಲ್ಲಿ ಮಾಜಿ ಸೈನಿಕರು, ವೈದ್ಯರು, ಮಹಿಳೆಯರು ವಿದ್ಯಾರ್ಥಿಗಳು,ಜನಪ್ರತಿನಿಧಿಗಳು,ಸ್ಥಳೀಯ ಪ್ರಮುಖರು,ಬಿಜೆಪಿಗರು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು.
0
Report