Back
Somashekhar
Bagalkot587103blurImage

ಪ್ರದಾನಿ ಮೋದಿ ಅಪಮಾನಿಸಿ ಪೋಸ್ಟ್: ಯುವಕನನ್ನು ವಶಕ್ಕೆ ಪಡೆದ ಕಲಾದಗಿ ಪೊಲೀಸರು

SomashekharSomashekharMay 22, 2025 13:25:36
Bagalkote, Karnataka:
ಬಾಗಲಕೋಟೆ‌ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಸರಿ ಸಮವಸ್ತ್ರದಲ್ಲಿ ಕೈದಿಯಂತೆ ಅಪಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಟ್ಟಿದ್ದ ಯುವಕನ ಮೇಲೆ ಬಾಗಲಕೋಟೆ ಜಿಲ್ಲೆಯ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಹಮ್ಮದ್ ಅಜಿಜ್ ಅಬ್ದುಲ್ ಸಾಬ್ ರೋಣ(೨೭) ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಕೈದಿ ವೇಷದಲ್ಲಿ ಹಾಗೂ ಎಐಎಂಐಎಂ ಮುಖ್ಯಸ್ಥ ಅಸದುದ್ಧೀನ್ ಒವೈಸಿಯನ್ನು ಪೊಲೀಸ್ ವೇಷದಲ್ಲಿ ಬಿಂಬಿಸುವ ಫೋಟೋ ಹಾಕಿದ್ದ. ಇದನ್ನು ಗಮನಿಸಿದ ಪೊಲೀಸರು ಆತನ ಮೇಲೆ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
0
Report
Bagalkot587103blurImage

Bagalkote: ವಿಜಯಪುರ-ಬೆಂಗಳೂರು ಸೂಪರ್ ಫಾಸ್ಟ್ ರೈಲ್ವೆ ಒದಗಿಸಿ:ಎಂ.ಎಲ್.ಸಿ. ಪೂಜಾರ್ ಕೇಂದ್ರ ಸಚಿವರಿಗೆ ಮನವಿ

SomashekharSomashekharMay 22, 2025 13:24:01
Bagalkote, Karnataka:
ವಿಜಯಪುರದಿಂದ ಬೆಂಗಳೂರಿನ ವರೆಗೆ ಸೂಪರ ಫಾಸ್ಟ್ ಎಕ್ಸಪ್ರೆಸ್ ರೈಲ್ವೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬಾಗಲಕೋಟೆಯಲ್ಲಿಂದು ಎಂ.ಎಲ್.ಸಿ ಪಿ.ಹೆಚ್‌.ಪೂಜಾರ್ ಅವರು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು. ಬಾಗಲಕೋಟೆ ನಗರಕ್ಕೆ ಪುನರಾಭಿವೃದ್ಧಿಗೊಂಡ ರೈಲು ನಿಕ್ದಾಣದ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ರೈಲ್ವೆ ಸಚಿವ ವೀ.ಸೋಮಣ್ಣನವರನ್ನ ಭೇಟಿಯಾಗಿ ಮನವಿ ಸಲ್ಲಿಸಿದರು.
0
Report
Bagalkot587103blurImage

Bagalkote: ನಮ್ಮ ಪಾಕಿಸ್ತಾನ ಹೇಳಿಕೆಗೆ ಕೇಂದ್ರ ಸಚಿವ ವಿ.ಸೋಮಣ್ಣ ನಯವಾಗಿ ತಿರುಗೇಟು

SomashekharSomashekharMay 22, 2025 13:22:58
Bagalkote, Karnataka:
ನಮ್ಮ‌ ಪಾಕಿಸ್ತಾನ ಎಂದ ಮಲ್ಲಿಕಾರ್ಜುನ ಖರ್ಗೆ ವಿಚಾರ,ಬಾಗಲಕೋಟೆ ನಗರದಲ್ಲಿ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿರಾಶೆಯಾಗಿ ಈ ರೀತಿ ಹೇಳಿದ್ದಾರೆ‌.ಹಿರಿಯ ನಾಯಕರು ಈ ರೀತಿ ಯಾಕೆ ಹೇಳಿದ್ದಾರೆ ಗೊತ್ತಿಲ್ಲ,ಯಾರನ್ನ ಮೆಚ್ಚಿಸೋಕೆ ಹೇಳಿದ್ದಾರೆ ಗೊತ್ತಿಲ್ಲ.ಆದರೆ ದೇಶ ಮೊದಲು ,ದೇಶ ಇದ್ದರೆ ನಾವು ಎಂದು ತಿರುಗೇಟು ನೀಡಿದ್ದಾರೆ.
0
Report
Bagalkot587103blurImage

Bagalkote: ಬೀಳಗಿ ಪಟ್ಟಣದ ತಾಲೂಕ ಆಸ್ಪತ್ರೆಯಲ್ಲಿ ವೈದ್ಯರು,ಸಿಬ್ಬಂದಿಗಳ ಕೊರತೆ: ರೋಗಿಗಳ ಪರದಾಟ

SomashekharSomashekharMay 22, 2025 13:21:50
Bagalkote, Karnataka:

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಯ ಕೊರತೆಯಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಕೂಗು ಕೇಳಿ ಬಂದಿದೆ.ನಿತ್ಯ ಅಸ್ಪತ್ರೆಗೆ ಬರುವ ರೋಗಿಗಳು ಸರಿಯಾದ ಚಿಕಿತ್ಸೆ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈಗ ಬೀಳಗಿ ಪಟ್ಟಣದಲ್ಲಿ ರೈತ ಸಂಘದ ಅಧ್ಯಕ್ಚ ಗಂಗಪ್ಪ ಮೇತ್ರಿ ಅವರು ಆರೋಪ ಮಾಡಿದ್ದಾರೆ.ನಿತ್ಯ ಸುಮಾರು ಎಂಟನೂರು ಜನ ರೋಗಿಗಳು ತಾಲೂಕಾ ಆಸ್ಪತ್ರೆಗೆ ಬರ್ತಾರೆ,ಆದ್ರೆ ಇಲ್ಲಿ ಸಿಬ್ಬಂದಿ ಕೊರತೆ ಇರೋದರಿಂದ ಹೆಸರು ನೋಂದಾಯಿಸಲು ಗಂಟೆಗಟ್ಟಲೇ ಕಾಯಬೇಕು,ಇನ್ನು ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್ ಅವರ ಅವಶ್ಯಕತೆಯಿದ್ದು ಇದು ವರೆಗೂ ಸರ್ಜನ್ ಕೂಡ ಲಭ್ಯವಾಗಿಲ್ಲ.ಇರುವ ಬೆರಳಣಿಕೆಯಷ್ಟು ಸಿಬ್ಬಂದಿಯಿಂದ ರೋಗಿಗಳಿಗೆ ಸೂಕ್ತ ಸೇವೆ ಒದಗುತ್ತಿಲ್ಲ ಎಂದು ಆರೋಪಿಸಿದ್ದಾರೆ.ಪಂಚ ಗ್ಯಾರಂಟಿ ಭಾಗ್ಯಗಳನ್ನ ಕೊಟ್ಟಿರುವ ಸರ್ಕಾರ ಅರೋಗ್ಯ ಭಾಗ್ಯವನ್ನು ಕೂಡ ಕೊಡಬೇಕು.ಕೃಷ್ಣ ಮೇಲ್ದಂಡೆ ಯೋಜನೆಯಿಂದ ಮುಳುಗಡೆ ಕಂಡ ಸಂತ್ರಸ್ತರು, ಕೂಲಿಕಾರ್ಮಿಕರು,ಗರ್ಭಿಣಿ ಮ.

0
Report
Bagalkot587103blurImage

Bagalkote: ಲೋಕಾರ್ಪಣೆಗೊಂಡ ಬಾಗಲಕೋಟೆ ನಗರದ ರೈಲು ನಿಲ್ದಾಣ,ವರ್ಚುವಲ್ ಪ್ರಧಾನಿ ಮೋದಿ ಉದ್ಘಾಟನೆ

SomashekharSomashekharMay 22, 2025 09:57:03
Bagalkote, Karnataka:

ಬಾಗಲಕೋಟೆ ನಗರದಲ್ಲಿಂದು ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಪುನರಾಭಿವೃದ್ಧಿಗೊಂಡ ಬಾಗಲಕೋಟೆ ನಗರದ ರೈಲು ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಹಳೆ ಬಾಗಲಕೋಟೆ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ನಗರದ ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣವನ್ನು ಉದ್ಘಾಟನೆಗೊಳಿಸಿದರು. ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್,ಮಾಜಿ ಡಿಸಿಎಂ ಚಿತ್ರದುರ್ಗದ ಹಾಲಿ ಸಂಸದ ಗೋವಿಂದ ಕಾರಜೋಳ,ಮಾಜಿ ಸಚಿವ ಮುರಗೇಶ ನಿರಾಣಿ,ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ,ಎಂ.ಎಲ್.ಸಿ ಪಿ.ಹೆಚ್.ಪೂಜಾರ್ ಅವರು ಸೇರಿಸಂತೆ ಸ್ಥಳೀಯ ಜನಪ್ರತಿನಿಧಿಗಳು,ರೈಲ್ವೆ ಇಲಾಖೆ ಅಧಿಕಾರಿಗಳು,ವಿವಿಧ ಇಲಾಖೆಗಳು ಕಾರ್ಯಕ್ರಮದಲ್ಲಿ ಭಾಗಿಯಾದ್ರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರು,ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಕೂಡ ಮೋದಿ ಸರ್ಕಾರದ ಅವಧಿಯಲ್ಲಿ ಏಳು ಲಕ್ಷ ಐ.

0
Report
Bagalkot587103blurImage

Bagalkot: ನಮ್ಮ ಪಾಕಿಸ್ತಾನ ಹೇಳಿಕೆಗೆ ತಿರುಗೇಟು ಕೊಟ್ಟ ಮಾಜಿ ಡಿಸಿಎಂ ಗೋವಿಂದ ಕಾರಜೋಳ

SomashekharSomashekharMay 22, 2025 09:52:21
Bagalkote, Karnataka:

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ಪಾಕಿಸ್ತಾನ ಎಂದು ಭಾಷಣ ಮಾಡಿದ‌ ವಿಚಾರಕ್ಕೆ, ಬಾಗಲಕೋಟೆ ನಗರದಲ್ಲಿ ಮಾಜಿ ಡಿಸಿಎಂ ಸಂಸದ ಗೋವಿಂದ ಕಾರಜೋೞ ತಿರುಗೇಟು ನೀಡಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ಅವರು, ಬಹುಶಃ ಕಾಂಗ್ರೆಸ್ ನಾಯಕರ ನೆಂಟರೆಲ್ಲ ಪಾಕಿಸ್ತಾನದಲ್ಲಿ ಇದ್ದಂಗೆ ಕಾಣುತ್ತೆ ಎಂದು ಲೇವಡಿ ಮಾಡಿದ್ದಾರೆ. ಅದಕ್ಕಾಗಿ‌ ನಮ್ಮ ಪಾಕಿಸ್ತಾನ ಅಂತ ಸಂಬೋಧನೆ ಮಾಡ್ತಾ ಇದ್ದಾರೆ ಎಂಸು ಕಿಡಿಕಾರಿದರು. ನೋಡಿ ನಮ್ಮವೈರಿ ರಾಷ್ಟ್ರ,ನಮ್ಮ ಶತ್ರು ರಾಷ್ಟ್ರದ ಬಗ್ಗೆ ಯಾವ ಶಬ್ದಗಳಲ್ಲಿ ಮಾತಾಡಬೇಕೊ ಅದನ್ನೇ ಮಾತಾಡಬೇಕು. ನಮ್ಮ ಪಾಕಿಸ್ತಾನ ಅಂತ ಹೇಳಿದ್ರೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.ಯಾರೂ ಕೂಡ ಆ ಮಾತನ್ನ ಹೇಳಬಾರದು,ನಾವು ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಕಳೆದ 1947 ರಿಂದ ಇಲ್ಲಿಯವರೆಗೂ ಯುದ್ಧ ಮಾಡುತ್ತಲೇ ಬಂದಿದ್ದೇವೆ, ನಮಗೆ ಸಾಕಷ್ಟು ನಷ್ಟ ಪಾಕಿಸ್ತಾನದಿಂದ ಆಗಿದೆ. ಈವತ್ತು ಪಾಕಿಸ್ತಾನ ಉಗ್ರರನ್ನ ಪೋಷಣೆಮಾಡ್ತೆ,ಪಾಕಿಸ್ತಾನವನ್ನು ಒಬ್ಬ ಹಿರಿಯ ನಾಗರಿಕರಾಗಿ ಖಂಡಿಸಬೇಕಿತ್ತು.ನಮ್ಮ ಪಾಕಿಸ್ತಾನ ಅಂತ ಶಬ್ದ ಬಳಸಿದ್ದನ್.

0
Report
Bagalkot587102blurImage

Bagalkote: ಸರ್ಕಾರದ ಆದೇಶದಂತೆ ಸಲಹಾ ಸಮೀತಿ ರಚಿಸಿದ ಕಲಾದಗಿ ಹೆಸ್ಕಾಂ ಶಾಲೆ

SomashekharSomashekharMay 21, 2025 12:53:14
Bagalkote, Karnataka:
ಬಾಗಲಕೋಟ ತಾಲೂಕಿನ ಕಲಾದಗಿಯ ಹೆಸ್ಕಾಂ ಕಚೇರಿಯಲ್ಲಿ ಸರಕಾರದ ಆದೇಶದಂತೆ ಗ್ರಾಹಕರ ಸಲಹಾ ಸಮಿತಿ ರಚನೆ ಮಾಡಿಲಾಯಿತು. ನಂತರ ಸಭೆಯನ್ನ ನಡೆಸಲಾಯಿತು. ಕಲಾದಗಿ ಹೆಸ್ಕಾಂ ಕಚೇರಿಯ ಶಾಖಾಧಿಕಾರಿ ಜಿ.ಬಿ. ಛಬ್ಬಿ ಅವರು ಅಧ್ಯಕ್ಚತೆಯನ್ನ ವಹಿಸಿದ್ದರು . ಸಲಾಹ ಸಮಿತಿಯ ಸದಸ್ಯರುಗಳಾದ ಭೀಮಪ್ಪ ನಾವಲಗಿ ಪರಮಾನಂದ ಮಂಟೂರ್, ಜಾನಕಿ ಪಾಟೀಲ್, ಕರಿಯಪ್ಪ ಪೂಜಾರಿ, ನೂರಮ್ಮ ಪೀರಜಾದೆ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನ ಹಾಗೂ ಸ್ವಾಗತವನ್ನು ಸಂಗಣ್ಣ ಕೆಂಚಪ್ಪಗೋಳ ನೆಡೆಸಿಕೂಟ್ಟರು.ಒಟ್ಟಾರೆ ಸಲಹಾ ಸಮೀತಿಯ ರಚನೆ ಹಾಗೂ ಸಭೆ ಯಶಸ್ವಿಯಾಗಿ ಜರುಗಿತು.
0
Report
Bagalkot587102blurImage

Bagalkote - ಜಮಖಂಡಿಯಲ್ಲಿ ಒಳಮೀಸಲಾತಿ ಸಮೀಕ್ಷೆ ಪರಶೀಲಿಸಿದ ಎಸಿ ಶ್ವೇತಾ ಬೀಡಿಕರ್

SomashekharSomashekharMay 21, 2025 12:51:57
Bagalkote, Karnataka:
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಉಪವಿಭಾಗಾ ಧಿಕಾರಿ ಶ್ವೇತಾ ಬೀಡಿಕರ್ ಅವರು ಒಳಮೀಸಲಾತಿ ವಗಿ೯ಕರಣ ಸಮೀಕ್ಷೆಯ ಗಣತಿ ಕಾರ್ಯವನ್ನು ಪರಿಶೀಲನೆ ಮಾಡಿದರು. ಜಮಖಂಡಿ ನಗರದ ಚೌಡಯ್ಯಾನಗರ,ಶಿಕ್ಕಲಗಾರ ಕಾಲೋನಿ,ಭಂಜತ್ರಿಗಲ್ಲಿ ಸೇರಿದಂತೆ ನಗರದ ವಿವಿಧ ಬಡಾವಣೆಗಳಿಗೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಭೇಟಿ ನಿಡಿ ಪರಶೀಲಿಸಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಜಗದೇವ ಪಾಸೋಡೆ,ಕಂದಾಯ ನಿರಿಕ್ಷಕ ಮಂಜುನಾಥ ದೋಡಮನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿರಿದ್ದರು
0
Report
Bagalkot587102blurImage

Bagalkote: ಜಿಲ್ಲೆಯಲ್ಲಿ ಮುಂದುವರೆದ ಮಳೆ,ಕುಸಿದು ಬಿದ್ದ ಮನೆ

SomashekharSomashekharMay 21, 2025 12:51:24
Bagalkote, Karnataka:
ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆ ಹಿನ್ನೆಲೆ ಮನೆಯ ಮೇಲ್ಛಾವಣಿ ಕುಸಿದ ಘಟನೆ ಬಾಗಲಕೋಟೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ನಡೆದಿದೆ.ಮನೆಯ ಮಾಲೀಕರು ಬೇರೆ ಊರಿಗೆ ಹೋದ ಹಿನ್ನೆಲೆ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.ಯಲ್ಲನಗೌಡ ಗೌಡರ್ ಅವರಿಗೆ ಸೇರಿದ ಮನೆ ಇದಾಗಿದೆ. ಅವರು ನಿತ್ಯ ಮಲಗುತ್ತಿದ್ದ ಜಾಗದಲ್ಲೇ ಮೇಲ್ಛಾವಣಿ ಕುಸಿದು ಬಿದ್ದಿದ್ದು,ಪರಿಣಾಮ ಮನೆಯಲ್ಲಿನ ಸಾಮಾನುಗಳು ಛಿದ್ರ ಛಿದ್ರವಾಗಿವೆ. ಮಣ್ಣಿನ ಜಂತಿ ಮನೆ ಆದ್ದರಿಂದ ನಿರಂತರ ಮಳೆಗೆ ಕುಸಿತ ಕಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರ ಮಳೆ ಸಯರಿಯುತ್ತಿದ್ದು ಮಣ್ಣಿನ ಮನೆಯಲ್ಲಿ ವಾಸಿಸುವವರಿಗೆ ಆತಂಕತ ಶುರುವಾಗಿದೆ.
0
Report
Bagalkot587102blurImage

Bagalkote: ಜಮಖಂಡಿ ನಗರದ ಕ್ಷೇತ್ರ ಶಿಕ್ಷಣಾಧಿಜಾರಿ ಕಾರ್ಯಾಲಯದಲ್ಲಿ ಭಯೋತ್ಪಾದನಾ ವಿರೋಧಿ ದಿನ ಆಚರಣೆ

SomashekharSomashekharMay 21, 2025 12:49:39
Bagalkote, Karnataka:

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ನೇತೃತ್ವದಲ್ಲಿ ಭಯೋತ್ಪಾದನಾ ವಿರೋಧಿ ದಿನದ ಪ್ರಮಾಣ ವಚನ ಮಂಡಿಸುವ ಮೂಲಕ ಭಯೋತ್ಪಾದನಾ ವಿರೋಧಿ ದಿನ ಆಚರಣೆ ಮಾಡಲಾಯಿತು ಇದೆ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಮಾತನಾಡಿ ಸರ್ಕಾರದ ಆದೇಶದಂತೆ ಹಾಗೂ ಜಿಲ್ಲಾಧಿಕಾರಿಗಳ ನಿರ್ದೆಶನದ ಮೇರೆಗೆ ನಮ್ಮ ಕಾರ್ಯಾಲಯದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ನಿಟ್ಟಿನಲ್ಲಿ ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮೆಲ್ಲ ಶಕ್ತಿ ಸಾಮರ್ಥ್ಯದಿಂದ ಎದುರಿಸುತ್ತೇವೆ ಎಂದು ಈ ಮೂಲಕ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡಿದ್ದೆವೆ ಎಂದರು ಇನ್ನೂ ಇದೆ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದ್ದಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

0
Report
Bagalkot587102blurImage

Bagalkote: ಮುಧೋಳದಲ್ಲಿ ಎಲ್ಲರ ಗಮನ ಸೆಳೆದ ತಿರಂಗಾ ಯಾತ್ರೆ

SomashekharSomashekharMay 21, 2025 12:46:49
Bagalkote, Karnataka:
ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದ ತಿರಂಗಾ ಯಾತ್ರೆ ಗಮನ ಸೆಳೆಯಿತು.ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ಯಾತ್ರೆ, ಗಾಂಧಿ ಸರ್ಕಲ್, ಶಿವಾಜಿ ಸರ್ಕಲ್ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮಾರೋಪಗೊಂಡಿತು. ಯಾತ್ರೆಯಲ್ಲಿ ಮಾಜಿ ಸೈನಿಕರು, ವೈದ್ಯರು, ಮಹಿಳೆಯರು ವಿದ್ಯಾರ್ಥಿಗಳು,ಜನಪ್ರತಿನಿಧಿಗಳು,ಸ್ಥಳೀಯ ಪ್ರಮುಖರು,ಬಿಜೆಪಿಗರು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು.
0
Report
Bagalkot587102

Sensitive Content

This video contains sensitive content which some people may find offensive or disturbing


See Video
blurImage

Bagalkote - ನವನಗರದಲ್ಲಿ ಬಸ್‌ನಲ್ಲಿ ಮಹಿಳೆಯರ ನಡುವಿನ ಹೋರಾಟ: ವೈರಲ್ ವಿಡಿಯೋ

SomashekharSomashekharMay 20, 2025 10:59:02
Bagalkote, Karnataka:
ಸಾರಿಗೆ ಬಸ್ಸಿನಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಜಡೆ ಹಿಡಿದು ಹೊಡೆದಾಡಿಕೊಳ್ಳುವುದರ ಮೂಲಕ "ಶಕ್ತಿ ಪ್ರದರ್ಶನ" ಮಾಡಿರುವ ಘಟನೆ ಬಾಗಲಕೋಟೆಯ ನವನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.ಬಾಗಲಕೋಟೆ-ಮುಧೋಳ ಬಸ್ಸಿನಲ್ಲಿ ಈ ಘಟನೆ ಜರುಗಿದೆ.ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ಕಾಲು ತುಳಿದಿದ್ದಕ್ಕೆ ಜಗಳ ಶುರುವಾಗಿ ಪರಸ್ಪರ ಜಡೆ ಹಿಡಿದುಕೊಂಡು ಹೊಡೆದಾಡಿದ್ದಾರೆ.ಜಗಳದಲ್ಲಿ ಮುಧೋಳ ಮೂಲದ ರೇಣುಕಾ ಎನ್ನುವ ಮಹಿಳೆ ಚಿನ್ನದ ತಾಳಿ,ಸರ ಕಳೆದುಕೊಂಡಿದ್ದಾರೆ.ಸಧ್ಯ ಈ ವೀಡಿಯೋ ವೈರಲ್ ಅಗಿದೆ.
0
Report
Bagalkot587102blurImage

Bagalkot: ವಿವಿಧ ಬೇಡಿಕೆಗಳ ಈಡೇರಿಕೆಗೆ ಜಮಖಂಡಿಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರತಿಭಟನೆ

SomashekharSomashekharMay 20, 2025 10:49:16
Bagalkote, Karnataka:
ಕನಿಷ್ಠ ವೇತಕ್ಕೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ತಾಲೂಕಾ ಪಂಚಾಯತ ಮುಂದೆ ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ. ರಾಜ್ಯಾದಂತ ಇಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ ದ ರಾಜ್ಯಾಧ್ಯಕ್ಷ ಎಂ.ಬಿ.ನಾಡಗೌಡ ಆದೇಶದಂತೆ ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಠ ವೇತನ ಹಾಗೂ ವಿವಿಧ ಬೇಡಿಕೆಗಳನ್ನು ಇಡೆರಿಸಲು ಆಗ್ರಹಿಸಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಂದ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ತಾಲೂಕಾ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಸಂಜೀವ ನಾಯಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
0
Report
Bagalkot587102blurImage

Bagalkot: ಬೇಸಿಗೆಯಲ್ಲಿ ಜೀವಕಳೆ ಪಡೆದುಕೊಂಡ ಹುಲಿಗೆಮ್ಮನ ಹಂಡೆಕೊಳ್ಳದ ಕಿರು ಜಲಪಾತ

SomashekharSomashekharMay 20, 2025 10:47:24
Bagalkote, Karnataka:
ಬೇಸಿಗೆಯ‌ ಸಂದರ್ಭದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಮಿನಿಫಾಲ್ಸ್ ಗಳು ಜೀವ ಕಳೆ ಪಡೆದುಳ್ಳುತ್ತಿವೆ.ಹೌದು ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಾನಾಪುರ ಗ್ರಾಮದ ಸಮೀಪದ ಹುಲಿಗೆಮ್ಮನ ಹಂಡೆಕೊಳ್ಳದ ಕಿರು ಜಲಪಾತ ಜೀವ ಕಳೆಯನ್ನ ಪಡೆದುಕೊಂಡಿದೆ.ಹಚ್ಚಹಸಯರಿನ ಬೆಟ್ಟಗಳ ಮಧ್ಯೆ ಹರಿದು ಬರುತ್ತಿರುವ ನೀರು ನೋಡುಗರ ಗಮನ ಸೆಳೆಯುತ್ತಿದೆ.ಪ್ರವಾಸಿಗರನ್ನು ಕೈ ಬೀಡಿ ಕರೆಯುತ್ತಿದೆ.
0
Report
Bagalkot587102blurImage

ಬಾಗಲಕೋಟೆಯಲ್ಲಿ ಕಾರ್ಮಿಕರು ಪ್ರತಿಭಟನೆ: ಕನಿಷ್ಠ ವೇತನ ₹26,000 ಒತ್ತಾಯ

SomashekharSomashekharMay 20, 2025 10:45:45
Bagalkote, Karnataka:
ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವುದು,ಕನಿಷ್ಠ ವೇತನ ನೀಡುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಾಗಲಕೋಟೆ ನಗರದಲ್ಲಿಂದು ಆಲ್‌ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಬಾಗಲಕೋಟೆ ನಗರದ ಜಿಲ್ಲಾಡಳಿತಭವನದ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕರನ್ನ ಗುಲಾಮಗಿರಿಗೆ ತಳ್ಳುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನ ರದ್ದುಗೊಳಿಸುವುದು ಹಾಗೂ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ‌ ₹26,000,ನೀಡುವುದು ಸೇರಿದಂತೆ ವಿವಿಧ ‌ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಎ.ಐ.ಯು.ಟಿ.ಯು.ಸಿ ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು.
0
Report
Bagalkot587102blurImage

Bagalkote - ಸಾಧನಾ ಸಮಾವೇಶದ ಎಫೆಕ್ಟ್, ಸಾರಿಗೆ ಬಸ್ ಇಲ್ಲದೇ ನವನಗರದಲ್ಲಿ ಪ್ರಯಾಣಿಕರ ಪರದಾಟ

SomashekharSomashekharMay 20, 2025 10:44:04
Bagalkote, Karnataka:
ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯವಾದ ಹಿನ್ನೆಲೆ ಬಾಗಲಕೋಟೆಯ ನವನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಸರ್ಕಾರದ ಸಾಧನಾ ಸಮಾವೇಶಕ್ಕೆ ಬಾಗಲಕೋಟೆ ಜಿಲ್ಲೆಯಿಂದ ಎರಡನೂರು ಬಸ್ಸುಗಳು ಹೊಸಪೇಟೆಗೆ ತೆರಳಿರುವುದರಿಂದ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.ಬೆರಳಣಿಕೆಯಷ್ಟು ಬಂದ ಬಸ್ಸುಗಳನ್ನು ಹತ್ತಲು ಪ್ರಯಾಣಿಕರು ಜಟಾಪಟಿ‌ ನಡೆಸಬೇಕಾಯಿತು. ನೂಗು‌ನುಗ್ಗಲಿನಲ್ಲಿ ಬಸ್ಸುಗಳನ್ನ ಹತ್ತುವುದಕ್ಕೆ ಪ್ರಯಾಣಿಕರು ಹರಸಾಹಸ ನಡೆಸಿದರು.ಹಲವು ಪ್ರಯಾಣಿಕರಂತೂ ಬೆಳಿಗ್ಗೆಯಿಂದ ಬಸ್ಸುಗಳಿಗೆ ಕಾಯ್ದು ಸುಸ್ತಾಗಿ ಆಕ್ರೋಶ ಹೊರ ಹಾಕಿದರು. ಇನ್ನು ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರು ಕೇವಲ ಆಧಾರ ಕಾರ್ಡ್ ಇಟ್ಟುಕೊಂಡು ಬಂದಿದ್ದು,ಖಾಸಗಿ ವಾಹನ ಹಿಡಿದು ಊರು ತಲುಪಲು ಹಣ ಇರಲಾರದೇ ಪರದಾಡುವಂತಾಯಿತು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗೃತ ಕ್ರಮಗಳನ್ನ ತೆಗೆದುಕೊಳ್ಳಬೇಕಿತ್ತೆಂದು ಆಕ್ರೋಶ ಹೊರಹಾಕಿದರು.
0
Report
Bagalkot587102blurImage

Bagalkote - ನೌಕರಿಗೆ ಸೇರಿಸಿಕೊಳ್ಳಿ ಇಲ್ಲವೇ ದಯಾಮರಣ ನೀಡಿ,ಬಾಗಲಕೋಟೆ ನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ

SomashekharSomashekharMay 20, 2025 10:42:44
Bagalkote, Karnataka:
ನನ್ನನ್ನು ನೌಕರಿಗೆ ನೇಮಿಸಿಕೊಳ್ಳಿ ಇಲ್ಲವೇ ದಯಾಮರಣಕ್ಕೆ ಅವಕಾಶ ನೀಡಿ,ಎಂದು ಬಾಗಲಕೋಟೆ ಜಿಲ್ಲಾ ಅಯುಷ್ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ ವಿಜಯಲಕ್ಷ್ಮೀ ಸರೂರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು,ಹುನಗುಂದ ತಾಲೂಕಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ವಿಭಾಗದ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವೇಳೆ ಕಳೆದ 2023 ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದ ಕಾರಣ, ಜಿಲ್ಲಾಧಿಕಾರಿಗಳ ಅದೇಶದ ಮೇರೆಗೆ ಕೆಲಸದಿಂದ ನನ್ನನ್ನು ವಜಾಗೊಳಿಸಲಾಗಿದೆ.ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದೆ.ನ್ಯಾಯಾಲಯವು 2025 ರ ಜನವೇರಿ 16.ರಂದು ಮರಳಿ ಕೆಲಸಕ್ಕೆ ಸೇರ್ಪಡೆಗೊಳಿಸುವಂತೆ ಆದೇಶ ನೀಡಿದೆ ಎಂದರು. ನ್ಯಾಯಾಲಯದ ಆದೇಶ ಬಂದು ಈಗಾಗಲೇ ನಾಲ್ಕು ತಿಂಗಳು ಕಳೆದರೂ ,ಸಂಬಂಧಿತ ಅಧಿಕಾರಿಗಳು ಕೆಲಸಕ್ಕೆ ನೇಮಿಸಿಕೊಳ್ಳಲು ಮೀನಮೇಷ ಎನಿಸುತ್ತಿದ್ದಾರೆ.ಇದು ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಬರುತ್ತದೆ.ಒಂದು ವಾರದೊಳಗೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳದಿದ್ದರೆ ಜಿಲ್ಲಾ ಆಯುಷ್ ಕಚೇರಿ ಎದುರು ಪ್ರತಿಭಟನೆ
0
Report
Bagalkot587102blurImage

Bagalkote - ರೈತರ ಕಬ್ಬಿನ ಬಾಕಿ ಬಿಲ್ ಪಾತಿಸದಿದ್ದರೆ ಉಗ್ರ ಹೋರಾಟ,ಬೀಳಗಿ ರೈತರ ಎಚ್ಚರಿಕೆ

SomashekharSomashekharMay 17, 2025 11:43:07
Bagalkote, Karnataka:
ಕೆಲವು ಸಕ್ಕರೆ ಕಾರ್ಖಾನೆಗಳು ಇನ್ನೂ ಕೂಡ ಕಬ್ಬಿನ ಬಾಕಿ ಬಿಲ್ ಪಾವತಿಸಿಲ್ಲವೆಂದು ರೈತ ಸಂಘದ ತಾಲೂಕಾ ಅಧ್ಯಕ್ಷ ಶಿವನಗೌಡ ಪಾಟೀಲ್ ಅರೋಪಿಸಿದ್ದಾರೆ. ಬೀಳಗಿಯಲ್ಲಿ ಮಾತನಾಡಿರುವ ಅವರು,ಜಿಲ್ಲಾಡಳಿತ ಸಕ್ಕರೆ ಆಯುಕ್ತರನ್ನ ಕರೆಯಿಸಿ ಕಬ್ಬು ಬೆಳೆಗಾರರ ಜೊತೆ ಸಭೆ ಮಾಡಿ,ಸಮಸ್ಯೆ ಬಗೆಹರಿಸುವ ಭರವಸೆ ನೀಡಿತ್ತು.ಆದರೆ ಇದು ವರೆಗೂ ನಿರಾಣಿ ಸಕ್ಕರೆ ಕಾರ್ಖಾನೆ ಸೇರಿ ಕೆಲವು ಸಕ್ಕರೆ ಕಾರ್ಖಾನೆಗಳು ಬಾಕಿ ಬಿಲ್ ಪಾವತಿಸಿಲ್ಲ,ಅದಷ್ಟು ಬೇಗ ಜಿಲ್ಲಾಡಳಿತ ಬಿಲ್ ಕೊಡಿಸಬೇಕು.ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
0
Report
Bagalkot587103blurImage

Bagalkote: ಜಮಖಂಡಿಯಲ್ಲಿ ತಾಳಿ ಕಟ್ಟಿದ ಬಳಿಕ ಆರತಕ್ಷತೆಗೂ ಮೊದಲೇ ಹೃದಯಾಘಾತದಿಂದ ವರ ಸಾವು

SomashekharSomashekharMay 17, 2025 10:56:07
Bagalkote, Karnataka:
ಒಂದೆಡೆ ಮನೆ ಮಗನ ಮದುವೆಗಾಗಿ ಮಂಟಪ ಹಾಕಿ ಶೃಂಗಾರಗೊಂಡಿದ್ದ ಮನೆ, ಮತ್ತೊಂದೆಡೆ ಮದುವೆ ಮಂಟಪದಲ್ಲೇ ತಾಳಿ ಕಟ್ಟುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿದ ವರ, ಇವುಗಳ ಮಧ್ಯೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ. ಹೌದು, ತಾಳಿ ಕಟ್ಟಿ ಹೊಸ ಬದುಕಿನ ಸಂಭ್ರಮದಲ್ಲಿದ್ದ ವರ ಕೆಲವೇ ನಿಮಿಷಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಪ್ರವೀಣ್ (೨೪) ಹೃದಯಾಘಾತದಿಂದ ಮೃತಪಟ್ಟ ನತದೃಷ್ಟ. ವೃತ್ತಿಯಲ್ಲಿ ಕೃಷಿಕನಾಗಿರುವ ಪ್ರವೀಣ್ ಹಾಗೂ ಪೂಜಾ ಅವರ ವಿವಾಹ ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇತ್ತ ಬೆಳಗ್ಗೆಯಿಂದ ಪೂಜೆ ವಿಧಾನಗಳಲ್ಲಿ ಪ್ರವೀಣ್ ಉತ್ಸಾಹದಿಂದ ಭಾಗವಹಿಸಿದ್ದರು. ಮಧ್ಯಾಹ್ನ ೧೨.೧೫ಕ್ಕೆ ಅಕ್ಷತಾರೋಪಣಕ್ಕಾಗಿ ವೇದಿಕೆ ಏರಿದರು.ಆಗ ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
0
Report
Bagalkot587103blurImage

Bagalkote: ಅಮೀನಗಡ ಪಟ್ಟಣದಲ್ಲಿ ಫುಲ್ ಟ್ರಾಫಿಕ್ ಜಾಮ್

SomashekharSomashekharMay 17, 2025 09:43:31
Bagalkote, Karnataka:
ಬಾಗಲಕೋಟೆ ಜಿಲ್ಲೆಯ ಅಮೀನಗಡ ಪಟ್ಟಣದ ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿಂದು ಬೆಳಿಗ್ಗೆ ಅಂದಾಜು ಎರಡು ಕೀ.ಮೀ ವರೆಗೆ ಟ್ರಾಫಿಕ್ ಜಾಮ್ ಆದ ಘಟನೆ ಜರುಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಭಾರೀ ವಾಹನಗಳ ನಿಲ್ಲುವಿಕೆ ಹಾಗೂ ದಲ್ಲಾಲಿಗಳು ರಾಜ್ಯ ಹೆದ್ದಾರಿಯಲ್ಲೇ ವ್ಯಾಪಾರ ವಹಿವಾಟು ನಡೆಸುವುದರಿಂದ ವಾಹನಗಳ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಸತತ ಒಂದು ಗಂಟೆ ಕಾಲ ವಾಹನ ಸವಾರರು ಪರದಾಡ ಬೇಕಾಯಿತು.ಎರಡು ಕಿ.ಮೀ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.ನಂತರ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ಯಶಸ್ವಿಯಾದರು.
0
Report
Bagalkot587103blurImage

Bagalkote: ಬಾಗಲಕೋಟೆಯಲ್ಲಿ ಶ್ರದ್ಧಾಭಕ್ತಿಗಳಿಂದ ಜರುಗಿದ ಶ್ರೀ ಮಹರ್ಷಿ ಭಗೀರಥ ಜಯಂತಿ

SomashekharSomashekharMay 17, 2025 09:42:01
Bagalkote, Karnataka:
ಬಾಗಲಕೋಟೆ ನಗರದಲ್ಲಿಂದು ಶ್ರೀ ಮಹರ್ಷಿ ಭಗೀರಥ ಅವರ ಜಯಂತಿ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಯಿತು. ನವನಗರದ ಜಿಲ್ಲಾಡಳಿತಭವನದ ಆವರಣದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್ ಹಾಗೂ ಎಂ.ಎಲ್.ಸಿ ಪಿ.ಹೆಚ್.ಪೂಜಾರ್,ಡಿಸಿ ಜಾನಕಿ ಕೆ.ಎಂ ಅವರು ಶ್ರೀ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಭಗೀರಥರ ಭಾವಚಿತ್ರದ ಮೆರವಣಿಗೆ ಜರುಗಿತು.ಮುತ್ತೈದೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯುದ್ಧಕ್ಕೂ ಸಾಗಿದರು.ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಸಾಥ್ ನೀಡಿದರು.
0
Report
Bagalkot587103blurImage

Bagalkote: ಕೆರೂರು ಪಿ.ಎಸ್.ಐ ವಿರುದ್ಧ ಗೂಂಡಾ ವರ್ತನೆ ಆರೋಪ

SomashekharSomashekharMay 17, 2025 09:41:00
Bagalkote, Karnataka:
ವಯೋವೃದ್ಧರೊಬ್ಬರ ಕೈ ಮೂಳೆ ಮುರಿದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಿ.ಎಸ್.ಐ ಭೀಮಪ್ಪ ರಬಕವಿ ಗೂಂಡಾವರ್ತನೆ ತೋರಿರುವ ಆರೋಪ ಕೇಳಿ ಬಂದಿದೆ.ಬಾದಾಮಿ ತಾಲೂಕಿನ ಬೆಳ್ಳಿಖಿಂಡಿ ಗ್ರಾಮದ ವಯೋವೃದ್ಧ ಭೀಮಪ್ಪ ಮೇಟಿ ಅವರ ಎಡಗೈ ಬೆರಳು,ಹಾಗೂ ಕೈ ಮೂಳೆ ಮುರಿದಿದೆ. ಗ್ರಾಮದಲ್ಲಿ ತಿಪ್ಪೆ ವಿಷಯಕ್ಕೆ ಭೀಮಪ್ಪ ಮೇಟಿ ಹಾಗೂ ಪಡಿಯಪ್ಪ ವಗ್ಗರ ಕುಟುಂಬಸ್ಥರ ನಡುವೆ ತಕರಾರು ಇತ್ತು. ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಏರಿತ್ತು.ವಿಚಾರಣೆಗೆ ಕರೆತಂದಿದ್ದ ವಯೋವೃದ್ಧ ಭೀಮಪ್ಪ ಮೇಟಿ ಅವರ ಮೇಲೆ, ಪಿ.ಎಸ್.ಐ ಭೀಮಪ್ಪ‌ ರಬಕವಿ ಗೂಮಡಾವರ್ತನೆ ತೋರಿ ಕೈ ಮುರಿದಿದ್ದಾರೆಂದು ಆರೋಪಿಸಲಾಗಿದೆ. ಕೈ ಮುರಿದರೂ ನಿಯಮ ಬಾಹೀರವಾಗಿ ಎರಡು ದಿನಗಳ ಕಾಲ ವೃದ್ಧನನ್ಮ ಠಾಣೆಯಲ್ಲೇ ಇರಿಸಿಕೊಂಡಿದ್ದರು ಎಂಬ ಆರೋಒ ಕೇಳಿ ಬಂದಿದೆ. ನಂತರ ಗಾಯ ದೊಡ್ಡ ಪ್ರಮಾಣದಲ್ಲಾಗಿದೆ ಎಂದು ಪೊಲೀಸರ ಅರಿವಿಗೆ ಬಂದ ಕೂಡಲೇ ವೃದ್ಧನನ್ನ ಆಸ್ಪತ್ರೆಗೆ ಸೇರಿಸಲಾರದೇ,ಮನಗೆ ಬಿಟ್ಟು ಬಂದಿದ್ದಾರೆ.ಕಳೆದ ಬುಧವಾರ ಮೇಲೆ ಹಲ್ಲೆ ಮಾಡಿದ್ದಾರೆಂದು ಗಾಯಾಳು ಭೀಮಪ್ಪ ಆರೋಪಿಸಿದ್ದಾರೆ.
0
Report
Bagalkot587103blurImage

Bagalkot - ಮತ್ತಿಕಟ್ಟಿ ಕಡಪಟ್ಟಿ ಎಸ್ ಕೆ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಸಂಭ್ರಮ

SomashekharSomashekharMay 16, 2025 13:48:43
Bagalkote, Karnataka:
ಪ್ರತಿ ಮೂರು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಮತ್ತಿಕಟ್ಟಿ ಕಡಪಟ್ಟಿ ಎಸ್ ಕೆ ಗ್ರಾಮದ ದ್ಯಾಮವ್ವ,ದುರ್ಗಮ್ಮ ದೇವಿಯ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಮೊದಲಿಗೆ ದ್ಯಾಮವ್ವ ದೇಗುಲದಿಂದ ಗ್ರಾಮ ದೇವತೆಯರ ಮೂರ್ತಿ ಮೆರವಣಿಗೆ ಆರಂಭವಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ವೇಳೆ ಸುಮಂಗಲಿಯರು ಆರತಿ ಹೊತ್ತು ಸಾಗಿದ್ರೆ, ಯುವಕರು, ಯುವತಿಯರು ಭಂಡಾರದಲ್ಲಿ ಮಿಂದೆದ್ದರು. ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಗ್ರಾಮ ದೇವತೆಯರನ್ನು ಕುಳ್ಳಿರಿಸಿ ಬಾಳೆ ಹಣ್ಣು, ಉತ್ತತ್ತಿ ಅರಿಸಿನ ಕುಂಕುಮ ,ಸೀರೆಯಿಂದ ಉಡಿ ತುಂಬಿ ಭಕ್ತಿಭಾವ ಮೆರೆದ್ರು. ಡೊಳ್ಳಿನ ಕುಣಿತ ನೋಡುಗರ ಮನಸೆಳೆಯಿತು. ಮಾರುತೇಶ್ವರ ದೇಗುಲದಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮತ್ತಿಕಟ್ಟಿ ಕಡಪಟ್ಟಿ ಎಸ್ ಕೆ ಗ್ರಾಮದ ಗುರು ಹಿರಿಯರು , ಯುವಕರು ಜಾತಿ ಮತ ಮರೆತು ಹಿಂದೂ ಮುಸ್ಲಿಂರೆಲ್ಲರೂ ಗ್ರಾಮ ದೇವತೆ ಜಾತ್ರೆಯನ್ನು ಸಡಗರದಿಂದ ಭಾಗಿಯಾಗಿದ್ರು.
0
Report
Bagalkot587103blurImage

Bagalkot - ಮಕ್ಕಳ ಮೇಲಿನ ಪ್ರಕರಣಗಳಲ್ಲಿ ಕಠಿಣ ನಿಯಮ ಪಾಲನೆ: ಶೇಖರಗೌಡ ರಾಮತ್ನಾಳ ಸೂಚನೆ

SomashekharSomashekharMay 16, 2025 13:46:03
Bagalkote, Karnataka:
ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಮಕ್ಕಳ ಮೇಲಿನ ಪ್ರಕರಣಗಳ ನಿರ್ವಹಣೆ ಸಮಯದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಕ್ಕಳ ವಿಶೇಷ ಪೊಲೀಸ್ ಘಟಕ ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಧಿಕಾರಿಗಳು ಮಕ್ಕಳ ಸಾಮಾಜಿಕ ಹಿನ್ನಲೆ ಮತ್ತು ಅಪರಾಧದಲ್ಲಿ ಮಗು ಒಳಗೊಳ್ಳುವ ಪ್ರತಿಯೊಂದು ಪ್ರಕರಣಗಳಲ್ಲಿ ಬಂಧಿಸುವ ಸಂದರ್ಭದಲ್ಲಿ ಸಾಮಾಜಿಕ ಹಿನ್ನಲೆ ವರದಿಯನ್ನು ಮಂಡಳಿಗೆ ಕಡ್ಡಾಯವಾಗಿ ಸಲ್ಲಿಸಲು ತಿಳಿಸಿದರು. ಎಸ್.ಜೆ.ಪಿ.ಯು ಕಲ್ಯಾಣ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳ ಬಾಲನ್ಯಾಯ ಕಾಯ್ದೆ-2015ರ ಕುರಿತು ತರಬೇತಿ ಪಡೆದ ಬಗ್ಗೆ ಮಾಹಿತಿ ಪಡೆದರು.
0
Report
Bagalkot587103blurImage

Bagalkot - ವಿದ್ಯಾಗಿರಿಯಲ್ಲಿ ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ

SomashekharSomashekharMay 16, 2025 13:43:32
Bagalkote, Karnataka:
ಬಾಗಲಕೋಟೆ ನಗರದ ವಿದ್ಯಾಗಿರಿಯ ತೆಗ್ಗಿ ಲೇಔಟ ಹಿಂಬದಿ ರಾಘವೇಂದ್ರ ಸ್ವಾಮಿಗಳ ಮಠದ ಹತ್ತಿರ ರಸ್ತೆಯ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ ವಾಗಿದೆ.ಕಳೆದ ಮೇ. 6 ರಂದು ಮದ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯ ಒಳಗಾಗಿ ಕಳ್ಳತನವಾಗಿದ್ದು,ಇದು ವರೆಗೂ ಹುಡುಕಾಡಿದರೂ ಸಿಗದಿರುವ ಕಾರಣ ಬೈಕ್ ಮಾಲೀಕ ಕಳೆದು ಹೋಗಿರುವ ಬೈಕ್ ಹುಡುಕಿಕೊಡುವಂತೆ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
0
Report
Bagalkot587102blurImage

Bagalkot - ವಿದ್ಯಾಗಿರಿಯಲ್ಲಿ ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ

SomashekharSomashekharMay 16, 2025 13:39:14
Bagalkote, Karnataka:
ಬಾಗಲಕೋಟೆ ನಗರದ ವಿದ್ಯಾಗಿರಿಯ ತೆಗ್ಗಿ ಲೇಔಟ ಹಿಂಬದಿ ರಾಘವೇಂದ್ರ ಸ್ವಾಮಿಗಳ ಮಠದ ಹತ್ತಿರ ರಸ್ತೆಯ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ ವಾಗಿದೆ.ಕಳೆದ ಮೇ. 6 ರಂದು ಮದ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯ ಒಳಗಾಗಿ ಕಳ್ಳತನವಾಗಿದ್ದು,ಇದು ವರೆಗೂ ಹುಡುಕಾಡಿದರೂ ಸಿಗದಿರುವ ಕಾರಣ ಬೈಕ್ ಮಾಲೀಕ ಕಳೆದು ಹೋಗಿರುವ ಬೈಕ್ ಹುಡುಕಿಕೊಡುವಂತೆ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
0
Report