
ಪ್ರದಾನಿ ಮೋದಿ ಅಪಮಾನಿಸಿ ಪೋಸ್ಟ್: ಯುವಕನನ್ನು ವಶಕ್ಕೆ ಪಡೆದ ಕಲಾದಗಿ ಪೊಲೀಸರು
Bagalkote: ವಿಜಯಪುರ-ಬೆಂಗಳೂರು ಸೂಪರ್ ಫಾಸ್ಟ್ ರೈಲ್ವೆ ಒದಗಿಸಿ:ಎಂ.ಎಲ್.ಸಿ. ಪೂಜಾರ್ ಕೇಂದ್ರ ಸಚಿವರಿಗೆ ಮನವಿ
Bagalkote: ನಮ್ಮ ಪಾಕಿಸ್ತಾನ ಹೇಳಿಕೆಗೆ ಕೇಂದ್ರ ಸಚಿವ ವಿ.ಸೋಮಣ್ಣ ನಯವಾಗಿ ತಿರುಗೇಟು
Bagalkote: ಬೀಳಗಿ ಪಟ್ಟಣದ ತಾಲೂಕ ಆಸ್ಪತ್ರೆಯಲ್ಲಿ ವೈದ್ಯರು,ಸಿಬ್ಬಂದಿಗಳ ಕೊರತೆ: ರೋಗಿಗಳ ಪರದಾಟ
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಯ ಕೊರತೆಯಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಕೂಗು ಕೇಳಿ ಬಂದಿದೆ.ನಿತ್ಯ ಅಸ್ಪತ್ರೆಗೆ ಬರುವ ರೋಗಿಗಳು ಸರಿಯಾದ ಚಿಕಿತ್ಸೆ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈಗ ಬೀಳಗಿ ಪಟ್ಟಣದಲ್ಲಿ ರೈತ ಸಂಘದ ಅಧ್ಯಕ್ಚ ಗಂಗಪ್ಪ ಮೇತ್ರಿ ಅವರು ಆರೋಪ ಮಾಡಿದ್ದಾರೆ.ನಿತ್ಯ ಸುಮಾರು ಎಂಟನೂರು ಜನ ರೋಗಿಗಳು ತಾಲೂಕಾ ಆಸ್ಪತ್ರೆಗೆ ಬರ್ತಾರೆ,ಆದ್ರೆ ಇಲ್ಲಿ ಸಿಬ್ಬಂದಿ ಕೊರತೆ ಇರೋದರಿಂದ ಹೆಸರು ನೋಂದಾಯಿಸಲು ಗಂಟೆಗಟ್ಟಲೇ ಕಾಯಬೇಕು,ಇನ್ನು ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್ ಅವರ ಅವಶ್ಯಕತೆಯಿದ್ದು ಇದು ವರೆಗೂ ಸರ್ಜನ್ ಕೂಡ ಲಭ್ಯವಾಗಿಲ್ಲ.ಇರುವ ಬೆರಳಣಿಕೆಯಷ್ಟು ಸಿಬ್ಬಂದಿಯಿಂದ ರೋಗಿಗಳಿಗೆ ಸೂಕ್ತ ಸೇವೆ ಒದಗುತ್ತಿಲ್ಲ ಎಂದು ಆರೋಪಿಸಿದ್ದಾರೆ.ಪಂಚ ಗ್ಯಾರಂಟಿ ಭಾಗ್ಯಗಳನ್ನ ಕೊಟ್ಟಿರುವ ಸರ್ಕಾರ ಅರೋಗ್ಯ ಭಾಗ್ಯವನ್ನು ಕೂಡ ಕೊಡಬೇಕು.ಕೃಷ್ಣ ಮೇಲ್ದಂಡೆ ಯೋಜನೆಯಿಂದ ಮುಳುಗಡೆ ಕಂಡ ಸಂತ್ರಸ್ತರು, ಕೂಲಿಕಾರ್ಮಿಕರು,ಗರ್ಭಿಣಿ ಮ.
Bagalkote: ಲೋಕಾರ್ಪಣೆಗೊಂಡ ಬಾಗಲಕೋಟೆ ನಗರದ ರೈಲು ನಿಲ್ದಾಣ,ವರ್ಚುವಲ್ ಪ್ರಧಾನಿ ಮೋದಿ ಉದ್ಘಾಟನೆ
ಬಾಗಲಕೋಟೆ ನಗರದಲ್ಲಿಂದು ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಪುನರಾಭಿವೃದ್ಧಿಗೊಂಡ ಬಾಗಲಕೋಟೆ ನಗರದ ರೈಲು ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಹಳೆ ಬಾಗಲಕೋಟೆ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ನಗರದ ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣವನ್ನು ಉದ್ಘಾಟನೆಗೊಳಿಸಿದರು. ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್,ಮಾಜಿ ಡಿಸಿಎಂ ಚಿತ್ರದುರ್ಗದ ಹಾಲಿ ಸಂಸದ ಗೋವಿಂದ ಕಾರಜೋಳ,ಮಾಜಿ ಸಚಿವ ಮುರಗೇಶ ನಿರಾಣಿ,ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ,ಎಂ.ಎಲ್.ಸಿ ಪಿ.ಹೆಚ್.ಪೂಜಾರ್ ಅವರು ಸೇರಿಸಂತೆ ಸ್ಥಳೀಯ ಜನಪ್ರತಿನಿಧಿಗಳು,ರೈಲ್ವೆ ಇಲಾಖೆ ಅಧಿಕಾರಿಗಳು,ವಿವಿಧ ಇಲಾಖೆಗಳು ಕಾರ್ಯಕ್ರಮದಲ್ಲಿ ಭಾಗಿಯಾದ್ರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರು,ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಕೂಡ ಮೋದಿ ಸರ್ಕಾರದ ಅವಧಿಯಲ್ಲಿ ಏಳು ಲಕ್ಷ ಐ.
Bagalkot: ನಮ್ಮ ಪಾಕಿಸ್ತಾನ ಹೇಳಿಕೆಗೆ ತಿರುಗೇಟು ಕೊಟ್ಟ ಮಾಜಿ ಡಿಸಿಎಂ ಗೋವಿಂದ ಕಾರಜೋಳ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ಪಾಕಿಸ್ತಾನ ಎಂದು ಭಾಷಣ ಮಾಡಿದ ವಿಚಾರಕ್ಕೆ, ಬಾಗಲಕೋಟೆ ನಗರದಲ್ಲಿ ಮಾಜಿ ಡಿಸಿಎಂ ಸಂಸದ ಗೋವಿಂದ ಕಾರಜೋೞ ತಿರುಗೇಟು ನೀಡಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ಅವರು, ಬಹುಶಃ ಕಾಂಗ್ರೆಸ್ ನಾಯಕರ ನೆಂಟರೆಲ್ಲ ಪಾಕಿಸ್ತಾನದಲ್ಲಿ ಇದ್ದಂಗೆ ಕಾಣುತ್ತೆ ಎಂದು ಲೇವಡಿ ಮಾಡಿದ್ದಾರೆ. ಅದಕ್ಕಾಗಿ ನಮ್ಮ ಪಾಕಿಸ್ತಾನ ಅಂತ ಸಂಬೋಧನೆ ಮಾಡ್ತಾ ಇದ್ದಾರೆ ಎಂಸು ಕಿಡಿಕಾರಿದರು. ನೋಡಿ ನಮ್ಮವೈರಿ ರಾಷ್ಟ್ರ,ನಮ್ಮ ಶತ್ರು ರಾಷ್ಟ್ರದ ಬಗ್ಗೆ ಯಾವ ಶಬ್ದಗಳಲ್ಲಿ ಮಾತಾಡಬೇಕೊ ಅದನ್ನೇ ಮಾತಾಡಬೇಕು. ನಮ್ಮ ಪಾಕಿಸ್ತಾನ ಅಂತ ಹೇಳಿದ್ರೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.ಯಾರೂ ಕೂಡ ಆ ಮಾತನ್ನ ಹೇಳಬಾರದು,ನಾವು ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಕಳೆದ 1947 ರಿಂದ ಇಲ್ಲಿಯವರೆಗೂ ಯುದ್ಧ ಮಾಡುತ್ತಲೇ ಬಂದಿದ್ದೇವೆ, ನಮಗೆ ಸಾಕಷ್ಟು ನಷ್ಟ ಪಾಕಿಸ್ತಾನದಿಂದ ಆಗಿದೆ. ಈವತ್ತು ಪಾಕಿಸ್ತಾನ ಉಗ್ರರನ್ನ ಪೋಷಣೆಮಾಡ್ತೆ,ಪಾಕಿಸ್ತಾನವನ್ನು ಒಬ್ಬ ಹಿರಿಯ ನಾಗರಿಕರಾಗಿ ಖಂಡಿಸಬೇಕಿತ್ತು.ನಮ್ಮ ಪಾಕಿಸ್ತಾನ ಅಂತ ಶಬ್ದ ಬಳಸಿದ್ದನ್.
Bagalkote: ಸರ್ಕಾರದ ಆದೇಶದಂತೆ ಸಲಹಾ ಸಮೀತಿ ರಚಿಸಿದ ಕಲಾದಗಿ ಹೆಸ್ಕಾಂ ಶಾಲೆ
Bagalkote - ಜಮಖಂಡಿಯಲ್ಲಿ ಒಳಮೀಸಲಾತಿ ಸಮೀಕ್ಷೆ ಪರಶೀಲಿಸಿದ ಎಸಿ ಶ್ವೇತಾ ಬೀಡಿಕರ್
Bagalkote: ಜಿಲ್ಲೆಯಲ್ಲಿ ಮುಂದುವರೆದ ಮಳೆ,ಕುಸಿದು ಬಿದ್ದ ಮನೆ
Bagalkote: ಜಮಖಂಡಿ ನಗರದ ಕ್ಷೇತ್ರ ಶಿಕ್ಷಣಾಧಿಜಾರಿ ಕಾರ್ಯಾಲಯದಲ್ಲಿ ಭಯೋತ್ಪಾದನಾ ವಿರೋಧಿ ದಿನ ಆಚರಣೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ನೇತೃತ್ವದಲ್ಲಿ ಭಯೋತ್ಪಾದನಾ ವಿರೋಧಿ ದಿನದ ಪ್ರಮಾಣ ವಚನ ಮಂಡಿಸುವ ಮೂಲಕ ಭಯೋತ್ಪಾದನಾ ವಿರೋಧಿ ದಿನ ಆಚರಣೆ ಮಾಡಲಾಯಿತು ಇದೆ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಮಾತನಾಡಿ ಸರ್ಕಾರದ ಆದೇಶದಂತೆ ಹಾಗೂ ಜಿಲ್ಲಾಧಿಕಾರಿಗಳ ನಿರ್ದೆಶನದ ಮೇರೆಗೆ ನಮ್ಮ ಕಾರ್ಯಾಲಯದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ನಿಟ್ಟಿನಲ್ಲಿ ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮೆಲ್ಲ ಶಕ್ತಿ ಸಾಮರ್ಥ್ಯದಿಂದ ಎದುರಿಸುತ್ತೇವೆ ಎಂದು ಈ ಮೂಲಕ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡಿದ್ದೆವೆ ಎಂದರು ಇನ್ನೂ ಇದೆ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದ್ದಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.