Back
Raghavendra S
Mandya571477

Mandya - ಮಗುವಿಗೆ ಸಿಂಧೂರಿ ಎಂದು ಹೆಸರಿಟ್ಟು ದೇಶಪ್ರೇಮ ಮೆರೆದ ದಂಪತಿ

RSRaghavendra SMay 15, 2025 15:47:03
Melapura, Karnataka:
ಪಾಕಿಸ್ತಾನದ ವಿರುದ್ದ ಆಪರೇಶನ್ ಸಿಂಧೂರ್ ಕಾರ್ಯಚಾರಣೆ ಯಶಸ್ವಿ ಹಿನ್ನಲೆಯಲ್ಲಿ ತಾಲೂಕಿನ ಬಿ.ಆರ್.ಕೊಪ್ಪಲು ಗ್ರಾಮದಲ್ಲಿ ತಮ್ಮ ಮಗುವಿಗೆ ಸಿಂಧೂರಿ ಎಂದು ಹೆಸರಿಟ್ಟು ನಾಮಕರಣ ಮಾಡಿ ದೇಶ ಪ್ರೇಮ ಮೆರೆದಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ‌ ಬಿ.ಆರ್.ಕೊಪ್ಪಲು ಗ್ರಾಮದ ಸೋಮಶೇಖರ್ ಹಾಗು ಹರ್ಷಿತಾ ದಂಪತಿ ದೇಶಪ್ರೇಮ ಮೆರೆದಿದ್ದು,ಮಗುವಿಗೆ ಸಿಂಧೂರಿ ಎಂದು ನಾಮಕರಣ ಮಾಡಿ ದೇಶಪ್ರೇಮ ಮೆರದಿರುವ ಸುದ್ದಿ ತಿಳಿದು ಮಂಡ್ಯರಕ್ಷಣಾ ವೇದಿಕೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ದೇಶ ಪ್ರೇಮಿ ದಂಪತಿಗೆ ಸನ್ಮಾನಿದ್ದು, ಆ ಮಗುವಿನ‌ ವಿದ್ಯಾಭ್ಯಾಸದ ನೆರವಿಗೆಂದು 10000 ರೂ ಠೇವಣಿ ಇಟ್ಟು ಆರ್ಥಿಕ ನೆರವು ನೀಡಿ ಮನೆಯವರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದಾರೆ.
1
Report
Mandya571438

ಶ್ರೀರಂಗಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀಕೃಷ್ಣನ ಒಟ್ಲು ಉತ್ಸವ

RSRaghavendra SAug 29, 2024 08:41:50
Srirangapatna, Karnataka:
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀರಂಗ ಪಟ್ಟಣದಲ್ಲಿ ಶ್ರೀ ಕೃಷ್ಣನ ಒಟ್ಲು ಉತ್ಸವ ವಿಜೃಂಭಣೆಯಿಂದ ನಡೆಯಿತು.ಪಟ್ಟಣದ ಐದಾರು ಕಡೆ ಎತ್ತರದ ಒಟ್ಲುಗಳನ್ನು ಕಟ್ಟಿ, ಅದಕ್ಕೆ ವಿವಿಧ ಬಗೆಯ ತಿಂಡಿಗಳನ್ನು ನೇತುಹಾಕಿ ಅದನ್ನು ಹೊಡೆಯುವ ವಿಶಿಷ್ಟ ಉತ್ಸವ ವನ್ನು ಶ್ರೀಕೃಷ್ಣನ ಭಕ್ತರು ಸಂಭ್ರಮ ದಿಂದ ಆಚರಿಸಿದರು.ಎತ್ತರದಲ್ಲಿ ನೇತು ಹಾಕಿ ಕಟ್ಟಿರುವ ಒಟ್ಲನ್ನು ಕಡ್ಡಿಯಿಂದ ಹೊಡೆಯುವ ಯುವಕರಿಗೆ ಭಕ್ತರು ಬಣ್ಣದ ನೀರಿನ ಓಕುಳಿಯಿಂದ ಅವರನ್ನು ತಡೆಯವ ಕೆಲಸ ನಡೆಯಿತು. ಈ ವಿಶಿಷ್ಟ ಉತ್ಸವವನ್ನ ಸುತ್ತಮುತ್ತಲ ಭಕ್ತರು ಆಗಮಿಸಿ ನೋಡಿ ಕಣ್ತುಂಬಿಕೊಂಡರು.
1
Report
Mandya571401

ಸೆಂಟ್ರಲ್ ಜೈಲಿನಲ್ಲಿ ಪಂಚತಾರ ವ್ಯವಸ್ಥೆ ಹಿಂದಿನಿಂದಲೂ ಇದೆ : ಎಚ್ಡಿಕೆ

RSRaghavendra SAug 26, 2024 09:47:47
Mandya, Karnataka:

ಬೆಂಗಳೂರಿನ ಸೆಂಟ್ರಲ್ ಪರಪ್ಪ ಅಗ್ರಹಾರದಲ್ಲಿ ಕೈದಿಗಳಿಗಾಗಿ ಪಂಚತಾರಾ ಹೋಟೆಲ್ ಇದೆ. ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಕೈಗಾರಿಕೆ ಸಚಿವ ಎಚ್.ಡಿ.ಮಂಡ್ಯ, ಹಣ ಕೊಟ್ಟರೆ ಏನು ಬೇಕಾದರೂ ಕೊಳ್ಳಬಹುದು ಎಂದು ಈಗ ತಾತ್ವಿಕವಾಗಿ ಪ್ರಚಾರ ಮಾಡಲಾಗಿದೆ. ಇದಕ್ಕೂ ಮುನ್ನ ಡಿಜಿ ಮತ್ತು ಡಿಸಿಪಿ ನಡುವೆ ತೀವ್ರ ವಾಗ್ವಾದ ನಡೆದಿತ್ತು. ತನಿಖೆ ನಡೆಸಬೇಕು ಎಂದು ಗದ್ದಲ ಎದ್ದರು. ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಪಂಚತಾರಾ ಸೌಲಭ್ಯವಿದೆ. ಈಗ ತತ್ವಶಾಸ್ತ್ರದ ವಿಷಯದಲ್ಲಿ ಇದು ಮುನ್ನೆಲೆಗೆ ಬಂದಿದೆ. ಆ ಕೈದಿಗಳನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಸರ್ಕಾರ ನಿರ್ಧರಿಸುತ್ತಿದೆಯಂತೆ.

1
Report
Mandya571401

ಕಬ್ಬು ಕಟಾವು ವಿಳಂಬ: ಬೇವು ತಿಂದು ರೈತರ ಪ್ರತಿಭಟನೆ

RSRaghavendra SAug 21, 2024 10:56:25
Mandya, Karnataka:
ರೈತರ ಬೆಳೆದು ನಿಂತ ಕಬ್ಬನ್ನ ಕಟಾವು ಮಾಡಿಸದ ಮಂಡ್ಯ ಜಿಲ್ಲಾಡಳಿತದ ವಿರುದ್ಧ ತಾಲೂಕಿನ ರೈತರು ರೊಚ್ಚಿಗೆದ್ದಿದ್ದಾರೆ.ಇಂದು ಕಬ್ಬು ಕಟಾವಿಗೆ ಒತ್ತಾಯಿಸಿ ಡಿಸಿ ಕಚೇರಿ ಮುಂದು ತಾಲೂಕಿನ ಉಪ್ಪಾರಕನಹಳ್ಳಿ ರೈತರು ಬೇವಿನ ಸೊಪ್ಪು ತಿಂದು ವಿನೂತನ ಪ್ರತಿಭಟನೆ ನಡೆಸಿದ್ದಾರೆ‌ ಸಕ್ಕರೆ ನಾಡು ಎಂಬ ಹೆಸರು ಜಿಲ್ಲೆಗೆ ಇದ್ದರು ರೈತರಿಗೆ ಕಹಿ ಕೊಟ್ಟ ಜಿಲ್ಲಾಡಳಿತ ಎಂದು ವಿನೂತನ ಪ್ರೋಟೆಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ರೈತರಾದ ಶಿವಕುಮಾರ್ ಆರಾಧ್ಯ,ಹೊಸಳ್ಳಿ ಶಿವಿ,ರಾಶಿ, ವಿವೇಕ್ ಸೇರಿದಂತೆ ಹಲವರು ಇದ್ದರು‌
0
Report
Advertisement
Mandya571435

ಫೇಸ್‌ಬುಕ್ ಸುಂದರಿಯ ಲಾಲಚದಲ್ಲಿ ಪూజಾರಿಯಿಂದ ಲಕ್ಷ ರೂಪಾಯಿ ಮೋಸ

RSRaghavendra SAug 21, 2024 10:53:12
Pandavapura, Karnataka:
ಫೇಸ್ಬುಕ್ ನಲ್ಲಿ ಪರಿಚಯವಾದ ಸಂದರಿ ಯುವತಿಯೊಬ್ಬಳಿಂದ ದೇಗುಲದ ಅರ್ಚಕನೋರ್ವ ಒಂದು ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಪಟ್ಟ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿರುವ ಶಿವಶೈಲ ದೇಗುಲದ ಅರ್ಚಕ ವಿಜಯ್ ಕುಮಾರ್ ಫೇಸ್ಬುಕ್ ಸುಂದರಿಯ ಭೇಟಿಯ ಮಾತು ನಂಬಿ ಆಕೆಗೆ ಹಂತ ಹಂತವಾಗಿ ಪೋನ್ ಪೇ ಮೂಲಕ ಸುಮಾರು 1.40 ರೂಗಳನ್ನು ಕೊಟ್ಟಿದ್ದಾನೆ. ಹಣ ಪಡೆದ ಬಳಿಕ ಆಕೆ ಈತನನ್ನು ಬ್ಲಾಕ್ ಮಾಡಿದ್ದಾಳೆ. ಯುವತಿಯಿಂದ ವಂಚನೆಗೊಳಗಾಗಿದ್ದನ್ನ ಅರಿತ ಅರ್ಚಕ ಇದೀಗ ಮಂಡ್ಯದ ಸೈಬರ್ ಠಾಣೆಗೆ ದೂರು ನೀಡಿದ್ದಾನೆ.
0
Report
Mandya571432

ಘಮ ಘಮಿಸುತ್ತೆ ಮಂಡ್ಯದ ನಾಗಮಂಗಲದ ಬೆಣ್ಣೆ

RSRaghavendra SAug 21, 2024 10:04:24
Nagamangala, Karnataka:
ಬೆಂಗಳೂರು, ಮೈಸೂರು ಸೇರಿ ದಂತೆ ಕೆಲ ದೊಡ್ಡ ದೊಡ್ಡ ನಗರಗಳಲ್ಲಿ ಮಂಡ್ಯ ಬೆಣ್ಣೆ ಅಂದ್ರೆ ಸಾಕು ಅದಕ್ಕೆ ಒಳ್ಳೆ ಬೇಡಿಕೆ ಇದೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ, ಜಿಲ್ಲೆಯ ನಾಗಮಂಗಲದ ರೈತರು. ಇಲ್ಲಿನ ರೈತರು ವ್ಯವಸಾಯದ ಜೊತೆಗೆ ಹಲವಾರು ವರ್ಷಗಳಿಂದ ಹೈನುಗಾರಿಕೆ ಮಾಡುತ್ತಾ ಉತ್ತಮವಾದ ಗುಣಮಟ್ಟದ ಬೆಣ್ಣೆ ತೆಗೆಯುತ್ತಾರೆ.ಹೀಗಾಗಿ ಇಲ್ಲಿನ ಬೆಣ್ಣೆ ಘಮ ಘಮ ಅನ್ನೋ ಪರಿಮಳವನ್ನ ಕೂಡ ಬೀರತ್ತಿದ್ದು ಇಲ್ಲಿನ ಲೋಕಲ್ ಮಾರುಕಟ್ಟೆಯಾದ ಸಂತೆಗಳಲ್ಲಿ ಹೆಚ್ಚು ಹೆಚ್ಚು ಮಾರಾಟವಾಗುತ್ತದೆ‌.
0
Report
Mandya571438

ಚಾಮುಂಡೇಶ್ವರಿ ದೇವಿಗೆ ನೋಟಿನಿಂದ ಧನಲಕ್ಷ್ಮಿ ಅಲಂಕಾರ

RSRaghavendra SAug 16, 2024 10:18:06
Srirangapatna, Karnataka:

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಇಂದು ದೇವಿಗೆ ವಿಶೇಷ ಧನಲಕ್ಷ್ಮಿ ಅಲಂಕಾರ ಮಾಡಲಾಯಿತು. ದೇವಸ್ಥಾನದ ಗರ್ಭಗುಡಿಯಂತೆಯೇ ಮುಂಭಾಗದಲ್ಲಿಯೂ ಭಕ್ತರು ಸಂಗ್ರಹಿಸಿದ ಸುಮಾರು 4.5 ಲಕ್ಷ ರೂಪಾಯಿ ಮೌಲ್ಯದ ವಿವಿಧ ಬಣ್ಣ ಮತ್ತು ಮುಖಬೆಲೆಯ ಹೊಸ ನೋಟುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚಕ ಲಕ್ಷ್ಮೀಶ ಶರ್ಮಾ ನೇತೃತ್ವದಲ್ಲಿ ವರಮಹಾಲಕ್ಷ್ಮಿ ಮಹೋತ್ಸವದ ನಿಮಿತ್ತ ದೇವಿಗೆ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ ಕೈಂಕರ್ಯ ನೆರವೇರಿತು.

1
Report
Mandya571435

ಭತ್ತದ ಗದ್ದೆಳಿದು ಭತ್ತದ ನಾಟಿ ಮಾಡಿದ ಕೇಂದ್ರ ಸಚಿವ ಎಚ್ಡಿಕೆ

RSRaghavendra SAug 11, 2024 10:16:57
Pandavapura, Karnataka:
ಕೇಂದ್ರ ಸಚಿವ ಕುಮಾರಸ್ವಾಮಿಯವರು ಇಂದು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯೊಂದಿಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಲಕ್ಷ್ಮಣ ಎಂಬುವರ ಜಮೀನಿಗಿಳಿದು ಭತ್ತದ ನಾಟಿ ಮಾಡಿದರು.ಈ ಹಿಂದೆ 2018ರಲ್ಲಿ ಸಿ.ಎಂ. ಆಗಿದ್ದಾಗ ಪಕ್ಕದ ಸೀತಾಪುರ ಗ್ರಾಮದಲ್ಲಿ ಭತ್ತದ ನಾಟಿ ಮಾಡಿ ಅಂದು ಆತ್ಮಹತ್ಯೆಗೆ ಶರಣಾಗುತ್ತಿದ್ದ ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸಿದ್ದರು‌.ಇದೀಗ ಮತ್ತೆ ಜಿಲ್ಲೆಯಲ್ಲಿ ಬರಗಾಲದಿಂದ ಕೆಂಗೆಟ್ಟಿದ್ದ ರೈತರಿಗೆ ಆತ್ಮಸ್ಥೈರ್ಯ ತುಂಬಲು ಭತ್ತದ ಗದ್ದೆಗಿಳಿದು ನಾಟಿ ಮಾಡಿ ಗಮನ ಸೆಳೆದರು.
0
Report
Mandya571426

ಮಳೆ ನೀರಿಗೆ ಕೆರೆಯಂತಾದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ

RSRaghavendra SAug 10, 2024 15:34:23
Krishnarajpete, Karnataka:
ಸಂಜೆ ಸತತವಾಗಿ ಒಂದು ಗಂಟೆಗಳ ಕಾಲ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಕೆ.ಆರ್.ಪೇಟೆ ಪಟ್ಟಣದ ಕೆ‌.ಎಸ್.ಆರ್.ಟಿ .ಸಿ ಬಸ್ ನಿಲ್ದಾಣ ತುಂಬೆಲ್ಲಾ ನೀರು ತುಂಬಿಕೊಂಡು ಕೆರೆಯಂತಾಗಿದೆ. ಮಳೆ ನೀರು ನಿಲ್ದಾಣದಲ್ಲಿ ತುಂಬಿಕೊಂಡು ಬಸ್ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆನೀರು ತುಂಬಿಕೊಂಡಿದ್ದರಿಂದ ಬಸ್ ಹತ್ತಲು ಪ್ರಯಾಣಿಕರು ಜನರು ಪರದಾಡುವಂತಾಯಿತು.ಈ ಸಮಸ್ಯೆ ಇದೇ ಮೊದಲಲ್ಲ‌.ಒಂದು ದಶಕಗಳಿಂದಲೂ ಹಲವು ಬಾರಿ ಮಳೆಯ ಅವಾಂತರದಿಂದ ಬಸ್ ನಿಲ್ದಾಣ ಕೆರೆಯಂತಾದರು ಸೂಕ್ತ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
0
Report
Mandya571426

ಮನೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ ಮಾಡಿದ ಮಾಜಿ ಸಿ.ಎಂ

RSRaghavendra SAug 08, 2024 11:02:21
Krishnarajpete, Karnataka:
ಮಾಜಿ ಸಿ.ಎಂ.ಬಿಎಸ್ವೈ ರವರ ಮನೆ ದೇವರಾದ ಕೆ.ಆರ್.ಪೇಟೆ ತಾಲೂಕಿನ ಗವಿಮಠದ ಗ್ರಾಮದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರಸ್ವಾಮಿ ದೇವಸ್ಥಾನಕ್ಕೆ ಮಾಜಿ ಸಿ.ಎಂ ಬಿಎಸ್ವೈ ಭೇಟಿ ನೀಡಿ ಮನೆ ದೇವರಾಗಿರುವ ಸ್ವತಂತ್ರ ಸಿದ್ದಲಿಂಗೇಶ್ವರ ಸ್ವಾಮಿ ದರ್ಶನ ಪಡೆದು, ಗವಿಮಠದ ಪೀಠಾಧ್ಯಕ್ಷ ಚನ್ನವೀರ ಮಹಾಸ್ವಾಮಿ ದಿವ್ಯ ಸಾನಿಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಈ ವೇಳೆ ಕ್ಷೇತ್ರದ ಶಾಸಕ.ಹೆಚ್.ಟಿ ಮಂಜು ಸಾಥ್ ಉಪಸ್ಥಿತರಿದ್ದರು.
0
Report
Mandya571438

ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಗೆ ಬ್ಯಾರೀಕೇಡ್ ಭದ್ರತೆ

RSRaghavendra SAug 08, 2024 10:57:54
Srirangapatna, Karnataka:
ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳ ಮೈಸೂರು ಚಲೋ ಪಾದಯಾತ್ರೆ ಶ್ರೀರಂಗಪಟ್ಟಣ ಬಂದು ತಲುಪಿದೆ. ಪಾದಯಾತ್ರೆಯಲ್ಲಿ ಎರಡೂ ಪಕ್ಷದ ಸಾವಿರಾರು ಕಾರ್ಯಕರ್ತರು ಪಟ್ಟಣಕ್ಕೆ ಆಗಮಿಸಿರೋ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿರುವ ವಿವಾದಿತ ಜಾಮೀಯ ಮಸೀದಿ ಸುತ್ತಲೂ ಬ್ಯಾರೀಕೇಡ್ ಅಳವಡಿಸಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
0
Report
Mandya571438

ಪಾ್ಯಾತ್ರೆಯಲ್ಲಿ ಟೀ ಶರ್ಟ್ ಗಾಗಿ ಮುಗಿಬಿದ್ದ ಕಾರ್ಯಕರ್ತರು

RSRaghavendra SAug 08, 2024 10:56:59
Srirangapatna, Karnataka:
ಮುಡಾ ಹಾಗು ವಾಲ್ಮೀಕಿ ಹಗರಣ ಖಂಡಿಸಿ ಬಿಜೆಪಿ-ಜೆಡಿಎಸ್ ಪಕ್ಷಗಳು ಮೈಸೂರು ಚಲೋ ಪಾದಯಾತ್ರೆ ನಡೆಸ್ತಿವೆ.ಪಾದಾಯಾತ್ರೆ 6ನೇ ದಿನಕ್ಕೆ ಕಾಲಿಟ್ಟಿದೆ. ಮಂಡ್ಯದಿಂದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಪಾದಯಾತ್ರೆ ತಲುಪುತ್ತಿದ್ದಂತೆ ಈ ಕ್ಷೇತ್ರದ ಬಿಜೆಪಿ ಮುಖಂಡ ಸಚ್ಚಿದಾನಂದ ವತಿಯಿಂದ ಪಾದಯಾತ್ರೆಯ ಕಾರ್ಯಕರ್ತರಿಗೆ ಟಿ-ಶರ್ಟ್ ವಿತರಣೆ ಮಾಡಲಾಗುತ್ತಿತ್ತು.ಈ ಟೀ ಶರ್ಟ್ ಗಾಗಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಮುಗಿ ಬಿದ್ದ ಕಾರಣ ಸ್ಥಳದಲ್ಲಿ ನೂಕಾಟ ತಳ್ಳಾಟ ಆರಂಭವಾಗಿ ಗೊಂದಲ ಉಂಟಾಯಿತು.
0
Report
Mandya571401

ಮೈಸೂರು ಚಲೋ ಪಾದಯಾತ್ರೆಯಲ್ಲಿ ಮಾಜಿ ಸಚಿವನ ಭರ್ಜರಿ ಸ್ಟೆಪ್

RSRaghavendra SAug 08, 2024 06:38:55
Mandya, Karnataka:
ಮೂಡಾ ಹಾಗು ವಾಲ್ಮೀಕಿ ಹಗರಣದಲ್ಲಿ ಸಿ‌.ಎಂ.ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳು ನಡೆಸ್ತಿರೋ ಪಾದಯಾತ್ರೆ 6 ನೇ ದಿನಕ್ಕೆ ಕಾಲಿಟ್ಟಿದೆ. ಮಂಡ್ಯ ಜಿಲ್ಲೆಯಲ್ಲಿ ಮೂರನೆ ದಿನದ ಪಾದಯಾತ್ರೆ ಇಂದು ತೂಬಿನಕೆರೆಯಿಂದ ಆರಂಭಗೊಂಡಿದೆ.ಇಂದಿನ ಪಾದಯಾತ್ರೆ ವೇಳೆ ಮಾಜಿ ಸಚಿವ ನಾರಾಯಣಗೌಡ ಪಕ್ಷದ ಕಾರ್ಯಕರ್ತರ ಜೊತೆ ಭರ್ಜರಿ ಸ್ಟೆಪ್ ಹಾಕಿ ಕುಣಿಯುವ ಮೂಲಕ ಕಾರ್ಯಕರ್ತರಿಗೆ ಹುರುಪು ತುಂಬಿದರು. ಮಾಜಿ ಸಚಿವರ ಜೊತೆ ಜೈಕಾರ ಹಾಕುತ್ತಾ ಕುಣಿಯುತ್ತಿರುವ ಕಾರ್ಯಕರ್ತರು ಖುಷಿಯಂದ ಶ್ರೀರಂಗಪಟ್ಟಣದ ಕಡೆ ಪಾದಯಾತ್ರೆ ಮುಂದುವರೆಸಿದ್ದಾರೆ.
0
Report
Mandya571401

ಮಂಡ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಟಿ.ಡಿ.ಸ್ವಾಮಿ ಆಯ್ಕೆ

RSRaghavendra SAug 04, 2024 09:41:37
Mandya, Karnataka:

ಮಂಡ್ಯ ಲಯನ್ಸ್ ಕ್ಲಬ್ ನ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಲಯನ್ ಟಿ.ಡಿ.ಸ್ವಾಮಿ ಆಯ್ಕೆಯಾಗಿದ್ದಾರೆ. ಇಂದು ನಗರದ ಖಾಸಗಿ ಸಮುದಾಯ ಭವನದಲ್ಲಿ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸ್ವಾಮಿ ಮತ್ತು ಅವರ ತಂಡಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಟಿ.ಡಿ.ಸ್ವಾಮಿ ಹಾಗೂ ಅವರ ತಂಡ ಪ್ರಮಾಣ ವಚನ ಸ್ವೀಕರಿಸಿದರು. ಇದೇ ವೇಳೆ ಕ್ಲಬ್ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

1
Report
Mandya571438

ಕಾವೇರಿ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ಸ್ವಾಮೀಜಿ ಹಾಗು ಮತ್ತವರ ಸಹಚರರ ರಕ್ಷಣೆ

RSRaghavendra SAug 03, 2024 13:07:12
Srirangapatna, Karnataka:
ಶ್ರೀರಂಗಪಟ್ಟಣ ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದ ಬಳಿ ಕಾವೇರಿ ನದಿಯ ನಡುಗಡ್ಡೆಯಲ್ಲಿದ್ದ ಸಿಲುಕಿದ್ದ ಗೌತಮ ಕ್ಷೇತ್ರದ ಗಜಾನಾನ ಸ್ವಾಮೀಜಿ ಹಾಗೂ ಅವರ ಮೂವರು ಸಹಚರರನ್ನು ಇಂದು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪ್ರವಾಹ ಮುನ್ನೆಚ್ಚರಿಕೆ ಯಿಂದ ಅಗ್ನಿಶಾಮಕ ದಳ ಮತ್ತು ಎಂಜಿಎಮ್ ರಕ್ಷಣಾ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪ್ರವಾಹದ ನದಿಯಲ್ಲಿ ಬೋಟ್ ಮೂಲಕ ನಡುಗಡ್ಡೆಗೆ ತೆರಳಿ ಅವರನ್ನು ಅಲ್ಲಿಂದ ಅವರನ್ನು ಸುರಕ್ಷಿತವಾಗಿ ಕರೆತಂದು ಕಂದಾಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ‌.
0
Report
Mandya571432

ಖುದ್ದು ಟ್ರ್ಯಾಕ್ಟರ್ ಚಲಾಯಿಸಿ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ ಕೃಷಿ ಸಚಿವ

RSRaghavendra SAug 03, 2024 04:33:41
Nagamangala, Karnataka:
ರೈತನ ಜಮೀನಿನಲ್ಲಿ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಕೃಷಿ ಸಚಿವ ಚಲುವರಾಯಸ್ವಾಮಿ ನಾಗಮಂಗಲದಲ್ಲಿ ಬಿತ್ತನೆ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಸ್ವಕ್ಷೇತ್ರ ನಾಗಮಂಗಲದ APMC ಮುಂಭಾಗದ ಜಮೀನಿನಲ್ಲಿ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದರು‌.ಇದೇ ವೇಳೆ ರೈತರಿಗೆ ಬಿತ್ತನೆ ಬೀಜಗಳು ಮತ್ತು ಕೃಷಿ ಪರಿಕರನ್ನು ಫಲಾನುಭವಿ ರೈತರಿಗೆ ವಿತರಿಸುವ ಮೂಲಕ ಈ ಬಾರಿ ವರುಣ ಕೃಪೆ ಇದೆ ಒಳ್ಳೆಯ ಮಳೆ ಬೆಳೆ ಬಂದು ರೈತರ ಬದುಕು ಹಸನಾಗಲಿ ಎಂದು ಹರಸಿದರು.
0
Report
Mandya571438

ಓಂ ಶಕ್ತಿ ದೇಗುಲದ ದೇವಿಯ ಗಂಜಿ ಉತ್ಸವ ಮೆರವಣಿಗೆ

RSRaghavendra SAug 03, 2024 04:27:40
Srirangapatna, Karnataka:
ಶ್ರೀರಂಗಪಟ್ಟಣದಲ್ಲಿ ಓಂ ಶಕ್ತಿ ಅಮ್ಮನವರ ಗಂಜಿ ಪೂಜೆ ಹಾಗು ಉತ್ಸವ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು‌. ಕೊನೆಯ ಆಶಾಡ ಶುಕ್ರವಾರದ ಅಂಗವಾಗಿ ಇಂದು ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಇರುವ ಓಂ ಶಕ್ತಿ ಅಮ್ಮನ ದೇಗುಲದಿಂದ ಅಮ್ಮನ ಪಲ್ಲಕ್ಕಿ ಉತ್ಸವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಹೊತ್ತು ಉತ್ಸವ ಮಾಡಲಾಯಿತು.ಈ ವೇಳೆ ನೂರಾರು ಮಹಿಳಾ ಮಾಲಾಧಾರಿ ಭಕ್ತರು ಮಡಿಕೆಗಳಲ್ಲಿ ಗಂಜಿಯನ್ನ ಹೊತ್ತು ಮೆರವಣಿಗೆಯಲ್ಲಿ ಸಾಗಿ ದೇಗುಲದ ಬಳಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು‌.
0
Report
Mandya571438

ಶ್ರೀ ಚಾಮುಂಡೇಶ್ವರಿ ದೇವಿಯನ್ನು ತಾವರೆ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು

RSRaghavendra SAug 03, 2024 04:24:57
Srirangapatna, Karnataka:

ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯನ್ನು ತಾವರೆ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಸುಮಾರು 10,000 ಕಮಲದ ಹೂವುಗಳನ್ನು ತಂದು ದೇವರ ಗರ್ಭಗುಡಿ ಸೇರಿದಂತೆ ದೇವಾಲಯದ ಸುತ್ತಲೂ ಅಲಂಕರಿಸಲಾಯಿತು. ವಿಶೇಷ ಅಲಂಕಾರಗಳಿಂದ ಸುತ್ತುವರಿದ ಗ್ರಾಮಸ್ಥರು ಸರತಿ ಸಾಲಿನಲ್ಲಿ ನಿಂತು ದರ್ಶನದ ಸದುಪಯೋಗ ಪಡೆದರು.

1
Report
Mandya571438

ಪ್ರವಾಹಕ್ಕೆ ಮುಳುಗಡೆಯಾದ ವೆಲ್ಲೆಸ್ಲಿ ಸೇತುವೆ

RSRaghavendra SAug 01, 2024 06:47:12
Srirangapatna, Karnataka:
ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದಲ್ಲಿನ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು.ಕೆ.ಆರ್.ಎಸ್ ಡ್ಯಾಂ ನಿಂದ ನದಿಗೆ 1.72 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ 30 ವರ್ಷಗಳ ಬಳಿಕ ಈ ಸೇತುವೆ ಮುಳುಗಡೆಯಾಗಿದ್ದು ಪ್ರವಾಹದ ನೀರು ಸೇತುವೆ ಮೇಲೆ ತುಂಬಿ ಹರಿದಿದೆ.
1
Report