Become a News Creator

Your local stories, Your voice

Follow us on
Download App fromplay-storeapp-store
Advertisement
Back
Chamarajanagar571313

ಹರ್ ಘರ್ ತಿರಂಗ ಅಭಿಯಾನದ ಪ್ರಯುಕ್ತ ನಗರದಲ್ಲಿ ಆಕರ್ಷಕ ಬೈಕ್ ಜಾಥಾ

Surendra
Aug 15, 2024 17:57:47
Chamarajanagar, Karnataka
ಹರ್ ಘರ್ ತಿರಂಗ ಅಭಿಯಾನದ ಪ್ರಯುಕ್ತ ಚಾಮರಾಜನಗರದಲ್ಲಿಂದು ಆಕರ್ಷಕ ಬೈಕ್ ಜಾಥಾ ನಡೆಯಿತು. ಶ್ರೀ ಚಾಮರಾಜೇಶ್ವರ ದೇವಾಲಯದ ಅವರಣದಿಂದ ಜಿಲ್ಲಾಡಳಿತ ಭವನದವರೆಗೆ ಏರ್ಪಡಿಸಲಾಗಿದ್ದ ಬೈಕ್ ರ್ಯಾಲಿಗೆ ನಗರಸಭೆ ಪೌರಾಯುಕ್ತರ ಎಸ್.ವಿ. ರಾಮದಾಸ್ ಹಸಿರು ನಿಶಾನೆ ತೋರಿದರು. ನಗರದ ಚಾಮರಾಜೇಶ್ವರ ದೇವಾಲಯದಿಂದ ಜೋಡಿರಸ್ತೆಯಲ್ಲಿ ಸಾಗಿದ ಬೈಕ್ ರ್ಯಾಲಿಯಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜಗಳು ನೋಡುಗರ ಮನಸೆಳೆದವು. ರ್ಯಾಲಿಯು ಜಿಲ್ಲಾಡಳಿತ ಭವನದ ತಲುಪಿದ ಸಂದರ್ಭದಲ್ಲಿ ಪೌರಾಯುಕ್ತರಾದ ಎಸ್.ವಿ. ರಾಮದಾಸ್ ಅವರು ಸ್ವಾತಂತ್ರೋತ್ಸವದ ಪ್ರತಿಜ್ಞಾವಿಧಿ ಬೋಧಿಸಿದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com

Advertisement
Advertisement