Become a News Creator

Your local stories, Your voice

Follow us on
Download App fromplay-storeapp-store
Advertisement
Back
Surendra
Chamarajanagar571313

Chamarajanagar: ಕಳ್ಳರು ಮನೆಗಳಿಗೆ ಕನ್ನ ಹಾಕಿ 1.5 ಲಕ್ಷ ನಗದು ಕಳವು

SurendraSurendraMay 21, 2025 06:01:26
Chamarajanagar, Karnataka:

ಕಳ್ಳರು ಕೈ ಚಳಕ ತೋರಿ ಸರಣಿ ಮನೆಗಳಿಗೆ ಕನ್ನ ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ನಡೆದಿದ್ದು ಬುಧವಾರ ಬೆಳಗ್ಗೆ ತಿಳಿದುಬಂದಿದೆ. ತೆರಕಣಾಂಬಿ ಗ್ರಾಮದ ಕುಮಾರ್, ರವಿ, ರೇಷ್ಮಾ, ನಾಗರಾಜ್ ಹಾಗೂ ಪುಟ್ಟದೇವಮ್ಮ ಎಂಬವರ ಮನೆಗಳ ಬೀಗ ಒಡೆದು ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದಾರೆ.ಮನೆಗಳಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳತನ ಮಾಡಿದ್ದು ಕುಮಾರ್ ಎಂಬವರ ಮನೆಯಲ್ಲಿ ಒಂದೂವರೆ ಲಕ್ಷ ನಗದು, ಹತ್ತು ಗ್ರಾಂ ಚಿನ್ನ ಕಳುವು ಮಾಡಿದ್ದು ಉಳಿದ ಮನೆಗಳಲ್ಲಿ ಕಳವಾದ ವಸ್ತುಗಳ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ‌.

0
comment0
Report
Chamarajanagar571111

ಗುಂಡ್ಲುಪೇಟೆ ಮೂಲಕ ವೈನಾಡಿಗೆ ಗಾಂಧಿ ಕುಟುಂಬ: ಜನರತ್ತ ಕೈ ಬೀಸಿದ ಕಾಂಗ್ರೆಸ್ ಅಧಿನಾಯಕಿ

SurendraSurendraOct 23, 2024 07:14:51
Gundlupete, Karnataka:
ಕೇರಳದ ವೈನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬುಧವಾರದಂದು ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವ ಹಿನ್ನೆಲೆ ಗಾಂಧಿ ಕುಟುಂಬ ಗುಂಡ್ಲುಪೇಟೆ ಮೂಲಕ ತೆರಳಿದರು. ಮೈಸೂರಿಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ವೈನಾಡಿಗೆ ಮಂಗಳವಾರ ಸಂಜೆ ತೆರಳಿದರು. ಇನ್ನು, ಕಾಂಗ್ರೆಸ್ ವರಿಷ್ಠರು ತೆರಳುತ್ತಿರುವ ಮಾಹಿತಿ ಅರಿತ ಕಾಂಗ್ರೆಸ್ ಕಾರ್ಯಕರ್ತರು ಗುಂಡ್ಲುಪೇಟೆಯ ರಾಷ್ಟ್ರೀಯ ಹೆದ್ದಾರಿ ಎರಡು ಬದಿ ಜಮಾಯಿಸಿದ್ದರು. ಜನರನ್ನು ಕಂಡ ಸೋನಿಯಾ ಗಾಂಧಿ ಕಾರೊಳಗೇ ಕೈ ಬೀಸುತ್ತಾ ತೆರಳಿದರು.
0
comment0
Report
Chamarajanagar571126

ಬಂಡೀಪುರದಲ್ಲಿ ಆನೆ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್

SurendraSurendraOct 21, 2024 14:45:20
Bandipur, Karnataka:
ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಆನೆ ದಾಳಿಯಿಂದ ಬೈಕ್ ಸವಾರ ಸ್ವಲ್ಪದರಲ್ಲೇ ಪಾರಾದ ಘಟನೆ ನಡೆದಿದೆ. ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯು ಬಂಡೀಪುರ ಅರಣ್ಯದ ನಡುವೆ ಹಾದುಹೋಗಿದ್ದು ಶುಕ್ರವಾರದಂದು ಊಟಿ ಕಡೆಯಿಂದ ಮೈಸೂರಿನತ್ತ ಬರುತ್ತಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಜೀವ ಜಲ್ಲೆನ್ನಿಸುವ ದೃಶ್ಯವನ್ನು ಕಾರಿನಲ್ಲಿದ್ದ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ.
1
comment0
Report
Chamarajanagar571490

ಸೋಲಿಗರ ಮನೆ ನಿರ್ಮಾಣಕ್ಕೆ ಲಂಚ ಪಡೆದ ಡಿಆರ್ ಎಫ್ಒ ಲೋಕಾ ಬಲೆಗೆ

SurendraSurendraSept 19, 2024 07:26:51
Palar, Karnataka:

ಹನೂರು ತಾಲ್ಲೂಕಿನ ಪಾಲಾರ್ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೋಲಿಗ ಜನಾಂಗದ ನಿವಾಸಿಗಳಿಂದ ಲಂಚ ಕೇಳಿದ ಉಪವಲಯ ಅರಣ್ಯಾಧಿಕಾರಿ ಭೋಜಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 18 ಆದಿವಾಸಿ ಕುಟುಂಬಗಳಿಗೆ ಮನೆಗಳನ್ನು ಮಂಜೂರಾಗಿದೆ. ಸರ್ಕಾರದ ಮೊದಲ ಕಂತಿನ ಹಣ ಬಿಡುಗಡೆಗೆ ಪ್ರತಿ ಕುಟುಂಬದವರು 1,000 ರೂ. ನೀಡಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಲೋಕಾಯುಕ್ತ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

0
comment0
Report
Advertisement
Chamarajanagar571111

ಟಿಪ್ಪರ್ ಹಾವಳಿ, ಅಕ್ರಮ ಗಣಿಗಾರಿಕೆ ವಿರುದ್ಧ ರಸ್ತೆ ತಡೆದು ಆಕ್ರೋಶ

SurendraSurendraSept 18, 2024 12:32:13
Gundlupete, Karnataka:

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಟಿಪ್ಪರ್ ಹಾವಳಿಗೆ ವಿರೋಧವಾಗಿ ವಿವಿಧ ಕನ್ನಡ ಪರ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಜಾಥಾ ಹೆದ್ದಾರಿ ಮೂಲಕ ಸಾಗಿದ್ದು, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂದೆ ರಸ್ತೆಯನ್ನು ತಡೆದು ಮಾನವ ಸರಪಳಿ ನಿರ್ಮಿಸಿದರು. ಪ್ರತಿಭಟನಾಕಾರರು ಆರ್ಟಿಓ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ, ಪೊಲೀಸರಿಗೆ ಮತ್ತು ತಾಲ್ಲೂಕು ಆಡಳಿತಕ್ಕೆ ಧಿಕ್ಕಾರಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಂತರ, ತಾ. ಕಚೇರಿ ಮುಂಭಾಗ ಜಮಾಯಿಸಿ ಮುಂದುವರಿಸಿದ ಪ್ರತಿಭಟನೆ ನಡೆಯಿತು.

0
comment0
Report
Advertisement
Back to top