Back
Chamarajanagar571313blurImage

Chamarajanagar: ಕಳ್ಳರು ಮನೆಗಳಿಗೆ ಕನ್ನ ಹಾಕಿ 1.5 ಲಕ್ಷ ನಗದು ಕಳವು

Surendra
May 21, 2025 06:01:26
Chamarajanagar, Karnataka

ಕಳ್ಳರು ಕೈ ಚಳಕ ತೋರಿ ಸರಣಿ ಮನೆಗಳಿಗೆ ಕನ್ನ ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ನಡೆದಿದ್ದು ಬುಧವಾರ ಬೆಳಗ್ಗೆ ತಿಳಿದುಬಂದಿದೆ. ತೆರಕಣಾಂಬಿ ಗ್ರಾಮದ ಕುಮಾರ್, ರವಿ, ರೇಷ್ಮಾ, ನಾಗರಾಜ್ ಹಾಗೂ ಪುಟ್ಟದೇವಮ್ಮ ಎಂಬವರ ಮನೆಗಳ ಬೀಗ ಒಡೆದು ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದಾರೆ.ಮನೆಗಳಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳತನ ಮಾಡಿದ್ದು ಕುಮಾರ್ ಎಂಬವರ ಮನೆಯಲ್ಲಿ ಒಂದೂವರೆ ಲಕ್ಷ ನಗದು, ಹತ್ತು ಗ್ರಾಂ ಚಿನ್ನ ಕಳುವು ಮಾಡಿದ್ದು ಉಳಿದ ಮನೆಗಳಲ್ಲಿ ಕಳವಾದ ವಸ್ತುಗಳ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ‌.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com