Back
Bagalkot587103blurImage

Bagalkot: ನಮ್ಮ ಪಾಕಿಸ್ತಾನ ಹೇಳಿಕೆಗೆ ತಿರುಗೇಟು ಕೊಟ್ಟ ಮಾಜಿ ಡಿಸಿಎಂ ಗೋವಿಂದ ಕಾರಜೋಳ

Somashekhar
May 22, 2025 09:52:21
Bagalkote, Karnataka

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ಪಾಕಿಸ್ತಾನ ಎಂದು ಭಾಷಣ ಮಾಡಿದ‌ ವಿಚಾರಕ್ಕೆ, ಬಾಗಲಕೋಟೆ ನಗರದಲ್ಲಿ ಮಾಜಿ ಡಿಸಿಎಂ ಸಂಸದ ಗೋವಿಂದ ಕಾರಜೋೞ ತಿರುಗೇಟು ನೀಡಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ಅವರು, ಬಹುಶಃ ಕಾಂಗ್ರೆಸ್ ನಾಯಕರ ನೆಂಟರೆಲ್ಲ ಪಾಕಿಸ್ತಾನದಲ್ಲಿ ಇದ್ದಂಗೆ ಕಾಣುತ್ತೆ ಎಂದು ಲೇವಡಿ ಮಾಡಿದ್ದಾರೆ. ಅದಕ್ಕಾಗಿ‌ ನಮ್ಮ ಪಾಕಿಸ್ತಾನ ಅಂತ ಸಂಬೋಧನೆ ಮಾಡ್ತಾ ಇದ್ದಾರೆ ಎಂಸು ಕಿಡಿಕಾರಿದರು. ನೋಡಿ ನಮ್ಮವೈರಿ ರಾಷ್ಟ್ರ,ನಮ್ಮ ಶತ್ರು ರಾಷ್ಟ್ರದ ಬಗ್ಗೆ ಯಾವ ಶಬ್ದಗಳಲ್ಲಿ ಮಾತಾಡಬೇಕೊ ಅದನ್ನೇ ಮಾತಾಡಬೇಕು. ನಮ್ಮ ಪಾಕಿಸ್ತಾನ ಅಂತ ಹೇಳಿದ್ರೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.ಯಾರೂ ಕೂಡ ಆ ಮಾತನ್ನ ಹೇಳಬಾರದು,ನಾವು ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಕಳೆದ 1947 ರಿಂದ ಇಲ್ಲಿಯವರೆಗೂ ಯುದ್ಧ ಮಾಡುತ್ತಲೇ ಬಂದಿದ್ದೇವೆ, ನಮಗೆ ಸಾಕಷ್ಟು ನಷ್ಟ ಪಾಕಿಸ್ತಾನದಿಂದ ಆಗಿದೆ. ಈವತ್ತು ಪಾಕಿಸ್ತಾನ ಉಗ್ರರನ್ನ ಪೋಷಣೆಮಾಡ್ತೆ,ಪಾಕಿಸ್ತಾನವನ್ನು ಒಬ್ಬ ಹಿರಿಯ ನಾಗರಿಕರಾಗಿ ಖಂಡಿಸಬೇಕಿತ್ತು.ನಮ್ಮ ಪಾಕಿಸ್ತಾನ ಅಂತ ಶಬ್ದ ಬಳಸಿದ್ದನ್.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com