Back
Bagalkot587103blurImage

Bagalkote - ದಾವಣಗೆರೆಯಲ್ಲಿ ಪೊಲೀಸ್ ಸಿಬ್ಬಂದಿಯ ಅಂತ್ಯಕ್ರಿಯೆ: ಸರ್ಕಾರಿ ಗೌರವಗಳೊಂದಿಗೆ ಸಂತಾಪ

Somashekhar
May 14, 2025 12:37:43
Bagalkote, Karnataka

ದಾವಣಗೆರೆಯಲ್ಲಿ ಲಾರಿ ಹರಿದು ಸಾವನ್ನಪ್ಪಿದ್ದ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಗ್ರಾಮದ ಪೊಲೀಸ್ ಸಿಬ್ಬಂದಿ ರಾಮಪ್ಪ ಪೂಜಾರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು.ಕಳೆದ ಮೇ.13 ರಂದು ದಾವಣಗೆರೆಯ ಹೆಬ್ಬಾಳು ಟೋಲ್ ಗೇಟನಲ್ಲಿ ಟ್ರಾಫಿಕ್ ಪೊಲೀಸ್ ಜೊತೆ ಕರ್ತವ್ಯ ನಿರ್ವಹಿಸುತ್ತಿರುವಾಗಿ ಏಕಾಏಕಿ ಲಾರಿ ಹರಿದ ಪರಿಣಾಮವಾಗಿ ಸಾವನ್ನಪ್ಪಿದ್ದರು.ಡಿ.ಎ.ಆರ್ ನಲ್ಲಿ ಕಾನ್ಸಟೇಬಲ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಇಂದು ಸ್ವಗ್ರಾಮ‌ ಹಿಪ್ಪರಗಿ ಯಲ್ಲಿ‌ ಗಾಳಿಯಲ್ಲಿ ಮೂರು ಸುತ್ತುಗುಂಡು ಹಾರಿಸಿ,ಮೌನಾಚರಣೆ ಮೂಲಕ ಅಂತಿಮ‌ ನಮನ ಸಲ್ಲಿಸಿ ಸಕಲ‌ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂಧಿ ಭಾಗಿಯಾಗಿದ್ದರು.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com