Back
Dakshina Kannada574199blurImage

Mangalore: ಕುತ್ತಾರ್ ಮದನಿನಗರದಲ್ಲಿ ಕೊಲೆಯಾದ ಯುವಕನ ಅಂತಿಮ ವಿಧಿ

Shamsheer
May 28, 2025 14:06:32
Karnataka
ದುಷ್ಕರ್ಮಿಗಳಿಂದ ನಿನ್ನೆ ಕೊಲೆಯಾದ ಅಬ್ದುಲ್ ಅಬ್ದುಲ್ ರಹಿಮಾನ್‌ ಯಾನೆ ಮೋನು ಅವರ ಮೃತದೇಹವನ್ನು ಕೊಳತ್ತಮಜಲಿಗೆ ಇಂದು ಬೆಳಗ್ಗೆ ಸಾಗಿಸಲಾಯಿತು. ಕುತ್ತಾರ್ ಮದನಿ ನಗರ ಮಸೀದಿಯಲ್ಲಿ ಅಬ್ದುಲ್ ರಹಿಮಾನ್‌ ಯಾನೆ ಮೋನು ಅವರ ಮಯ್ಯತ್ ಸ್ನಾನ ಮಾಡಲಾಯಿತು. ನಂತರ ಮಯ್ಯತ್ ನಮಾಝ್ ಬಳಿಕ ಪೊಲೀಸ್ ಬಂದೋಬಸ್ತ್‌ನಲ್ಲಿ ಮೃತದೇಹವನ್ನು ಕೊಂಡೊಯ್ಯಲಾಯಿತು. ಕುತ್ತಾರ್ , ತೊಕ್ಕೊಟ್ಟು, ಪಂಪ್ ವೆಲ್‌, ಮಿತ್ತಬೈಲ್‌ ‌ಮಾರ್ಗವಾಗಿ ಕೊಳತ್ತಮಜಲಿನ‌ ಮನೆಗೆ ಕೊಂಡೊಯ್ದು, ನಂತರ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್‌ ಆವರಣದಲ್ಲಿ ದಫನ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಸಂದರ್ಭ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಸಹಿತ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್‌ನ ನೇತೃತ್ವ ವಹಿಸಿದ್ದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com