Back
Bagalkot587102blurImage

Bagalkote - ಸಾಧನಾ ಸಮಾವೇಶದ ಎಫೆಕ್ಟ್, ಸಾರಿಗೆ ಬಸ್ ಇಲ್ಲದೇ ನವನಗರದಲ್ಲಿ ಪ್ರಯಾಣಿಕರ ಪರದಾಟ

Somashekhar
May 20, 2025 10:44:04
Bagalkote, Karnataka
ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯವಾದ ಹಿನ್ನೆಲೆ ಬಾಗಲಕೋಟೆಯ ನವನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಸರ್ಕಾರದ ಸಾಧನಾ ಸಮಾವೇಶಕ್ಕೆ ಬಾಗಲಕೋಟೆ ಜಿಲ್ಲೆಯಿಂದ ಎರಡನೂರು ಬಸ್ಸುಗಳು ಹೊಸಪೇಟೆಗೆ ತೆರಳಿರುವುದರಿಂದ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.ಬೆರಳಣಿಕೆಯಷ್ಟು ಬಂದ ಬಸ್ಸುಗಳನ್ನು ಹತ್ತಲು ಪ್ರಯಾಣಿಕರು ಜಟಾಪಟಿ‌ ನಡೆಸಬೇಕಾಯಿತು. ನೂಗು‌ನುಗ್ಗಲಿನಲ್ಲಿ ಬಸ್ಸುಗಳನ್ನ ಹತ್ತುವುದಕ್ಕೆ ಪ್ರಯಾಣಿಕರು ಹರಸಾಹಸ ನಡೆಸಿದರು.ಹಲವು ಪ್ರಯಾಣಿಕರಂತೂ ಬೆಳಿಗ್ಗೆಯಿಂದ ಬಸ್ಸುಗಳಿಗೆ ಕಾಯ್ದು ಸುಸ್ತಾಗಿ ಆಕ್ರೋಶ ಹೊರ ಹಾಕಿದರು. ಇನ್ನು ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರು ಕೇವಲ ಆಧಾರ ಕಾರ್ಡ್ ಇಟ್ಟುಕೊಂಡು ಬಂದಿದ್ದು,ಖಾಸಗಿ ವಾಹನ ಹಿಡಿದು ಊರು ತಲುಪಲು ಹಣ ಇರಲಾರದೇ ಪರದಾಡುವಂತಾಯಿತು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗೃತ ಕ್ರಮಗಳನ್ನ ತೆಗೆದುಕೊಳ್ಳಬೇಕಿತ್ತೆಂದು ಆಕ್ರೋಶ ಹೊರಹಾಕಿದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com