Back
Bagalkot587103blurImage

Bagalkote: ಕೆರೂರು ಪಿ.ಎಸ್.ಐ ವಿರುದ್ಧ ಗೂಂಡಾ ವರ್ತನೆ ಆರೋಪ

Somashekhar
May 17, 2025 09:41:00
Bagalkote, Karnataka
ವಯೋವೃದ್ಧರೊಬ್ಬರ ಕೈ ಮೂಳೆ ಮುರಿದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಿ.ಎಸ್.ಐ ಭೀಮಪ್ಪ ರಬಕವಿ ಗೂಂಡಾವರ್ತನೆ ತೋರಿರುವ ಆರೋಪ ಕೇಳಿ ಬಂದಿದೆ.ಬಾದಾಮಿ ತಾಲೂಕಿನ ಬೆಳ್ಳಿಖಿಂಡಿ ಗ್ರಾಮದ ವಯೋವೃದ್ಧ ಭೀಮಪ್ಪ ಮೇಟಿ ಅವರ ಎಡಗೈ ಬೆರಳು,ಹಾಗೂ ಕೈ ಮೂಳೆ ಮುರಿದಿದೆ. ಗ್ರಾಮದಲ್ಲಿ ತಿಪ್ಪೆ ವಿಷಯಕ್ಕೆ ಭೀಮಪ್ಪ ಮೇಟಿ ಹಾಗೂ ಪಡಿಯಪ್ಪ ವಗ್ಗರ ಕುಟುಂಬಸ್ಥರ ನಡುವೆ ತಕರಾರು ಇತ್ತು. ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಏರಿತ್ತು.ವಿಚಾರಣೆಗೆ ಕರೆತಂದಿದ್ದ ವಯೋವೃದ್ಧ ಭೀಮಪ್ಪ ಮೇಟಿ ಅವರ ಮೇಲೆ, ಪಿ.ಎಸ್.ಐ ಭೀಮಪ್ಪ‌ ರಬಕವಿ ಗೂಮಡಾವರ್ತನೆ ತೋರಿ ಕೈ ಮುರಿದಿದ್ದಾರೆಂದು ಆರೋಪಿಸಲಾಗಿದೆ. ಕೈ ಮುರಿದರೂ ನಿಯಮ ಬಾಹೀರವಾಗಿ ಎರಡು ದಿನಗಳ ಕಾಲ ವೃದ್ಧನನ್ಮ ಠಾಣೆಯಲ್ಲೇ ಇರಿಸಿಕೊಂಡಿದ್ದರು ಎಂಬ ಆರೋಒ ಕೇಳಿ ಬಂದಿದೆ. ನಂತರ ಗಾಯ ದೊಡ್ಡ ಪ್ರಮಾಣದಲ್ಲಾಗಿದೆ ಎಂದು ಪೊಲೀಸರ ಅರಿವಿಗೆ ಬಂದ ಕೂಡಲೇ ವೃದ್ಧನನ್ನ ಆಸ್ಪತ್ರೆಗೆ ಸೇರಿಸಲಾರದೇ,ಮನಗೆ ಬಿಟ್ಟು ಬಂದಿದ್ದಾರೆ.ಕಳೆದ ಬುಧವಾರ ಮೇಲೆ ಹಲ್ಲೆ ಮಾಡಿದ್ದಾರೆಂದು ಗಾಯಾಳು ಭೀಮಪ್ಪ ಆರೋಪಿಸಿದ್ದಾರೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com