Back
Bagalkot587103blurImage

Bagalkot - ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ ಎರಡು ನೂರು ಎಕರೆ ಜಾಗ

Somashekhar
May 15, 2025 15:57:32
Bagalkote, Karnataka
ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಎರಡು ನೂರು ಎಕರೆ ಜಮೀನು ನೀಡುವ ಭರವಸೆ ನೀಡಿದೆ ಎಂದು ಬಾಗಲಕೋಟೆ ಯೂನಿಯನ್ ಆಫ್ ಮರ್ಚಂಟ್ಸ್ ಮತ್ತು ಎಂಟರ್ಪೈನರ್ಸ ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಪದಾಧಿಕಾರಿಗಳು ನವನಗರದ ಯೂನಿಟ್ 3ರಲ್ಲಿ ಮಾದರಿಯ ಮಾರುಕಟ್ಟಿ ನಿರ್ಮಿಸಿ ಬಾಗಲಕೋಟೆ ನಗರದ ಹಿಂದಿನ ವ್ಯಾಪಾರ ವೈಭವವನ್ನು ಮರುಕಳಿಸಬೇಕೆನ್ನುವ ಉದ್ದೇಶದಿಂದ ಎರಡು ನೂರು ಎಕರೆ ಜಾಗೆ ನೀಡುವುದಕ್ಕೆ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದೆ ,ಇದಕ್ಕೆ ಶ್ರಮಿಸಿದ ಶಾಸಕ ಹೆಚ್.ವೈ.ಮೇಟಿ, ಎಂ.ಎಲ್.ಸಿ ಪಿ.ಹೆಚ್.ಪೂಜಾರ್, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ,ಮುಖಂಡ ಹೊಳೆಬಸು ಶೆಟ್ಟರ್ ಅವರನ್ನ ಅಭಿನಂದಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿರುಪಾಕ್ಷ ಅಮೃತಕರ್, ರವಿ ಕುಮಟಗಿ,ಡಾ.ಶೇಖರ್ ಮಾನೆ,ಶ್ರೀನಿವಾಸ ಬಳ್ಳಾರಿ,ಪವನ ಸೀಮಿಕೇರಿ,ಪುಕರಾಜ ಬೇತಾಳ,ರಾಮ ಮುಂದಡಾ,ನಾಗರಾಜ ಕುಪ್ಪಸ್ತ ಉಪಸ್ಥಿತರಿದ್ದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com