Back
Bagalkot587103blurImage

Bagalkot: ಸಿಡಿಲಿನ ಹೊಡೆತಕ್ಕೆ ಸುಟ್ಟು ಭಸ್ಮವಾದ ಮೇವಿನ ಬಣವೆ

Somashekhar
May 14, 2025 14:23:19
Bagalkote, Karnataka
ಸಿಡಿಲು ಬಡಿದ ಪರಿಣಾಮ ಮೇವಿನ ಬಣವೆ ಸುಟ್ಟು ಕರಕಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಮನ್ನಿಕಟ್ಟಿ ಗ್ರಾಮದಲ್ಲಿ ಜರುಗಿದೆ.ಕಳೆದ ದಿನ ರಾತ್ರಿ ಹೊತ್ತು ಗುಡುಗು ಸಿಡಿಲು ಸಹಿತ ಮಳೆ ಸುರಿದಿದ್ದು, ಸಿಡಿಲು ಬಡಿದ ಪರಿಣಾಮ ಅಂದಾಜು ಎಂಭತ್ತು ಸಾವಿರ ರೂಪಾಯಿ ಮೌಲ್ಯದ ಮೇವಿಣ ಬಣವೆ ಸುಟ್ಟು ಭಸ್ಮವಾಗಿದೆ.ಗ್ರಾಮದ ರೈತ ಪರಸಪ್ಪ ಜುಮನಾಳ ಅವರಿಗೆ ಸೇರಿದ ಮೇವಿನ ಬಣವೆ ಇದಾಗಿದೆ.ಜಾನುವಾರುಗಳಿಗಾಗಿ ಬೇರೆಯವರಿಂದ ಮೇವನ್ನು ಖರೀದಿಸಿದ್ದರು.ಸ್ಥಳಕ್ಕೆ ತಹಶೀಲ್ದಾರ ಅಮರೇಶ ಪಮ್ಮಾರ್ ಹಾಗೂ ಗ್ರಾಮದ ಆಡಳಿತ ಅಧಿಕಾರಿ ಮೋಮಿನ್ ಅವರು ಸ್ಥಳಕ್ಕೆ ಭೆಟಿ ನೀಡಿ ಪರಿಶೀಲಿಸಿದ್ದಾರೆ‌. ಈ ವೇಳೆ ತಹಶೀಲ್ದಾರ ಅವರು ಪ್ರಕೃತಿ ವಿಕೋಪ ನಿಧಿಯಿಂದ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com