
Hubli - ಯುದ್ಧ ವಿಚಾರನರೇಂದ್ರ ಮೋದಿ ಆತ್ಮಾವಲೋಕನ ಮಾಡಿಕೊಳ್ಳಬೇಕು- ಸಲೀಂ ಅಹ್ಮದ್
ಸರಕಾರಕ್ಕೆ ಎರಡು ವರ್ಷಗಳು ತುಂಬಿದ್ದು ವಿಜಯನಗರದ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಎರಡು ವರ್ಷದ ಆಡಳಿತ, ನುಡಿದಂತೆ ನಡೆದಿದ್ದೇವೆ. 20ರಂದು ನಡೆಯುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧೀ, ಸುರ್ಜೆವಾಲಾ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಎಲ್ಲ ಸಚಿವರು, ಶಾಸಕರು, ಮುಖಂಡರು, 3 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ದೇಶದ ವಿಷಯದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ರಾಜಕಾರಣ ಮಾಡುವುದಿಲ್ಲ, ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದೇವೆ. ಅವರೇ ರಾಜಕಾರಣ ಮಾಡುತ್ತಿದ್ದಾರೆ. ಇಷ್ಟು ಬೇಗ ಯಾರ ಮಾತು ಕೇಳಿ ನಿಲ್ಲಿಸಿದ್ದು? ಎಷ್ಟು ಸರಿ ಎಂದು ಪ್ರಧಾನಿ ನರೇಂದ್ರ ಮೋದಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸೈನಿಕರಿಗೆ ಅಭಿನಂದನೆ ಸಲ್ಲಿಸುವೆ ಎಂದರು
Dharwad - ರಾಜ್ಯಪಾಲರ ವಿರುದ್ಧ ಹೋರಾಟ: ಕಾನೂನು ಸಚಿವರ ಅಚ್ಚರಿಯ ಹೇಳಿಕೆ
Hubli - ಕೃಷಿ ಸಚಿವ ಚಲುವರಾಯಸ್ವಾಮಿ: ಮುಂಗಾರು ಬಿತ್ತನೆಗೆ ತಯಾರಿ ಸಂಪೂರ್ಣ!
ರಾಜ್ಯದಲ್ಲಿ ಅವಧಿ ಪೂರ್ವ ಮುಂಗಾರು ಪ್ರವೇಶ ಆಗಿದ್ದು ಅಗತ್ಯ ಮುಂಗಾರು ಬಿತ್ತನೆಗೆ ತಯಾರು ಮಾಡಿಕೊಳ್ಳಲಾಗಿದೆ ಎಂದು ಧಾರವಾಡದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಕಾಂಗ್ರೆಸ್ ಬಂದ್ರೆ ಬರಗಾಲ ಅಂತ ಬಿಜೆಪಿ-ಜೆಡಿಎಸ್ನವರು ಹೇಳಿದ್ರು ಕಳೆದ ವರ್ಷ ಯಶಸ್ವಿಯಾಗಿ ಕೃಷಿ ಕ್ಷೇತ್ರದಲ್ಲಿ ಯಶಸ್ವಿ ಕಂಡಿದ್ದು1.48 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆಗಿದೆ ಇದು ದೇಶದಲ್ಲಿ ಹೆಚ್ಚಿನ ಉತ್ಪಾದನೆ ಈ ವರ್ಷವೂ ಅದಕ್ಕಿಂತ ಹೆಚ್ಚಿನ ಉತ್ಪಾದನೆ ಗುರಿ ಇದೆಅದಕ್ಕಾಗಿ ಮುಂಗಾರಿಗೆ ತಯಾರಿ ಮಾಡಿಕೊಂಡಿದ್ದೇವೆಮುಂಚಿತವಾಗಿಯೇ ಮುಂಗಾರು ಪ್ರಾರಂಭ ಆಗುತ್ತಿದೆ ಆದರೆ ಎಲ್ಲ ಕಡೆ ಮೇ ನಂತರವೇ ಬಿತ್ತನೆ ಆಗುತ್ತದೆ ನಮ್ಮ ಇಲಾಖೆ ಎಲ್ಲ ಜಿಲ್ಲೆಯಲ್ಲಿ ತಯಾರಿ ಮಾಡಿಕೊಂಡಿದ್ದೇವೆರೈತರಿಗೆ ಸಹಕಾರ ಕೊಡಲು ಸಜ್ಜಾಗಿದ್ದೇವೆ ಇದಕ್ಕಾಗಿಯೇ ಬೆಳಗಾವಿ ವಿಭಾಗದ ಸಭೆ ಮಾಡುತ್ತಿದ್ದೇವೆ ಇನ್ನು ಏಳು ಜಿಲ್ಲೆಗಳ ಸಭೆ ಇಂದು ಧಾರವಾಡದಲ್ಲಿ ಮಾಡು
Hubli - ಮೋದಿ ಬಗ್ಗೆ ಇಲ್ಲ ಸಲ್ಲದ ಆರೋಪ ಸರಿಯಲ್ಲ- ಸೋಮಣ್ಣ
ಗದಗ-ವಾಡಿ ರೈಲು ಮಾರ್ಗ ಹಾಗೂ ಕುಷ್ಟಗಿಯಿಂದ ಹುಬ್ಬಳ್ಳಿಗೆ ನೂತನ ಪ್ಯಾಸೆಂಜರ್ ರೈಲನ್ನು ಮೇ.೧೫ (ಗುರುವಾರ) ರಂದು ಲೋಕಾರ್ಪಣೆ ಮಾಡಲಿದ್ದೇವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಧನೂರು ವಾಡಿ ಉತ್ತರ ಕರ್ನಾಟಕ ಭಾಗದ ಮಹತ್ವದ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಇದು ಮುಂಬಯಿ ಕರ್ನಾಟಕದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ನೇರವಾಗಿ ರೈಲು ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ. ಈ ಮಾರ್ಗವು ಮುಂದಿನ ದಿನಮಾನಗಳಲ್ಲಿ ಉತ್ತಮವಾದ ವಾಣಿಜ್ಯ ರೈಲು ಮಾರ್ಗಗಳಿಗೆ ಸಂಪರ್ಕ ಕೊಂಡಿಯಾಗಲಿದ್ದು, ಹುಬ್ಬಳ್ಳಿಯಿಂದ ಸೋಲಾಪುರ, ಹುಬ್ಬಳ್ಳಿಯಿಂದ ಬೀದರ್ ರೈಲು ಮಾರ್ಗಕ್ಕೆ ಇದು ಪರ್ಯಾಯ ಮಾರ್ಗ ಆಗಲಿದೆ.
Hubli - ರೌಡಿ ಶೀಟರ್ ಚಟುವಟಿಕೆ ನಡೆಸುವವರ ಮೇಲೆ ನಿರಂತರ ಕ್ರಮ- ಶಶಿಕುಮಾರ್
ವಹಿಸಿದ್ದೇವೆ ಇದುವರೆಗೆ 1,700 ರೌಡಿಗಳ ಮೇಲೆ ಎ, ಬಿ, ಸಿ ವರ್ಗ ಮಾಡಿ ಕ್ರಮ ಕೈಗೊಳ್ತಾ ಬಂದಿದ್ದೇವೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿಕೆ ನೀಡಿದರು ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, 1,158 ಜನರ ಮೇಲೆ ಮುಂಜಾಗ್ರತಾ ಕ್ರಮವಾಗಿ ಬಾಂಡ್ ಬರೆಸಿಕೊಂಡಿದ್ದೇವೆ 52 ಜನರ ಮೇಲೆ ಗಡಿಪಾರು ಆದೇಶವನ್ನ ಹೊರಡಿಸಿದ್ದೇವೆ ಪ್ರಮುಖ ರೌಡಿ ಶೀಟರ್ ಮೇಲೆ ಗುಂಡಾ ಆಕ್ಟ್ ಮಾಡಿದ್ದೇವೆ. ಇನ್ನು ಚಿಕ್ಕ ಚಿಕ್ಕ ಮಕ್ಕಳು ಕೈಯಲ್ಲಿದೆ ಚಾಕು ಇರಿಯುವ ಪ್ರಕರಣ ಬೆಳಕಿಗೆ ಬಂದಿವೆ ಸಾಮಾಜಿಕ ಜಾಲತಾಣಗಳನ್ನ ತಮ್ಮ ವೈಭವಕ್ಕೆ ಉಪಯೋಗಿಸಿಕೊಳ್ತಾ ಇದ್ದರೋ ಮೇಲೆ ನಿಗಾ ಇಟ್ಟಿದ್ದೇವೆ 28 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದೇವೆ ಈ ಪ್ರಕರಣಗಳಲ್ಲಿ 58 ರೌಡಿ ಶೀಟರ್ ಗಳನ್ನ ಗುರಿಯಾಗಿಸಿಕೊಂಡಿದ್ದೇವೆ 700 ಸಾಮಾಜಿಕ ಜಾಲತಾಣಗಳ ಖಾತೆಗಳನ್ನ ಅಳವಡಿಸಿಕೊಂಡಿದ್ದೇವೆ ಕಾಮೆಂ
ಸೆ.12 ರಂದು ವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ: ಗಂಗಾಧರ ದೊಡ್ಡವಾಡ
ಇಲ್ಲಿನ ಜಯಚಾಮರಾಜ ನಗರದ ಅಕ್ಕನ ಬಳಗ ಸಭಾಂಗಣದಲ್ಲಿ ಸೆ.12ರಂದು ಗಜಾನನ ಮಹಾಮಂಡಳದ ವತಿಯಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ 'ವೀರ ಸಂಗೊಳ್ಳಿ ರಾಯಣ್ಣ' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ' ಎಂದು ಮುಖಂಡ ಗಂಗಾಧರ ದೊಡ್ಡವಾಡ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, 'ಕಳೆದ 32 ವರ್ಷಗಳಿಂದ ಗಜಾನನ ಮಹಾಮಂಡಳವು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದೆ ಎಂದರು.
ವೆಂಕಟೇಶ ಕಾಟವೆಗೆ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳಿಂದ ಸನ್ಮಾನ
ಹುಬ್ಬಳ್ಳಿ: ನಗರದ ಮೂರುಸಾವಿರ ಮಠ ಮಹಾಸಂಸ್ಥಾನದ ಶ್ರೀ ಗುರುಸಿದ್ದೇಶ್ವರ ರಥೋತ್ಸವ ಅಂಗವಾಗಿ ಬಿಜೆಪಿ ಮುಖಂಡ, ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ ಅವರನ್ನ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಶಾಲು ಹೊದಿಸಿ ಸನ್ಮಾನ ಮಾಡಿದರು . ಈ ಸಂದರ್ಭದಲ್ಲಿ ವೆಂಕಟೇಶ ಕಾಟವೆ ಅವರು ಸರ್ವ ಧರ್ಮಗಳ ಸಮನ್ವಯದ ಕೇಂದ್ರ ಮೂರುಸಾವಿರ ಮಠ ಉತ್ತರ ಕರ್ನಾಟಕ ಭಾಗದಲ್ಲಿ ತನ್ನದೇ ಭವ್ಯ ಪರಂಪರೆಯನ್ನ ಹೊಂದಿದೆ. ಇಂದು ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ನನಗೆ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಿಂಹಾಸನಾರೂಢರಾಗಿ, ಭಕ್ತರಿಗೆ ಆಶೀರ್ವಾದ ನೀಡಿದ್ದು ಖುಷಿ ಆಗಿದೆ ಎಂದರು.
ಶ್ರೀವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
ಧಾರವಾಡ ಜಿಲ್ಲೆಯ ಶ್ರೀಕ್ಷೇತ್ರ ಹಾರೋಬೆಳವಡಿಯಲ್ಲಿ ಶ್ರಾವಣ ಸೋಮವಾರದಂದು ಜಾಗೃತ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಾಪೂಜೆ ಮತ್ತು ಜಾತ್ರಾ ಮಹೋತ್ಸವ ಅದ್ಭುತವಾಗಿ ಆಚರಿಸಲಾಯಿತು. ಜಿಲ್ಲೆಯ ಪೂಜ್ಯ ಶ್ರೀ ಬೂದಿ ಮಹಾಸ್ವಾಮಿಗಳ, ನವಲಗುಂಡದ ಪೂಜ್ಯ ನಾಗಲಿಂಗ ಸ್ವಾಮಿಗಳ ಮತ್ತು ಗರಗದ ಮಡಿವಾಳಜ್ಜ ಸ್ವಾಮಿಗಳ ಆಶೀರ್ವಾದ ಮತ್ತು ಸಲಹೆ ಮೇರೆಗೆ ಪೂಜೆಯನ್ನು ಬೆಳಿಗ್ಗೆ 6:00 ಕ್ಕೆ ನಡೆಸಲಾಯಿತು. ಪೂಜೆಯ ಸಂದರ್ಭದಲ್ಲಿ ಪ.ನಿ.ಪ್ರ. ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು ಮತ್ತು ಪ.ನಿ.ಪ್ರ. ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಪಾಲ್ಗೊಂಡರು. ಗ್ರಾಮದ ಹಿರಿಯರು, ಮುಖಂಡರು, ಯುವಕರು, ಮಹಿಳೆಯರು ಮತ್ತು ಮಕ್ಕಳ ಭಾಗವಹಿಸಿದರು.
ಆಂಬುಲೆನ್ಸ್ನಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಿ
ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಇತ್ತೀಚೆಗೆ ಗರ್ಭಿಣಿ ಮಹಿಳೆ ಆಂಬುಲೆನ್ಸ್ನಲ್ಲಿ ಹೆರಿಗೆ ಸಂದರ್ಭದಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಕುಟುಂಬಸ್ಥರು ಆಂಬುಲೆನ್ಸ್ ಕರೆ ನೀಡಿದ ಬಳಿಕ, ಕುಂದಗೋಳ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ದೇವನೂರು ಗ್ರಾಮಕ್ಕೆ ಆಗಮಿಸಿದಾಗ, ಹೆರಿಗೆ ನೋವು ಹೆಚ್ಚಿದ ಕಾರಣ, ದೇವನೂರು-ಕುಂದಗೋಳ ಮಾರ್ಗದಲ್ಲಿ ಆಂಬುಲೆನ್ಸ್ನಲ್ಲಿ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಆಂಬುಲೆನ್ಸ್ ನರ್ಸಿಂಗ್ ಆಫೀಸರ್ ಪರಶುರಾಮ ಚಂದಾವರಿ ಅವರ ಸಮಯಪ್ರಜ್ಞೆ ಮತ್ತು ಕಾಪಾಡಿದ ಸುರಕ್ಷತೆಯನ್ನು ಮೆಚ್ಚುಗೆಗೆ ಪಾತ್ರವಾಗಿದೆ.
ಹುಬ್ಬಳ್ಳಿಯ ಇಂಟರ್ಆಕ್ಟ್ ಕ್ಲಬ್ 'ಡಿಸ್ಟಿಕ್ ಡ್ಯಾನ್ಸ್ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ
ಕರ್ಣಾಟಕ ವಿಶ್ವವಿದ್ಯಾಲಯದಲ್ಲಿ ರೋಟರಿ ಕ್ಲಬ್ ಸೆವೆನ್ ಹಿಲ್ಸ್ ಮತ್ತು ಧಾರವಾಡ ಆಯೋಜಿಸಿದ 'ಡಿಸ್ಟಿಕ್ ಇಂಟರ್ಯಾಕ್ಟ್ ಲೀಡರ್ಶಿಪ್ ಪೋರಮ್ ಮಿಟ್' ಡ್ಯಾನ್ಸ್ ಸ್ಪರ್ಧೆಯಲ್ಲಿ, ಹುಬ್ಬಳ್ಳಿ ಮಿಡ್ಟೌನ್ ರೋಟರಿ ಕ್ಲಬ್ನ ಇಂಟರ್ಯಾಕ್ಟ್ ಕ್ಲಬ್ ಆಫ್ ಸರಸ್ವತಿ ಸ್ಕೂಲ್ ಪ್ರಥಮ ಬಹುಮಾನ ಗೆಲ್ಲಿತು. ಸ್ಪರ್ಧೆಯಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ 20 ತಂಡಗಳು ಭಾಗವಹಿಸಿತ್ತೆ. ವಿಜೇತರನ್ನು ರೋಟರಿ ಕ್ಲಬ್ನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಶಾಲೆಯ ಸಿಬ್ಬಂದಿ ಅಭಿನಂದಿಸಿದರು.
ಕೌಟುಂಬಿಕ ಕಲಹದಿಂದ ದೂರವಿರುವ ಪತಿ ಮತ್ತು ಪತ್ನಿಯನ್ನು NCHRS ಒಂದುಗೂಡಿಸುತ್ತದೆ
ರಾಷ್ಟ್ರೀಯ ಅಪರಾಧ ಭ್ರಷ್ಟಾಚಾರ ನಿಯಂತ್ರಣ ಮತ್ತು ಮಾನವ ಹಕ್ಕುಗಳ ರಕ್ಷಣಾ ದಳ ವತಿಯಿಂದ ಹುಬ್ಬಳ್ಳಿ ತಾಲ್ಲೂಕಿನ ಅಂಚಟಗೇರಿ ಗ್ರಾಮದಲ್ಲಿ ೧೦ ವರ್ಷಗಳಿಂದ ದೂರಾಗಿದ್ದ ಪತಿ ಪತ್ನಿಯರನ್ನ ಒಂದುಗೂಡಿಸಲಾಗಿದೆ. ರಾಷ್ಟ್ರೀಯ ಅಪರಾಧ ಭ್ರಷ್ಟಾಚಾರ ನಿಯಂತ್ರಣ ಮತ್ತು ಮಾನವ ಹಕ್ಕುಗಳ ರಕ್ಷಣಾ ದಳದ ಅಧ್ಯಕ್ಷೆ ಲತಾ ಎನ್ ತೇರದಾಳ ಮುಂದಾಳತ್ವದಲ್ಲಿ ಕೌಟುಂಬಿಕ ವ್ಯಾಜ್ಯ ಬಗೆಹರಿಸಲಾಗಿದ್ದು. ಪತಿ ಮಂಜುನಾಥ ಶೋಧನೆ ಮಾಡಿ ಪತ್ನಿ ಹನಮವ್ವಳ್ಳನ್ನ ಭೋವಿ ವಡ್ಡರ ಸಮಾಜದ ಅಧ್ಯಕ್ಷರು ಮತ್ತು ಗ್ರಾಮದ ಹಿರಿಯರ ಸಮಕ್ಣಮ ಸಮಸ್ಯೆ ಬಗೆಹರಿಸಲಾಯಿತು.
ಪಶ್ಚಿಮ ವಿಧಾನಸಭಾ ಕ್ಷೇತ್ರದ 161 ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ರಾಜ್ಯ ವಿಧಾನಪರಿಷತ್ ವಾಜಪೇಯಿ ನಗರದಲ್ಲಿ (ಹೊಸ ತಾರಿಹಾಳ) ವಾಸಿಸುತ್ತಿರುವ 161 ಅರ್ಹ ಫಲಾನುಭವಿಗಳಿಗೆ ಅಧಿಕಾರ ಪತ್ರಗಳನ್ನು ವಿತರಿಸಿದರು. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಮಾರು 15 ವರ್ಷಗಳಿಂದ ಸಂರಕ್ಷಿತ ಪ್ರದೇಶವಾಗಿರುವ ಸದನದ ವಿರೋಧ ಪಕ್ಷದ ಉಪನಾಯಕ ಅರವಿಂದ ಬೇಳ ಅವರು ಗಂಟೆಗಳನ್ನು ವಿತರಿಸಿದರು.
ರಾಜ್ಯ ಸರ್ಕಾರದ ಪ್ರಸ್ತಾವನೆ ಬರುವ ಮುನ್ನವೇ ಬೆಂಬಲ ಬೆಲೆ ಜೋಶಿ
ಹುಬ್ಬಳ್ಳಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ರಾಜ್ಯದಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಎಂಎಸ್ಪಿ ಯೋಜನೆಯಡಿಯಲ್ಲಿ ಹೆಸರುಕಾಳು ಪ್ರತಿ ಕ್ವಿಂಟಾಲ್ಗೆ ₹8,682 ಬೆಂಬಲ ಬೆಲೆ ನೀಡಲಾಗುವುದು. ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ತೊಂದರೆ ಅನುಭವಿಸುತ್ತಿರುವ ರೈತರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಕೊಂಕಣ ಮರಾಠ ಸಮಾಜದ ಅಧ್ಯಕ್ಷರಾಗಿ ರವಿ ನಾಯ್ಕ ಆಯ್ಕೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕೊಂಕಣ ಮರಾಠ ಸಮಾಜದ ಅಧ್ಯಕ್ಷರಾಗಿ ರವಿ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಾಜದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ನಾಯಿಕ, ಸದಾನಂದ ಗಾಂವಕರ, ಮಾರುತಿ ಪವಾರ, ಮಲ್ಲಿನಾಥ ರಾಣಿ ಸಹ ಅಧ್ಯಕ್ಷ ಹಾಗೂ ಸುನೀಲ ನಾಯಿಕ ಕೋಶಾಧ್ಯಕ್ಷರಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಜೀವ ನಾಯ್ಕ, ಪ್ರಕಾಶ ನಾಯ್ಕ, ವಿನಾಯಕ ಗಾಮಕಾರ, ವಿನೋದ ಸೆಲ್, ಜಗದೀಶ ರಾಣಿ, ರಾಜಶೇಖರ ನಾಯ್ಕ, ಕೃಷ್ಣ ದೇಸಾಯಿ, ರಾಜೀವ್ ನಾಯ್ಕ, ಅರುಣಕುಮಾರ ಸಾಳುಂಕೆ, ಬಿಜೇಶ ಸಾವಂತ, ಸಂಜೀವ ನಾಯ್ಕ, ಪ್ರಕಾಶ ಪವಾರ ಆಯ್ಕೆಯಾಗಿದ್ದಾರೆ.
ಪಿಓಪಿ ಗಣೇಶ ಮೂರ್ತಿ ಸೀಜ್: ೧೦೫ ವಿಗ್ರಹಗಳನ್ನು ವಶಪಡಿಸಿಕೊಂಡರು
ಧಾರವಾಡದ ಹೆಬ್ಬಳ್ಳಿ ಅಗಸಿ ರಸ್ತೆಯ ಗಾಂಧಿಚೌಕ್ ಬಳಿ ನಿಷೇಧಿತ ಪ್ಲಾಸ್ಟರ್ ಆಫ್ ಫ್ಯಾರಿಸ್ (ಪಿಓಪಿ) ೧೦೫ ಗಣೇಶ ಮೂರ್ತಿಗಳನ್ನು ಶನಿವಾರ ಸೀಜ್ ಮಾಡಲಾಗಿದೆ. ಲಕ್ಷ್ಮಣರಾವ್ ಮೋರೆ ಎಂಬ ಮೂರ್ತಿ ಮಾರಾಟಗಾರನಿಂದ ಪಿಓಪಿ ಗಣೇಶ ವಿಗ್ರಹಗಳನ್ನು ವಶಪಡಿಸಿಕೊಂಡು ಮಾಲಿನ್ಯ ನಿಯಂತ್ರಣ ಅಧಿಕಾರಿ ಐ.ಎಚ್.ಜಗದೀಶ್, ಪಾಲಿಕೆ ಆಯುಕ್ತ ಮಹೇಶ ಹಾಲಗಿ ಮತ್ತು ಪರಿಸರ ಅಭಿಯಂತರ ಅವಿನಾಶ ದಾಳಿ ನಡೆಸಿದರು. ಈ ಪ್ರಕರಣದ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಹುಬ್ಬಳ್ಳಿಯಲ್ಲಿ ಯು-ಜೀನಿಯಸ್ 3.0 ರಸಪ್ರಶ್ನೆ ಸ್ಪರ್ಧೆ: ತನ್ಮಯ್, ರಾಜಿ ವಿಜೇತರು
ಹುಬ್ಬಳ್ಳಿಯಲ್ಲಿ ಯೂನಿಯನ್ ಬ್ಯಾಂಕ್ ಆಯೋಜಿಸಿದ ಯು-ಜೀನಿಯಸ್ 3.0 ರಸಪ್ರಶ್ನೆ ಸ್ಪರ್ಧೆಯಲ್ಲಿ ಬೆಳಗಾವಿ ಜಿಎಸ್ಎಸ್ ಪಿಯು ಕಾಲೇಜಿನ ತನ್ಮಯ್ ಕುರುಂದ್ದಾಡ, ರಾಜಿ ಗೊಜಗೆರ್ಕ ವಿಜೇತರಾದರು. ಗೋಗಟೆ ಕಾಲೇಜಿನ ಪಾರ್ಥ ಶಿಂಧೆ, ಪೂರ್ವಿ ರಾಜಪುರೋಹಿತ ರನ್ನರ್-ಅಪ್ ಆದರು. 13 ಜಿಲ್ಲೆಗಳ 120 ಶಾಲೆಗಳ 906 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಓದುವ ಮಹತ್ವ ತಿಳಿಸಿದರು. ಜ್ಞಾನ ಪ್ರತಿಫಲನಕ್ಕೆ ರಸಪ್ರಶ್ನೆ ಸ್ಪರ್ಧೆ ಸಹಕಾರಿ ಎಂದು ಹೇಳಿದರು.
ಕುಮಾರಸ್ವಾಮಿ ವಿರುದ್ದ ಬಿಜೆಪಿ ʼಗಣಿʼ ಹುನ್ನಾರ: ದಿನೇಶ್ ಗುಂಡೂರಾವ್
ಹುಬ್ಬಳ್ಳಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ತಲೆ ಕಡಿಯಲು ರಾಜ್ಯಪಾಲರು ನಿರ್ಧರಿಸಿದ್ದಾರೆ. ಇದು ಬಿಜೆಪಿ ಮಾಡಿದ ಕೃತ್ಯ. ಜೆಡಿಎಸ್ ಪಕ್ಷವನ್ನು ತೊಲಗಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕರು ಜೆಡಿಎಸ್ ತೊರೆಯಬೇಕು ಎಂದು ಪಟ್ಟು ಹಿಡಿದಿದ್ದರು. ಇದೀಗ ಬಿಜೆಪಿಯವರೇ ಎಚ್.ಡಿ.ಕುಮಾರಸ್ವಾಮಿ ಅವರ ಹಳೆಯ ಪ್ರಕರಣವನ್ನು ಮುನ್ನೆಲೆಗೆ ತಂದಿದ್ದಾರೆ. ಇತ್ತೀಚೆಗೆ ಗಣಿ ಇಲಾಖೆಯಲ್ಲಿ ಹಗರಣ ನಡೆದಿದೆ. ಪ್ರಸ್ತುತ ಕೇಂದ್ರದಲ್ಲಿ ಗಣಿ ಸಚಿವರಾಗಿದ್ದಾರೆ.
ವಿಘ್ನೇಶ್ವರನ ಕೊರಳು ನಾಗಪ್ಪನಿಗೆ ಸುತ್ತಿಕೊಂಡಿದೆ; ಅದೃಶ್ಯ ಭಕ್ತ
ಹುಬ್ಬಳ್ಳಿ: ವಿಘ್ನೇಶ್ವರನ ವಿಗ್ರಹಕ್ಕೆ ನಾಗರಹಾವು ಸುತ್ತಿದ ಅದ್ಭುತ ದೃಶ್ಯ ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಶ್ರಾವಣ ಮಾಸ ಮುಗಿದಿದೆ. ಎಲ್ಲ ದೇವಸ್ಥಾನಗಳಲ್ಲೂ ಮೋಜು ಮಸ್ತಿ, ಪೂಜೆ ನಡೆಯುತ್ತದೆ. ಕೆಲವೇ ದಿನಗಳಲ್ಲಿ ಗಣೇಶ ಜಯಂತಿಯೂ ಬಂದಿತ್ತು, ಅದೇ ರೀತಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಚಿಕ್ಕದಾದ ಗಣೇಶ ಮಂದಿರ ನಿರ್ಮಾಣವಾಗಿದೆ. ನಿನ್ನೆ ರಾತ್ರಿ ವಿಘ್ನ ವಿನಾಯಕನ ಕೊರಳಿಗೆ ಹಾವು ಸುತ್ತಿಕೊಂಡ ಅದ್ಭುತ ದೃಶ್ಯ ಕಂಡುಬಂತು. ಸಾಕಷ್ಟು ಭಕ್ತರು ಆಗಮಿಸಿ ದರ್ಶನ ಪಡೆದರು.
ಕುಮಾರ ಪಾರ್ಕ್ನ ರೋಟರಿ ಸರಸ್ವತಿ ವಿದ್ಯಾಲಯ ಶಾಲೆಯಲ್ಲಿ ಉತ್ಕರ್ಷ ರೋಟರಿ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನೆ
ಹುಬ್ಬಳ್ಳಿ ನಗರದ ಗೋಕುಲ್ ರಸ್ತೆಯ ಕುಮಾರ ಪಾರ್ಕ್, ರೋಟರಿ ಸರಸ್ವತಿ ವಿದ್ಯಾಲಯ ಶಾಲೆಯಲ್ಲಿ ಉತ್ಕರ್ಷ ರೋಟರಿ ಇಂಟರಾಕ್ಟ್ ಕ್ಲಬ್ ಉದ್ಘಾಟಿಸಲಾಯಿತು. ರೋಟರಿ ಮಿಡ್ಟೌನ್ನ ಮಾಜಿ ಅಧ್ಯಕ್ಷ ರೋ. ಅಶ್ವಿನಿ ಸಂಘವಿ ನೂತನ ಅಧ್ಯಕ್ಷೆ ಕುಮಾರಿ ಪೂರ್ವಿ ಪಿ, ಉಮರ್ಜಿ, ಕಾರ್ಯದರ್ಶಿ ಕುಮಾರಿ ಸಂಜನಾ ಆರ್. ಕುಲಕರ್ಣಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಸಮಾಜಮುಖಿ ಕೆಲಸಗಳಿಗೆ ಇಂಟರ್ಯಾಕ್ಟ್ ಕ್ಲಬ್ ಉಪಯುಕ್ತವಾಗಿದೆ.
ಆಕ್ರಮಣಕಾರಿ ಬಡ್ಡಿ ವ್ಯವಹಾರಗಳು, 25 ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಪೊಲೀಸರು ಅಕ್ರಮ ಬಡ್ಡಿ ದಂಧೆಯಲ್ಲಿ ತೊಡಗಿದ್ದ ಪುಡಾರಿಗಳನ್ನು ಹಾಗೂ ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದ 25 ಮಂದಿ ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಹುಬ್ಬಳ್ಳಿ, ಧಾರವಾಡ ಸೇರಿ ನಾಲ್ಕು ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿದ್ದು, ಸಾರ್ವಜನಿಕರಿಂದ ಬಂದ ದೂರು ಆಧರಿಸಿ 25 ಮಂದಿಯನ್ನು ಬಂಧಿಸಲಾಗಿದೆ.
ಕೆಎಲ್ಇ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿಕಾರ್ಯಗಾರ
ಹುಬ್ಬಳ್ಳಿ ನಗರದ ಕೆಎಲ್ ಇ ಫಾರ್ಮಾಸ್ಯುಟಿಕಲ್ ಸೈನ್ಸಸ್ ಕಾಲೇಜು, ಔಷಧ ವಿಭಾಗ ಹಾಗೂ ಬೆಳಗಾವಿಯ ಕೆ.ಎಲ್.ಇ. ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕೈರೋ) ಇನ್ಸ್ಟಿಟ್ಯೂಷನ್ಸ್ ಇನ್ನೋವೇಶನ್ ಕೌನ್ಸಿಲ್ ಡಿಪಾರ್ಟ್ಮೆಂಟ್ ಇಂದು “ಲೀನ್ ಸ್ಟ್ರಾಟಾಫ್ ಮತ್ತು ಕನಿಷ್ಠ ಕಾರ್ಯಸಾಧ್ಯ ಉತ್ಪನ್ನ, ವ್ಯಾಪಾರ” ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿದೆ. ಶ್ರೀ ಅಮಿತ್, ಸಂಸ್ಥಾಪಕರು, ಬಯೋಸಿಲ್ ವಿಭಾಗ, ತಂತ್ರಜ್ಞಾನ ವಿಶ್ವವಿದ್ಯಾಲಯ, ಹುಬ್ಬಳ್ಳಿ, ಐಐಟಿ ಹೈದರಾಬಾದ್ ವಿವರಣಾತ್ಮಕ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬ್ರಷ್ಟಾಚಾರದಲ್ಲಿ ತೊಡಗಿದೆ:ಚಲವವಾದಿ ನಾರಯಾಣಸ್ವಾಮಿ
ಶಾಸಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿ, ಹುಬ್ಬಳ್ಳಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ವಿಕಾಸ ನಿಗಮ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದ 187 ಕೋಟಿ ರೂ. ಲೂಟಿ, ಮುಡಾದಲ್ಲಿ ದಲಿತ ಸಮುದಾಯದವರ ಭೂಮಿ ಲೂಟಿ, ಈಗ ಭೂಮಿ ನಮ್ಮದು ಎಂದು ಹೇಳುತ್ತಿದ್ದಾರೆ, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. . ಹೀಗಾಗಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಮೂವರು ಸಾಮಾಜಿಕ ಕಾರ್ಯಕರ್ತರು ದಾಖಲೆಗಳೊಂದಿಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದರು.
ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ
ಹುಬ್ಬಳ್ಳಿ: ಮಂತ್ರಾಲಯದಲ್ಲಿ ಗುರುರಾಯರ ಮಧ್ಯಾರಾಧನೆ ಹಿನ್ನೆಲೆಯಲ್ಲಿ ಕಲಿಯುಗದ ಕಾಮಧೇನು ಶ್ರೀಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇಂದು ವೃಂದಾವನದಲ್ಲಿ ಗುರುರಾಯರ 353ನೇ ಜನ್ಮದಿನಾಚರಣೆ ಅಂಗವಾಗಿ ನಗರದ ರಾಯರ ಮಠದಲ್ಲಿ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಾಘವೇಂದ್ರ ಸ್ವಾಮಿಗಳ ಮೂರ್ತಿಯನ್ನು ಚಿಕ್ಕ ರಥದಲ್ಲಿಟ್ಟು ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿ ರಥೋತ್ಸವ ಆಚರಿಸಲಾಯಿತು.
ಶ್ರೀ ಶಾಂತಿನಾಥ ತೀರ್ಥಂಕರರಿಗೆ ಹಾಲು ತುಪ್ಪದ ಮೊಸರು ಪಂಚಾಮೃತ ಅಭಿಷೇಕ
ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಅಮವಾಸ್ಯೆ ಹಾಗೂ ರಕ್ಷಾಬಂಧನ ಹಬ್ಬದ ನಿಮಿತ್ತ ಶಾಂತಿನಾಥ ತೀರ್ಥಂಕರ ದೇವರಿಗೆ ಹಾಲು, ತುಪ್ಪ ಇತ್ಯಾದಿಗಳಿಂದ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಬಾಹುಬಲಿ ಮಲ್ಲಿಗವಾಡ ಬಸವರಾಜ ಯೋಗಪ್ಪನವರ ಶಾಂತಪ್ಪ ದೊಡಮನಿ ಬಸಪ್ಪ ಯೋಗಪ್ಪನವರ ವರ್ಧಮಾನ್ ಮಲ್ಲಿಗವಾಡ ಯೋಗಪ್ಪನವರ ಜೈಪಾಲ ಯೋಗಪ್ಪನವರ ಸನ್ಮತಿ ನಾಗರಹಳ್ಳಿ ಸರಸ್ವತಿ ಮಲ್ಲಿಗವಾಡ ಅರುಣ ಮಗಳಪ್ಪನವರ ಈಳಪ್ಪನವರ ಉಪಸ್ಥಿತರಿದ್ದರು ಎಂದು ಅರ್ಜಿದಾರರಾದ ಜನಿವಾರ ಐಶ್ವರ್ಯ ತಿಳಿಸಿದರು.
ಚಿರತೆ ಸೆರೆಗೆ ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ.
ಧಾರವಾಡ ಜಿಲ್ಲೆಯ ಕಲಘಟಗಿ; ತಾಲೂಕಿನ ಮಲಕನಕೊಪ್ಪ ಗ್ರಾಮದ ಹೊರವಲಯದಲ್ಲಿ ರೈತನ ಜಮೀನಿನಲ್ಲಿ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಟ್ರ್ಯಾಪ್ ಹಾಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜಮೀನಿನ ಸುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶನಿವಾರ ರಾತ್ರಿ ಮತ್ತೆ ಚಿರತೆ ಹೆಜ್ಜೆ ಗುರುತುಗಳು ಕಂಡು ಬಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪ್ರಾದೇಶಿಕ ಅರಣ್ಯಾಧಿಕಾರಿ ಅರುಣಕುಮಾರ ಅಷ್ಟಗಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ನಾಯಿಯನ್ನು ಬೋನಿಗೆ ಹಾಕಿ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.
ಬಿಜೆಪಿ ತನ್ನ ತಪ್ಪನ್ನು ಮರೆಮಾಚಲು ಪ್ರತಿಭಟನೆ ನಡೆಸುತ್ತಿದೆ; ಶಾಸಕ ಕೋನರೆಡ್ಡಿ
2021ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮುಡಾ ಹಗರಣ ನಡೆದಿತ್ತು. ಈ ಘಟನೆಯ ನಂತರ ಬಿಜೆಪಿ ಯಾವ ಉದ್ದೇಶಕ್ಕಾಗಿ ಪಾದಯಾತ್ರೆ ಆರಂಭಿಸಿದೆ? ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ. ಬಿಜೆಪಿಯವರು ಸದನ ಸರಿಯಾಗಿ ನಡೆಯಲು ಬಿಡಲಿಲ್ಲ ಎಂದರೆ ಅವರ ಹುಳು ಹೊರಬಂದಿದೆ. ಬಿಜೆಪಿಯನ್ನು ಗುರಿಯಾಗಿಸಿಕೊಂಡು ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ರಾಜ್ಯದ ಜನತೆ ಸಿದ್ದರಾಮಯ್ಯ ಪರವಾಗಿದ್ದಾರೆ. ನಮ್ಮ ಸಿಎಂ ಐದು ಭರವಸೆಗಳನ್ನು ಈಡೇರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಏಳನೇ ವೇತನ ಆಯೋಗವನ್ನು ಖಂಡಿತವಾಗಿಯೂ ಜಾರಿಗೊಳಿಸಲಾಗಿದೆ.