icon-pinewzicon-zee
PINEWZ
become creator
Become a News Creator

Your local stories, Your voice

Follow us on
Download App fromplay-storeapp-store
Advertisement
Pinewz
580020
KMKallappa Mandyal, HubballiFollow16 May 2025, 07:45 am

Hubli - ಯುದ್ಧ ವಿಚಾರನರೇಂದ್ರ ಮೋದಿ ಆತ್ಮಾವಲೋಕನ ಮಾಡಿಕೊಳ್ಳಬೇಕು- ಸಲೀಂ ಅಹ್ಮದ್

Hubballi, Karnataka:

ಸರಕಾರಕ್ಕೆ ಎರಡು ವರ್ಷಗಳು ತುಂಬಿದ್ದು ವಿಜಯನಗರದ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಎರಡು ವರ್ಷದ ಆಡಳಿತ, ನುಡಿದಂತೆ ನಡೆದಿದ್ದೇವೆ. 20ರಂದು ನಡೆಯುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧೀ, ಸುರ್ಜೆವಾಲಾ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಎಲ್ಲ ಸಚಿವರು, ಶಾಸಕರು, ಮುಖಂಡರು, 3 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ದೇಶದ ವಿಷಯದಲ್ಲಿ ಕಾಂಗ್ರೆಸ್‌ ಯಾವುದೇ ಕಾರಣಕ್ಕೂ ರಾಜಕಾರಣ ಮಾಡುವುದಿಲ್ಲ, ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದೇವೆ. ಅವರೇ ರಾಜಕಾರಣ ಮಾಡುತ್ತಿದ್ದಾರೆ. ಇಷ್ಟು ಬೇಗ ಯಾರ ಮಾತು ಕೇಳಿ ನಿಲ್ಲಿಸಿದ್ದು? ಎಷ್ಟು ಸರಿ ಎಂದು ಪ್ರಧಾನಿ ನರೇಂದ್ರ ಮೋದಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸೈನಿಕರಿಗೆ ಅಭಿನಂದನೆ ಸಲ್ಲಿಸುವೆ ಎಂದರು

0
0
Report
Pinewz
580020
KMKallappa Mandyal, HubballiFollow15 May 2025, 03:08 pm

Dharwad - ರಾಜ್ಯಪಾಲರ ವಿರುದ್ಧ ಹೋರಾಟ: ಕಾನೂನು ಸಚಿವರ ಅಚ್ಚರಿಯ ಹೇಳಿಕೆ

Hubballi, Karnataka:ಹುಬ್ಬಳ್ಳಿ: ಕರ್ನಾಟಕ ಸಾರ್ವಜನಿಕ ( ಕೆಟಿಟಿಪಿ) ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯಿದೆ ಹಾಗೂ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ ಅಂಕಿತಾ ಹಾಕದೇ ಇರುವ ವಿಚಾರವಾಗಿ ರಾಜ್ಯಪಾಲರು ಅಂಕಿತ ಹಾಕದೇ ಇರುವ ಕುರಿತು ತಮಿಳುನಾಡು ಮಾದರಿಯಲ್ಲಿ ರಾಜ್ಯಪಾಲರ ವಿರುದ್ಧ ಹೋರಾಟಕ್ಕೆ ಚಿಂತನೆ ಇಲ್ಲ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಕರ್ನಾಟಕ ಸಾರ್ವಜನಿಕ ( ಕೆಟಿಟಿಪಿ) ಸಂಗ್ರಹಣೆಯಲ್ಲಿ ಪಾರದರ್ಶಕತೆ ಹಾಗೂ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ ಅಂಕಿತಾ ಹಾಕದೇ ಇರುವ ವಿಚಾರವಾಗಿ ಸರಕಾರ ಗಂಭೀರವಾಗಿ ಪರಿಗಣಿಸಿದೆಈಗಾಗಲೇ ಕರ್ನಾಟಕ ಸಾರ್ವಜನಿಕ ( ಕೆಟಿಟಿಪಿ) ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಬಿಲ್ ನ್ನ ರಾಜ್ಯಪಾಲರು ವಾಪಸು ಕಳುಹಿಸಿದ್ದಾರೆ ಶೀಘ್ರದಲ್ಲೇ ಇನ್ನೊಂದು ಸಲ ರಾಜ್ಯಪಾಲರಿಗೆ ಕಳುಹಿಸಿ ಕೊಡಲಾಗುವುದು ಎಂದರು.
0
0
Report
Pinewz
580020
KMKallappa Mandyal, HubballiFollow15 May 2025, 05:39 am

Hubli - ಕೃಷಿ ಸಚಿವ ಚಲುವರಾಯಸ್ವಾಮಿ: ಮುಂಗಾರು ಬಿತ್ತನೆಗೆ ತಯಾರಿ ಸಂಪೂರ್ಣ!

Hubballi, Karnataka:

ರಾಜ್ಯದಲ್ಲಿ ಅವಧಿ ಪೂರ್ವ ಮುಂಗಾರು ಪ್ರವೇಶ ಆಗಿದ್ದು ಅಗತ್ಯ ಮುಂಗಾರು ಬಿತ್ತನೆಗೆ ತಯಾರು ಮಾಡಿಕೊಳ್ಳಲಾಗಿದೆ ಎಂದು ಧಾರವಾಡದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಕಾಂಗ್ರೆಸ್ ಬಂದ್ರೆ ಬರಗಾಲ ಅಂತ ಬಿಜೆಪಿ-ಜೆಡಿಎಸ್‌ನವರು ಹೇಳಿದ್ರು ಕಳೆದ ವರ್ಷ ಯಶಸ್ವಿಯಾಗಿ ಕೃಷಿ ಕ್ಷೇತ್ರದಲ್ಲಿ ಯಶಸ್ವಿ ಕಂಡಿದ್ದು1.48 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆಗಿದೆ ಇದು ದೇಶದಲ್ಲಿ ಹೆಚ್ಚಿನ ಉತ್ಪಾದನೆ ಈ ವರ್ಷವೂ ಅದಕ್ಕಿಂತ ಹೆಚ್ಚಿನ ಉತ್ಪಾದನೆ ಗುರಿ ಇದೆಅದಕ್ಕಾಗಿ ಮುಂಗಾರಿಗೆ ತಯಾರಿ ಮಾಡಿಕೊಂಡಿದ್ದೇವೆಮುಂಚಿತವಾಗಿಯೇ ಮುಂಗಾರು ಪ್ರಾರಂಭ ಆಗುತ್ತಿದೆ ಆದರೆ ಎಲ್ಲ ಕಡೆ ಮೇ ನಂತರವೇ ಬಿತ್ತನೆ ಆಗುತ್ತದೆ ನಮ್ಮ ಇಲಾಖೆ ಎಲ್ಲ ಜಿಲ್ಲೆಯಲ್ಲಿ ತಯಾರಿ ಮಾಡಿಕೊಂಡಿದ್ದೇವೆರೈತರಿಗೆ ಸಹಕಾರ ಕೊಡಲು ಸಜ್ಜಾಗಿದ್ದೇವೆ ಇದಕ್ಕಾಗಿಯೇ ಬೆಳಗಾವಿ ವಿಭಾಗದ ಸಭೆ ಮಾಡುತ್ತಿದ್ದೇವೆ ಇನ್ನು ಏಳು ಜಿಲ್ಲೆಗಳ ಸಭೆ ಇಂದು ಧಾರವಾಡದಲ್ಲಿ ಮಾಡು

0
0
Report
Advertisement
Pinewz
580020
KMKallappa Mandyal, HubballiFollow15 May 2025, 05:37 am

Hubli - ಮೋದಿ ಬಗ್ಗೆ ಇಲ್ಲ ಸಲ್ಲದ ಆರೋಪ ಸರಿಯಲ್ಲ- ಸೋಮಣ್ಣ

Hubballi, Karnataka:

ಗದಗ-ವಾಡಿ ರೈಲು ಮಾರ್ಗ ಹಾಗೂ ಕುಷ್ಟಗಿಯಿಂದ ಹುಬ್ಬಳ್ಳಿಗೆ ನೂತನ ಪ್ಯಾಸೆಂಜ‌ರ್ ರೈಲನ್ನು ಮೇ.೧೫ (ಗುರುವಾರ) ರಂದು ಲೋಕಾರ್ಪಣೆ ಮಾಡಲಿದ್ದೇವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಧನೂರು ವಾಡಿ ಉತ್ತರ ಕರ್ನಾಟಕ ಭಾಗದ ಮಹತ್ವದ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಇದು ಮುಂಬಯಿ ಕರ್ನಾಟಕದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ನೇರವಾಗಿ ರೈಲು ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ. ಈ ಮಾರ್ಗವು ಮುಂದಿನ ದಿನಮಾನಗಳಲ್ಲಿ ಉತ್ತಮವಾದ ವಾಣಿಜ್ಯ ರೈಲು ಮಾರ್ಗಗಳಿಗೆ ಸಂಪರ್ಕ ಕೊಂಡಿಯಾಗಲಿದ್ದು, ಹುಬ್ಬಳ್ಳಿಯಿಂದ ಸೋಲಾಪುರ, ಹುಬ್ಬಳ್ಳಿಯಿಂದ ಬೀದ‌ರ್ ರೈಲು ಮಾರ್ಗಕ್ಕೆ ಇದು ಪರ್ಯಾಯ ಮಾರ್ಗ ಆಗಲಿದೆ. 

0
0
Report
Pinewz
580020
KMKallappa Mandyal, HubballiFollow14 May 2025, 07:15 am

Hubli - ರೌಡಿ ಶೀಟರ್ ಚಟುವಟಿಕೆ ನಡೆಸುವವರ ಮೇಲೆ ನಿರಂತರ ಕ್ರಮ- ಶಶಿಕುಮಾರ್

Hubballi, Karnataka:

 ವಹಿಸಿದ್ದೇವೆ ಇದುವರೆಗೆ 1,700 ರೌಡಿಗಳ ಮೇಲೆ ಎ, ಬಿ, ಸಿ ವರ್ಗ ಮಾಡಿ ಕ್ರಮ ಕೈಗೊಳ್ತಾ ಬಂದಿದ್ದೇವೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿಕೆ ನೀಡಿದರು ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, 1,158 ಜನರ ಮೇಲೆ ಮುಂಜಾಗ್ರತಾ ಕ್ರಮವಾಗಿ ಬಾಂಡ್ ಬರೆಸಿಕೊಂಡಿದ್ದೇವೆ 52 ಜನರ ಮೇಲೆ ಗಡಿಪಾರು ಆದೇಶವನ್ನ ಹೊರಡಿಸಿದ್ದೇವೆ ಪ್ರಮುಖ ರೌಡಿ ಶೀಟರ್ ಮೇಲೆ ಗುಂಡಾ ಆಕ್ಟ್ ಮಾಡಿದ್ದೇವೆ. ಇನ್ನು ಚಿಕ್ಕ ಚಿಕ್ಕ ಮಕ್ಕಳು ಕೈಯಲ್ಲಿದೆ ಚಾಕು ಇರಿಯುವ ಪ್ರಕರಣ ಬೆಳಕಿಗೆ ಬಂದಿವೆ ಸಾಮಾಜಿಕ ಜಾಲತಾಣಗಳನ್ನ ತಮ್ಮ ವೈಭವಕ್ಕೆ ಉಪಯೋಗಿಸಿಕೊಳ್ತಾ ಇದ್ದರೋ ಮೇಲೆ ನಿಗಾ ಇಟ್ಟಿದ್ದೇವೆ 28 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದೇವೆ ಈ ಪ್ರಕರಣಗಳಲ್ಲಿ 58 ರೌಡಿ ಶೀಟರ್ ಗಳನ್ನ ಗುರಿಯಾಗಿಸಿಕೊಂಡಿದ್ದೇವೆ 700 ಸಾಮಾಜಿಕ ಜಾಲತಾಣಗಳ ಖಾತೆಗಳನ್ನ ಅಳವಡಿಸಿಕೊಂಡಿದ್ದೇವೆ ಕಾಮೆಂ

0
0
Report
Advertisement
Back to top