Back
Chn
Chamarajanagar571313

ಚಾಮರಾಜನಗರದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯ ಭಾವೋದ್ರಿಕ್ತ ಕ್ಷಣಗಳು!

C ChnOct 21, 2024 14:31:20
Chamarajanagar, Karnataka:

ಚಾಮರಾಜನಗರದಲ್ಲಿ ಸೋಮವಾರ ಬೆಳಿಗ್ಗೆ 9.30 ರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಕವಾಯತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯು ನಡೆಯಿತು. ಈ ಸಂದರ್ಭದಲ್ಲಿ ಸತ್ರ ನ್ಯಾಯಾಧೀಶರಾದ ಕೃಷ್ಣ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಲಾಲ್, ಸಿಇಒ ಮೋನಾ ರೋತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಶ್ರೀಪತಿ, ಅರಣ್ಯಾಧಿಕಾರಿ ಡಾ.ಜಿ. ಸಂತೋಷ್ ಸೇರಿದಂತೆ ಇತರೆ ಗಣ್ಯರು ಗೌರವ ವಂದನೆ ಸ್ವೀಕರಿಸಿದರು. ಬಳಿಕ ನ್ಯಾಯಾಧೀಶರಾದ ಕೃಷ್ಣ ಸಮಾಜದ ಒಳಿತಿಗಾಗಿ ತಮ್ಮ ಬಲಿದಾನವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

0
Report
Chamarajanagar571313

ಚಾಮರಾಜನಗರ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆದ ಯುವ ದಸರಾ, ನಕ್ಕು ನಗಿಸಿದ ಮಿಮಿಕ್ರಿ ಗೋಪಿ

C ChnOct 09, 2024 06:18:39
Chamarajanagar, Karnataka:

ಚಾಮರಾಜನಗರ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆದ ಯುವ ದಸರಾ, ನಕ್ಕು ನಗಿಸಿದ ಮಿಮಿಕ್ರಿ ಗೋಪಿ ಮಂಗಳವಾರ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವ ಎರಡನೇ ದಿನದಲ್ಲಿ ಅದ್ದೂರಿಯಾಗಿ ವಿವಿಧ ಕಾರ್ಯಕ್ರಮಗಳು ನಡೆದವು. ಮಿಮಿಕ್ರಿ ಗೋಪಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಡಾ.ರಾಜ್ ಕುಮಾರ್ ಶಂಕರ್ ನಾಗ್, ಅಂಬರೀಶ್, ಹಾಗೂ ವಾಟಲ್ ನಾಗರಾಜ್ ಅವರ ಧ್ವನಿಯಲ್ಲಿ ಮಾತನಾಡಿ ಪ್ರೇಕ್ಷಕರನ್ನು ರಂಜಿಸಿದರು.

0
Report
Chamarajanagar571313

ದಸರಾ ಮಹೋತ್ಸವ: ಗೀತಾ ಹುಡೇದಾ ಅವರಿಂದ ಮ್ಯಾರಥಾನ್ ಗೆ ಚಾಲನೆ!

C ChnOct 08, 2024 10:46:14
Chamarajanagar, Karnataka:
ದಸರಾ ಮಹೋತ್ಸವ ಹಿನ್ನೆಲೆ ನಗರದಲ್ಲಿ ಮ್ಯಾರಥಾನ್ ಗೆ ಚಾಲನೆ ನೀಡಿದ ಎಡಿಸಿ ಗೀತಾ ಹುಡೇದಾ ಮಂಗಳವಾರ ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಚಾಮರಾಜನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಚೆಲುವ ಚಾಮರಾಜನಗರ ಜಿಲ್ಲಾ ದಸರಾ ಅಂಗವಾಗಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಈ‌‌ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು ಬಳಿಕ ಮಾತನಾಡಿದ ಅವರು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬೆಳೆಸಬೇಕಾಗಿದೆ. ಬಲ ಪಡಿಸುವ ಆಟೋಟಗಳಲ್ಲಿ ನಾವು ಹೆಚ್ಚು ಭಾಗವಹಿಸಬೇಕಿದೆ ಎಂದು ತಿಳಿಸಿದರು.
0
Report
Chamarajanagar571313

ಚಾಮರಾಜನಗರದ ೪೦ ವರ್ಷದ ಬಳಿಕ ಖಾಸಗಿ ದರ್ಬಾರ್: ದೇವರಿಗೆ ವಿಶೇಷ ಪೂಜೆ!

C ChnOct 08, 2024 10:45:01
Chamarajanagar, Karnataka:

ಚಾಮರಾಜನಗರದ ದಸರಾ ಮಹೋತ್ಸವದ ಅಂಗವಾಗಿ ೪೦ ವರ್ಷಗಳ ಬಳಿಕ ಚಾಮರಾಜೇಶ್ವರಸ್ವಾಮಿ ಖಾಸಗಿ ದರ್ಬಾರ್ ಏರ್ಪಡಿಸಲಾಯಿತು. ಈ ವೇಳೆ ಕೆಂಪನಂಜಾಂಬ ಸಮೇತ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ಜನನ ಮಂಟಪದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಮಮತ ಬಾಲಸುಬ್ರಹ್ಮಣ್ಯಂ, ಮತ್ತು ಇತರ ಗಣ್ಯರು ಭಾಗವಹಿಸಿದರು. ಸ್ವಾಮಿಗೆ ಬಹುಪರಾಕ್ ಹೇಳಲಾಗಿದ್ದು, ಈ ಪುಜಾ ಕೈಂಕರ್ಯಗಳು ಭಕ್ತಿ ಮತ್ತು ಶ್ರದ್ಧೆಯೊಂದಿಗೆ ನಡೆಯವುದು ಎಂದು ಪ್ರಕಟಿತವಾಗಿದೆ.

0
Report
Advertisement
Chamarajanagar571313

ಚಾಮರಾಜನಗರದಲ್ಲಿ ಅನಾಥವಾಗಿ ನಿಂತ ಚಿಕ್ಕ ರಥಕ್ಕೆ ಸಾರ್ವಜನಿಕರ ಆಕ್ರೋಶ!

C ChnOct 08, 2024 10:39:30
Chamarajanagar, Karnataka:
ನಗರದಲ್ಲಿ ಅನಾಥವಾಗಿ ರಸ್ತೆ ಬದಿಯಲ್ಲಿ ನಿಂತಿರುವ ಚಿಕ್ಕ ರಥ, ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಆಕ್ರೋಶ ಚಾಮರಾಜನಗರದಲ್ಲಿ ಹುಣ್ಣಿಮೆ ವೇಳೆಯಲ್ಲಿ ನಡೆಯುವ ಚಿಕ್ಕ ರಥ ಸೋಮವಾರ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಚಾಮರಾಜನಗರದ ಅಗ್ರಹಾರ ಬೀದಿಯಲ್ಲಿ ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿದೆ. ಇನ್ನೂ ಕೆಲ ವರ್ಷಗಳ ಹಿಂದೆ ಕಿಡಿಗೇಡಿಗಳು ದೊಡ್ಡ ರಥಕ್ಕೆ ಬೆಂಕಿ ಇಟ್ಟು ಹಲವಾರು ವರ್ಷಗಳ ಕಾಲ ರಥೋತ್ಸವ ಸ್ಥಗಿತಗೊಂಡಿತು. ಇವಾಗ ಚಿಕ್ಕ ರಥವನ್ನು ಅನಾಥವಾಗಿ ನಿಲ್ಲಿಸಿ ದೇವಸ್ಥಾನ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದೆ.
0
Report
Chamarajanagar571313

ನಟ ನಾಗ್ ಭೂಷಣ್ ಉದ್ಘಾಟಿಸಿದ ಯುವ ದಸರಾ: ಚಾಮರಾಜನಗರದ ಹೆಮ್ಮೆ!

C ChnOct 08, 2024 10:19:36
Chamarajanagar, Karnataka:

ಚೆಲುವ ಚಾಮರಾಜನಗರದ ದಸರಾ ಮಹೋತ್ಸವದ ಯುವ ದಸರಾವನ್ನು ನಟ ನಾಗ್ ಭೂಷಣ್ ಸೋಮವಾರ ರಾತ್ರಿ ಉದ್ಘಾಟಿಸಿದರು. ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆದ ಈ ಸಮಾರಂಭದಲ್ಲಿ ಮಾತನಾಡಿದ ಅವರು, ಕೊಳ್ಳೇಗಾಲ ತಾಲೂಕಿನ ಟಗರಪುರದಿಂದ ಬರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. "ನಮ್ಮ ಜಿಲ್ಲೆ ಸಂಪದ್ಭರಿತ ಮತ್ತು ಹೆಚ್ಚು ಹುಲಿಗಳಿರುವ ನಾಡಾಗಿದೆ," ಎಂದು ಹೇಳಿದರು. "ಹಿಂದುಳಿದ ಜಿಲ್ಲೆ ಎಂಬ ಹೆಸರನ್ನು ಹೊಡೆಯಲು ನಮ್ಮ ಹೊಣೆಗಾರಿಕೆ ಇದೆ." ಅವರು ಚಾಮರಾಜನಗರದ ಜಿಲ್ಲೆ ತಾಯಿಯ ಬಗ್ಗೆ ಪ್ರೀತಿ ವ್ಯಕ್ತಪಡಿಸಿದರು ಮತ್ತು ಇಲ್ಲಿನ ಯುವಕರನ್ನು ಅವರ ಭಾಷಾ ಸೊಗಡಿಯಲ್ಲಿ ಮಾತನಾಡಿಸುತ್ತಿದ್ದರು ಎಂದು ಉಲ್ಲೇಖಿಸಿದರು.

0
Report
Chamarajanagar571313

ನಗರದಲ್ಲಿ ಕಿತ್ತೂರು ಉತ್ಸವ ಮೆರವಣಿಗೆಗೆ ತಹಶಿಲ್ದಾರ್ ಗಿರಿಜಾಯಿಂದ ಚಾಲನೆ

C ChnOct 05, 2024 12:34:15
Chamarajanagar, Karnataka:
ನಗರದಲ್ಲಿ ಕಿತ್ತೂರು ಉತ್ಸವ ಮೆರವಣಿಗೆಗೆ ತಹಶಿಲ್ದಾರ್ ಗಿರಿಜಾಯಿಂದ ಚಾಲನೆ ಶನಿವಾರ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಚಾಮರಾಜನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 200ನೇ ವಿಜಯೋತ್ಸವ ಅಂಗವಾಗಿ ಕಿತ್ತೂರು ಉತ್ಸವ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತಹಶಿಲ್ದಾರ್ ಗಿರಿಜಾ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಮೆರವಣಿಗೆ ನಡೆಯಿತು.
0
Report
Chamarajanagar571313

ವಾಲ್ಮೀಕಿ ಜಯಂತಿಯಲ್ಲಿ ಶಂಕುಸ್ಥಾಪನೆ ಇಲ್ಲದಿದ್ದರೆ, ಸಮುದಾಯ ಏನು ಮಾಡುತ್ತದೆ?

C ChnOct 05, 2024 12:33:22
Chamarajanagar, Karnataka:

ಚಾಮರಾಜನಗರದ ತಾಲ್ಲೂಕು ನಾಯಕರ ವಿದ್ಯಾಭಿವೃದ್ಧಿ ಸಂಘದ ಉಪಾಧ್ಯಕ್ಷ ಶ್ರೀನಿವಾಸನಾಯಕ ಅವರು ಮಾತನಾಡುತ್ತಾ, 10 ವರ್ಷಗಳಿಂದ ವಾಲ್ಮೀಕಿ ಪುತ್ಥಳಿ ನಿರ್ಮಾಣದ ಬೇಡಿಕೆಯಿರುವ ನಾಯಕ ಸಮುದಾಯದ ಪರವಾಗಿ, ಜಿಲ್ಲಾಡಳಿತವು ಅಕ್ಟೋಬರ್ 17ರಂದು ವಾಲ್ಮೀಕಿ ಜಯಂತಿಯಂದು ಶಂಕುಸ್ಥಾಪನೆ ಮಾಡದಿದ್ದರೆ, ಸಮುದಾಯವೇ ಶಂಕುಸ್ಥಾಪನೆ ನೆರವೇರಿಸುವುದಾಗಿ ಎಚ್ಚರಿಕೆ ನೀಡಿದರು. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ ಶಂಕುಸ್ಥಾಪನೆ ಮಾಡದಿದ್ದರೆ, ವಾಲ್ಮೀಕಿ ಜಯಂತಿ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸಲಾಗುವುದು ಎಂದು ತಿಳಿಸಿದರು.

0
Report
Chamarajanagar571313

ನಗರದಲ್ಲಿ ಗಣಪತಿ ಮೆರವಣಿಗೆ ಮಳೆ‌ ಅಡ್ಡಿ, ಮಳೆಯಲ್ಲೇ ಘೋಷಣೆ

C ChnOct 05, 2024 11:03:06
Chamarajanagar, Karnataka:
ನಗರದಲ್ಲಿ ಗಣಪತಿ ಮೆರವಣಿಗೆ ಮಳೆ‌ ಅಡ್ಡಿ, ಮಳೆಯಲ್ಲೇ ಘೋಷಣೆ ಶುಕ್ರವಾರ ಸಂಜೆ 4 ಗಂಟೆ ಸಮಯದಲ್ಲಿ ಚಾಮರಾಜನಗರದ ಗುಂಡ್ಲುಪೇಟೆ ವೃತ್ತದಲ್ಲಿ ಭಾರಿ ಮಳೆ ಹಿನ್ನೆಲೆ ಗಣಪತಿ ಮೆರವಣಿಗೆಗೆ ಮಳೆ ರಾಯ ಕೆಲಕಾಲ ಅಡ್ಡಿಪಡಿಸಿದ. ಗುಂಡ್ಲುಪೇಟೆ ವೃತ್ತದಲ್ಲಿ ಭಾರಿ ಮಳೆಯಿಂದ ಗಣಪತಿಗೆ ಥಾರ್ ಪಾಲ್ ಹಾಕಿ ಮುಚ್ಚಲಾಗಿತ್ತು. ಇನ್ನೂ ಮಳೆಯಿಂದ ಮೆರವಣಿಗೆ ಕೆಲಸ ಕಾಲ ಸ್ಥಗಿತಗೊಂಡಿತು. ಕಲಾ ತಂಡಗಳು ಮಳೆಯಿಂದ ರಕ್ಷಣೆಗೆ ಅಂಗಡಿ ಮುಗ್ಗಟ್ಟು ಬಳಿ ಆಶ್ರಯ ಪಡೆದರು. ಭಜರಂಗದಳ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಮಳೆಯಲ್ಲೇ ಘೋಷಣೆ ಕೂಗಿ ಸಂಭ್ರಮಿಸಿದರು. ನಂತರ ಮಳೆ ಕಡಿಮೆಯಾದ ಬಳಿಕ ಮೆರವಣಿಗೆ ನಿಧಾನವಾಗಿ ಸಾಗಿತ್ತು.
0
Report
Chamarajanagar571313

ರಾಮನ ಅವತಾರ ಗಣಪತಿ ವಿಸರ್ಜನೆ ಹಿನ್ನೆಲೆ ಅದ್ದೂರಿ ಮೆರವಣಿಗೆ, ಕಣ್ಮನ ಸೆಳೆದ ಕಲಾತಂಡಗಳು

C ChnOct 05, 2024 04:20:54
Chamarajanagar, Karnataka:

ರಾಮನ ಅವತಾರ ಗಣಪತಿ ವಿಸರ್ಜನೆ ಹಿನ್ನೆಲೆ ಅದ್ದೂರಿ ಮೆರವಣಿಗೆ, ಕಣ್ಮನ ಸೆಳೆದ ಕಲಾತಂಡಗಳು ಶುಕ್ರವಾರ ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಚಾಮರಾಜನಗರದಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿಯ ರಾಮನ ಅವತಾರದ ಗಣಪತಿ ವಿಸರ್ಜನೆ ಅಂಗವಾಗಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಅವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ನಂದಿ ಧ್ವಜ, ಗೊರವರ ಕುಣಿತ, ಯುವಕ ಕುಣಿತ ಸೇರಿದಂತೆ 10ಕ್ಕೂ ಹೆಚ್ಚು ವಿವಿಧ ಸಾಂಸ್ಕ್ರತಿಕ ಕಲಾ ತಂಡಗಳು ಕಣ್ಮನ ಸೆಳೆದವು. 

0
Report
Chamarajanagar571313

ಗಣಪತಿ ವಿಸರ್ಜನೆ ಹಿನ್ನೆಲೆ ನಗರದಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್‌

C ChnOct 05, 2024 04:19:32
Chamarajanagar, Karnataka:
ಗಣಪತಿ ವಿಸರ್ಜನೆ ಹಿನ್ನೆಲೆ ನಗರದಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್‌ ಚಾಮರಾಜನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿಯ ವತಿಯಿಂದ 62 ನೇ ವರ್ಷದ ರಾಮನ ಅವತಾರದ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ಶುಕ್ರವಾರ ಬೆಳಿಗ್ಗೆ ೧೦ ಗಂಟೆ ಸಮಯದಲ್ಲಿ ಚಾಮರಾಜನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದ ಚಾಮರಾಜೇಶ್ವರ ದೇವಸ್ಥಾನ, ರಥದ ಬೀದಿ, ಡಿವಿಯೇಷನ್ ರಸ್ತೆ, ಗುಂಡ್ಲುಪೇಟೆ ವೃತ್ತ, ಸಂತೇಮರಳ್ಳಿ ವೃತ್ತ, ಕೊಳದ ಬೀದಿ, ಹಾಗೂ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
0
Report
Chamarajanagar571313

ಭುವನೇಶ್ವರಿ ವೃತ್ತದಲ್ಲಿ ಕಳ್ಳತನ: ಲಕ್ಷಾಂತರ ರೂಪಾಯಿ ವಸ್ತುಗಳು ಕಳವು!

C ChnOct 04, 2024 06:36:15
Chamarajanagar, Karnataka:
ನಗರದ ಭುವನೇಶ್ವರಿ ವೃತ್ತದ ಬಳಿ ಸರಣಿ ಕಳ್ಳತನ,‌ ಹಣ ಸೇರಿ ಲಕ್ಷಾಂತರ ರೂಪಾಯಿ ವಸ್ತುಗಳು ಕಳವು ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿರುವ ಸ್ವಾಗತ್ ಟ್ರೇಡರ್ಸ್ ಹಾಗೂ ಅಕ್ಕ ಪಕ್ಕದ ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದೆ. ಅಂಗಡಿಗಳಲ್ಲಿ ಇದ್ದ ಹಣ ಹಾಗೂ ಲಕ್ಷಾಂತರ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ. ಕಳ್ಳತನವು ಗುರುವಾರ ಬೆಳಗಿನ ಜಾವದ ಸಮಯದಲ್ಲಿ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನೂ ಗುರುವಾರ ಬೆಳಿಗ್ಗೆ 10.30ಕ್ಕೆ ಸ್ಥಳಕ್ಕೆ ಪೊಲೀಸರು ಹಾಗೂ ಶ್ವಾಮದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
0
Report
Chamarajanagar571313

ರಾಮದಾಸ್‌ ಅವರಿಂದ ನಗರದಲ್ಲಿ ಗಣಪತಿ ವಿಸರ್ಜನೆಗೆ ಮಾರ್ಗ ಪರಿಶೀಲನೆ!

C ChnOct 04, 2024 06:35:28
Chamarajanagar, Karnataka:

ನಗರದಲ್ಲಿ ಗಣಪತಿ ಮೂರ್ತಿ ವಿಸರ್ಜನೆಯ ಪ್ರಯುಕ್ತ ಮಾರ್ಗಗಳನ್ನು ಪರಿಶೀಲಿಸಲು ಪೌರಾಯುಕ್ತ ರಾಮದಾಸ್‌ ಅವರು ಭೇಟಿ ನೀಡಿದರು. ನಾಳೆ ಚಾಮರಾಜನಗರ ರಥದ ಬೀದಿಯಲ್ಲಿ ಶ್ರೀ ವಿದ್ಯಾ ಗಣಪತಿಯ ವಿಸರ್ಜನೆ ಹಾಗೂ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ರಾಮದಾಸ್‌ ಅವರು ನಾಗರಿಕ ತಾಣಗಳನ್ನು ವಿಮರ್ಶಿಸಿದರು, ಇದರಲ್ಲಿ ಮೇಗಲ ನಾಯಕ ಬಡಾವಣೆ, ಅಂಬೇಡ್ಕರ್ ಬಡಾವಣೆ, ಗುಂಡ್ಲುಪೇಟೆ ವೃತ್ತ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೇಮರಳ್ಳಿ ವೃತ್ತ ಸೇರಿದಂತೆ ವಿವಿಧ ಸ್ಥಳಗಳು ಒಳಗೊಂಡಿದ್ದವು.

0
Report
Chamarajanagar571313

ಶ್ರೀ ವಿದ್ಯಾ ಗಣಪತಿ ವಿಸರ್ಜನೆ ಹಿನ್ನೆಲೆ ನಗರದಲ್ಲಿ ಪೊಲೀಸರಿಂದ ಪಥಸಂಚಲನ.

C ChnOct 03, 2024 04:14:50
Chamarajanagar, Karnataka:

ಶ್ರೀ ವಿದ್ಯಾ ಗಣಪತಿ ವಿಸರ್ಜನೆ ಹಿನ್ನೆಲೆ ನಗರದಲ್ಲಿ ಪೊಲೀಸರಿಂದ ಪಥಸಂಚಲನ ಅ.4 ರಂದು ಶ್ರೀ ವಿದ್ಯಾ ಗಣಪತಿ ವಿಸರ್ಜನೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು ಮೆರವಣಿಗೆ ಸಾಗುವ ಸ್ಥಳಕ್ಕೆ ಬುಧವಾರ ಸಂಜೆ 4.30 ರಲ್ಲಿ ಚಾಮರಾಜನಗರದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಹೊರಟ ಪಥಸಂಚಲನ ಅಂಬೇಡ್ಕರ್ ಬಡಾವಣೆ, ಡಿವಿಯೇಷನ್ ರಸ್ತೆ, ಗುಂಡ್ಲುಪೇಟೆ ವೃತ್ತ, ದೊಡ್ದ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೇಮರಳ್ಳಿ ವೃತ್ತ ಹಾಗೂ ವಿವಿಧ ಬಡಾವಣೆಯ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. 

0
Report
Chamarajanagar571313

ನಗರದ ಗಾಂಧಿ ಭವನದಲ್ಲಿ ಗಾಂಧೀಜಿಯವರ 155ನೇ ಜಯಂತಿ ಆಚರಣೆ

C ChnOct 02, 2024 10:38:54
Chamarajanagar, Karnataka:

ನಗರದ ಗಾಂಧಿ ಭವನದಲ್ಲಿ ಗಾಂಧೀಜಿಯವರ 155ನೇ ಜಯಂತಿ ಆಚರಣೆ ಬುಧವಾರ ಮಧ್ಯಾಹ್ನ ೧೨ ಗಂಟೆ ಸಮಯದಲ್ಲಿ ಚಾಮರಾಜನಗರದ ಹೊರ ವಲಯದ ಯಡಬೆಟ್ಟದ ಬಳಿ ಇರುವ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗಾಂಧೀಜಿಯವರ ಭಾವಚಿತ್ರಕ್ಕೆ ಹಾಗೂ ಪುತ್ಥಳಿಗೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಪುಷ್ಪರ್ಚಾನೆ ಮಾಡಿದರು.

1
Report
Chamarajanagar571313

ನಗರದಲ್ಲಿ ಶ್ರೀ ವಿದ್ಯಾ ಗಣಪತಿ ವಿಸರ್ಜನೆ ಹಿನ್ನೆಲೆ ಮೆರವಣಿಗೆ ಹೋಗುವ ರಸ್ತೆಗಳನ್ನು ವೀಕ್ಷಿಸಿದ ಡಿಸಿ, ಎಸ್ಪಿ

C ChnOct 02, 2024 09:57:08
Chamarajanagar, Karnataka:
ನಗರದಲ್ಲಿ ಶ್ರೀ ವಿದ್ಯಾ ಗಣಪತಿ ವಿಸರ್ಜನೆ ಹಿನ್ನೆಲೆ ಮೆರವಣಿಗೆ ಹೋಗುವ ರಸ್ತೆಗಳನ್ನು ವೀಕ್ಷಿಸಿದ ಡಿಸಿ, ಎಸ್ಪಿ ಅ.4 ರಂದು ಶ್ರೀ ವಿದ್ಯಾ ಗಣಪತಿ ವಿಸರ್ಜನೆ ಹಿನ್ನೆಲೆ ಗಣಪತಿ ಮೆರವಣಿಗೆ ಸಾಗುವ ಸ್ಥಳಕ್ಕೆ ಬುಧವಾರ ಮಧ್ಯಾಹ್ನ 2.30 ರಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು ನಗರದ ಸಂತೇಮರಳ್ಳಿ ವೃತ್ತ, ಕೊಳದ ಬೀದಿ, ಹಾಗೂ ದೊಡ್ಡ ಅರಸನ ಕೊಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಣಪತಿ ಮೆರವಣಿಗೆಗೂ ಸಗಮವಾಗಿ ನಡೆಯಲು ಅನುಕೂಲ ಮಾಡಿಕೊಡಬೇಕು ಹಾಗೂ ಹೆಚ್ಚಿನ ಭದ್ರತೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
1
Report
Chamarajanagar571444

ಚಾಮರಾಜನಗರ. ಜಿಂಕೆ ಭೇಟೆಗಾರನ ಬಂಧನ: ಇಬ್ಬರು ಎಸ್ಕೇಪ್

C ChnOct 02, 2024 05:30:43
Ramapura, Karnataka:

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿ ಜಿಂಕೆ ಬೇಟೆಯ ಆರೋಪದಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಬಂಧಿತ ಆರೋಪಿ ಹರೀಶ್ (27) ಎಂಬಾತ. ಅರಣ್ಯಾಧಿಕಾರಿಗಳ ತಂಡ, ಕಾಂತರಾಜ್ ಎಸ್ ಚವ್ಹಾಣ್ ಮತ್ತು ಉಪ ವಲಯ ಅರಣ್ಯಾಧಿಕಾರಿ ಆನಂದ ಹಲಸಪ್ಪಗೋಳ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ, ರಾಮಾಪುರ ವನ್ಯಜೀವಿ ವಲಯದ ಮಹದೇಶ್ವರ ಬೆಟ್ಟ ಬಳಿ ತೀವ್ರ ದಾಳಿ ನಡೆಸಿದರು. ಕಾರ್ಯಾಚರಣೆ ವೇಳೆ ತಕ್ಷಣವೇ ಮೂರು ಜಿಂಕೆಗಳನ್ನು ಬೇಟೆಯಾಡಿದ ಮಾಹಿತಿ ಪಡೆಯಲಾಯಿತು.

0
Report
Chamarajanagar571313

ಬಿಜೆಪಿಯವರು ರಾಜಕಾರಣವನ್ನ ಕಲುಷಿತಗೊಳಿದ್ದಾರೆ ನಗರದಲ್ಲಿ ಶಾಸಕ ಪುಟ್ಟರಂಗಶೆಟ್ಟಿ

C ChnOct 01, 2024 11:01:46
Chamarajanagar, Karnataka:

ಚಾಮರಾಜನಗರದಲ್ಲಿ ವಿಧಾನಸಭಾ ಸದಸ್ಯ ಪುಟ್ಟರಂಗಶೆಟ್ಟಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿಸಿದರು. ಅವರು ಹೇಳಿದರು, “ಬಿಜೆಪಿಯವರು ರಾಜಕಾರಣವನ್ನು ಕಲುಷಿತಗೊಳಿಸಿದ್ದಾರೆ. ಅವರು ನಮ್ಮ ಜಿಲ್ಲೆಗೆ ಏಕೈಕವಾಗಿ ಒಂದು ರೂಪಾಯಿ ಅನುದಾನ ಕೂಡ ಕೊಡಲಿಲ್ಲ, ಆದರೆ ಕೊಳ್ಳೇಗಾಲಕ್ಕೆ ೫೦೦ ಕೋಟಿ ಮತ್ತು ಗುಂಡ್ಲುಪೇಟೆಗೆ ಸಾವಿರಾರು ಕೋಟಿ ನೀಡಿದರು. ಇದರಿಂದಾಗಿ, ಬಿಜೆಪಿ ಸರ್ಕಾರದ ಮೇಲೆ ಕಿಡಿಕಾರುತ್ತಿದೆ.”

1
Report
Chamarajanagar571313

ನಗರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗಣಪತಿ ಹೋಮ-ಹವನ

C ChnSept 30, 2024 13:19:16
Chamarajanagar, Karnataka:
ನಗರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗಣಪತಿ ಹೋಮ-ಹವನ ಚಾಮರಾಜನಗರದ ರಥದ ಬೀದಿಗಳಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿ ವತಿಯಿಂದ 62 ನೇ ವರ್ಷದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಸೋಮವಾರ ಸಂಜೆ ಆರು ಗಂಟೆ ಸಮಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗಣಪತಿ ಹೋಮ ಹವನ ನಡೆಯಿತು. ಅರ್ಚಕರಾದ ಪ್ರದೀಪ್ ಕುಮಾರ್ ದೀಕ್ಷಿತ್ ಹಾಗೂ ನಾಗರಾಜ್ ದೀಕ್ಷಿತ್ ನೇತೃತ್ವದಲ್ಲಿ ಲೋಕಕಲ್ಯಾಣ ಹಾಗೂ ಕೃಷಿ ವರ್ಷದಲ್ಲಿ ಮಳೆ-ಬೆಳೆ ಸಮೃದ್ಧಿಗಾಗಿ ಪ್ರಾರ್ಥಿಸಿ ಹೋಮ-ಹವನವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿ ಪದಾಧಿಕಾರಿಗಳು ಭಾಗವಹಿಸಿದ್ದರು.
0
Report
Chamarajanagar571313

ನಿರ್ಮಲ ಸೀತಾರಾಮನ್ ಅವರನ್ನೂ ಕೂಡ ತನಿಖೆ ಮಾಡಬೇಕು ನಗರದಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

C ChnSept 30, 2024 04:57:12
Chamarajanagar, Karnataka:
ನಿರ್ಮಲ ಸೀತಾರಾಮನ್ ಅವರನ್ನೂ ಕೂಡ ತನಿಖೆ ಮಾಡಬೇಕು ನಗರದಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಭಾನುವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ನಿರ್ಮಲ ಸೀತಾ ರಾಮನ್ ವಿರುದ್ಧ ಎಫ್ ಐಆರ್ ವಿಚಾರ ಮಾತನಾಡಿ ಅವರನ್ನು ಕೂಡ ತನಿಖೆ ಮಾಡಬೇಕು, ಅವರನ್ನು ನಾವು ರಾಜೀನಾಮೆ ನೀಡಿ ಎಂದು ಕೇಳಲ್ಲ, ಎಲ್ಲಾ ರಾಜಕೀಯ ಪಕ್ಷಗಳು ಬಾಂಡ್ ಪಡೆಯುತ್ತವೆ. ಅಧಿಕಾರದಲ್ಲಿ ಇರುವ ಪಕ್ಷ ಹೆಚ್ಚು ಬಾಂಡ್ ತೆಗೆದುಕೊಳ್ಳತ್ತದೆ, ಆದ್ದರಿಂದ ಎಲ್ಲಾ ಪಕ್ಷಗಳು ಕಾರ್ಪೊರೇಟ್ ಕಂಪನಿಗಳ ಪರ ಇರುತ್ತದೆ ಎಂದು ಹೇಳಿಕೆ ನೀಡಿದರು
1
Report
Chamarajanagar571313

ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಎಂದು ನಗರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಪ್ರತಿಭಟನೆ

C ChnSept 26, 2024 09:21:06
Chamarajanagar, Karnataka:

ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಎಂದು ನಗರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಪ್ರತಿಭಟನೆ ಗುರುವಾರ ಬೆಳಿಗ್ಗೆ 11.30 ರಲ್ಲಿ ಚಾಮರಾಜನಗರ ತಾಲೂಕು ಕಚೇರಿಯ ಮುಂದೆ‌ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಘಟಕದಿಂದ ಗ್ರಾಮ ಆಡಳಿತ ಅಧಿಕಾರಿಗಳಿಂದ ಪ್ರತಿಭಟನೆ ನಡೆಸಿದರು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಸೇವಾ ಸೌಲಭ್ಯಗಳನ್ನು ಒದಗಿಸಲು ಮತ್ತು ಮೊಬೈಲ್ ಆ್ಯಪ್ ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗುತ್ತಿರುವ ಒತ್ತಡವನ್ನು ನಿಲ್ಲಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಸುವಂತೆ ತಾಲೂಕು ಅಧ್ಯಕ್ಷ ಶ್ರೀಧರ್ ಅವರು ತಿಳಿಸಿದ್ದಾರೆ.

0
Report
Chamarajanagar571127

ಬಿಸಲವಾಡಿ ಗ್ರಾಮದಲ್ಲಿ ಸ್ವಚ್ಚತೆಯೇ ಸೇವೆ ಅಂಗವಾಗಿ ಜಾಗೃತಿ ಜಾಥಾ

C ChnSept 26, 2024 09:19:21
Bisalavadi, Karnataka:

ಬಿಸಲವಾಡಿ ಗ್ರಾಮದಲ್ಲಿ ಸ್ವಚ್ಚತೆಯೇ ಸೇವೆ ಅಂಗವಾಗಿ ಜಾಗೃತಿ ಜಾಥಾ ಗುರುವಾರ ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಚತೆಯೇ ಸೇವೆ ಅಂಗವಾಗಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಚ್ಚತೆ ಬಗ್ಗೆ ಗ್ರಾಮಸ್ಥರಲ್ಲಿ ಹಾಗೂ ಜನರಿಲ್ಲಿ ಅರುವು ಮೂಡಿಸಲು ಜಾಥಾ ಮೆರವಣಿಗೆ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಹಾಗೂ ಮಹಿಳೆಯರು ಭಾಗವಹಿಸಿದ್ದರು.

0
Report
Chamarajanagar571313

ನಗರದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ.

C ChnSept 24, 2024 11:49:42
Chamarajanagar, Karnataka:

ನಗರದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ ಮಂಗಳವಾರ ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಚಾಮರಾಜನಗರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು. 

0
Report
Chamarajanagar571313

ಸೆ.26 ರಿಂದ ಬಿಎಸ್‌ವಿ ನಾಗಪ್ಪ ಶೆಟ್ಟಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ ನಗರದಲ್ಲಿ ಡಾ.ನಾಗಾರ್ಜುನ್ ಹೇಳಿಕೆ

C ChnSept 24, 2024 11:39:18
Chamarajanagar, Karnataka:

ಸೆ.26 ರಿಂದ ಬಿಎಸ್‌ವಿ ನಾಗಪ್ಪ ಶೆಟ್ಟಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ ನಗರದಲ್ಲಿ ಡಾ.ನಾಗಾರ್ಜುನ್ ಹೇಳಿಕೆ ಚಾಮರಾಜನಗರ ರೋಟರಿಸಂಸ್ಥೆ, ಮೈಸೂರು ಐವರಿ ರೋಟರಿ ಸಂಸ್ಥೆ ಸಹಯೋಗದಲ್ಲಿ ಸೆ.26 ರಂದು ಸಂಜೆ 5 ಕ್ಕೆ ನಗರದ ರೋಟರಿಭವನದ ಆವರಣದ ಹೊರಾಂಗಣದ ಕಟ್ಟಡದಲ್ಲಿ ಬಿಎಸ್ ವಿ ನಾಗಪ್ಪಶೆಟ್ಟಿ ಡಯಾಲಿಸಿಸ್ ಕೇಂದ್ರದ ಉದ್ಘಾಟನಾ ಸಮಾರಂಭ ಹಮ್ನಿಕೊಳ್ಳಲಾಗಿದೆ ಎಂದು ರೋಟರಿ ಪ್ರಾಜೆಕ್ಟ್ ಕೋ ಆರ್ಡಿನೇಟರ್ ಡಾ.ಆರ್. ಎಸ್.ನಾಗಾರ್ಜುನ್ ಹೇಳಿದರು. ಮಂಗಳವಾರ ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಚಾಮರಾಜನಗರದ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ.

0
Report
Chamarajanagar571313

ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ಇಂದು ಹುಣ್ಣಿಮೆ ಪ್ರಯುಕ್ತ ಹುಣ್ಣಿಮೆ ರಥೋತ್ಸವ

C ChnSept 19, 2024 05:40:06
Chamarajanagar, Karnataka:

ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ಹುಣ್ಣಿಮೆ ಪ್ರಯುಕ್ತ ಹುಣ್ಣಿಮೆ ರಥೋತ್ಸವ ಜೋರಾಗಿತ್ತು. ವಿಶೇಷವಾಗಿ ದೇವರಿಗೆ ಅಲಂಕರಿಸಿ ಪೂಜಾ ಕಾರ್ಯಗಳು ನೆರವೇರಿದವು. ಆಗಮಿಕರಾದ ದರ್ಶನ್ ಅರ್ಚಕರಾದ ರಾಮಕೃಷ್ಣ ಭಾರದ್ವಾಜ್ ಉತ್ಸವ ಸಮಿತಿ ಸದಸ್ಯರು,ಮಹದೇವ ಶೆಟ್ಟಿ ಮಸಣಶೆಟ್ಟಿ ಚೆನ್ನಲಿಂಗ ಶೆಟ್ಟಿ ನಂಜಪ್ಪ ನಾಗಶೆಟ್ಟಿ ನಾಗಶೆಟ್ರು, ಶ್ರೀನಿವಾಸ್ ನಾಗೇಶ್ ಸೋಮು ಹುಚ್ಚಯ್ಯ ಉಪ್ಪಾರ ಜನಾಂಗದ ಯಜಮಾನರುಗಳು ಹಾಗೂ ಮುಖಂಡರುಗಳು ಇಂದಿನ ಪ್ರಸಾದವನ್ನು ಯಾಗ ಹಾಗೂ ಸೇವಾರ್ಥ ಕಾರ್ಯಕ್ರಮವನ್ನು ವಹಿಸಿಕೊಂಡು ಉತ್ಸವವು ಸುಸೂತ್ರವಾಗಿ ನಡೆದು ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾದರು.

0
Report
Chamarajanagar571342

ಚಂದಕವಾಡಿಯಲ್ಲಿ ಲಕ್ಷಾಂತರ ರೂಪಾಯಿಗಳ ಕಳ್ಳತನ: ಪೊಲೀಸ್ ಕ್ರಮವಿಲ್ಲ!

C ChnSept 18, 2024 09:19:27
Chandakavadi, Karnataka:

ಚಾಮರಾಜನಗರ ಜಿಲ್ಲೆಯ ಚಂದಕವಾಡಿ ಗ್ರಾಮದಲ್ಲಿ ಎರಡು ದಿನಸಿ ಅಂಗಡಿಗಳು ಮತ್ತು ಒಂದು ಗೋಡೌನ್‌ನಲ್ಲಿ ಲಕ್ಷಾಂತರ ರೂಪಾಯಿಗಳ ಕಳ್ಳತನವಾಗಿದೆ. ಬುಧವಾರ ಬೆಳಗಿನ ಜಾವ ಅಂಗಡಿಯ ಬಾಗಿಲು ಮುರಿದು ಕಳ್ಳರು ವಸ್ತುಗಳನ್ನು ಕದ್ದಿದ್ದಾರೆ. ಸ್ಥಳಕ್ಕೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳು, ಡಾಗ್ ಸ್ವಾಕ್ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಕಳ್ಳತನಗಳ ಸಂಖ್ಯೆಯ ಹೆಚ್ಚಳವಾಗಿದೆ, ಸ್ಥಳೀಯರು ಪೊಲೀಸ್ ಅಧಿಕಾರಿಗಳನ್ನು ನೇಮಿಸಲು ಮನವಿ ಮಾಡಿದ್ದಾರೆ, ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಜಿಲ್ಲಾ ಪೊಲೀಸ್ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

0
Report