Back
Dakshina Kannada574199blurImage

Mangalore - ರಿಕ್ಷಾ ಚಾಲಕರು ಜವಾಬ್ದಾರಿಯಿಂದ ಕೆಲಸ ಮಾಡಿ: ವಿಧಾನ ಪರಿಷತ್‌ ಶಾಸಕ ಐವನ್‌ ಡಿʼಸೋಜಾ ಕರೆ

Shamsheer
May 17, 2025 12:25:46
Karnataka
ಮಂಗಳೂರಿನ ಬಜ್ಪೆ ಭಟ್ರಕೆರೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಿಕ್ಷಾ ನಿಲ್ದಾಣವನ್ನು ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರು ಉದ್ಘಾಟಿಸಿ ಮಾತನಾಡಿದರು. ರಿಕ್ಷಾ ಚಾಲಕರು ಜವಾಬ್ದಾರಿಯಿಂದ ರಿಕ್ಷಾ ಚಾಲನೆ ಮಾಡುವುದರ ಜೊತೆಗೆ ಸರಕಾರದಿಂದ ಸಿಗುವ ಪ್ರಯೋಜಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಐವನ್‌ ಡಿʼಸೋಜಾರವರು ರಾಜ್ಯ ಮೋಟಾರ್‌ ವಾಹನಕ್ಕೆ ಸಂಬಂಧಪಟ್ಟ ಅಸಂಘಟಿತ ಕಾರ್ಮಿಕರಿಗೆ ಸರಕಾರ ಈಗಾಗಲೇ ಅನೇಕ ಯೋಜನೆಗಳನ್ನು ತಂದಿದ್ದು, ಅದನ್ನು ನೋಂದಾವಣೆ ಮಾಡುವ ಮೂಲಕ ತಮ್ಮ ಕುಟುಂಬದ ರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು. ರಿಕ್ಷಾ ಚಾಲನೆ ವೃತ್ತಿ ಇಂದು ಗೌರವಯುತ ವೃತ್ತಿಯಾಗಿದ್ದು, ಸರಕಾರದಿಂದ ಏನನ್ನೂ ಸವಲತ್ತು ಬಯಸದೇ ತಮ್ಮ ದುಡಿಮೆಯ ಮೂಲಕ ಸರಕಾರಕ್ಕೆ ಮತ್ತು ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡುವಂತಹ ರಿಕ್ಷಾ ಚಾಲಕರಿಗೆ ಗೌರವ ಸಿಗುವ ರೀತಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com