Back
Manjukumar
Chamarajanagar571313

ಸೋಮವಾರಪೇಟೆ ಬಡಾವಣೆಯಲ್ಲಿ ಮೂರನೇ ಹೆಬ್ಬಾವು ಪ್ರತ್ಯಕ್ಷ, ಭಯಭೀತರಾದ ನಿವಾಸಿಗಳು

ManjukumarManjukumarSept 14, 2024 03:26:39
Chamarajanagar, Karnataka:

ಚಾಮರಾಜನಗರದ ಸೋಮವಾರಪೇಟೆ ಬಡಾವಣೆಯ ಎಚ್ ಪಿ ಪೆಟ್ರೋಲ್ ಬಂಕ್ ಬಳಿ ಸುಮಾರು 10-15 ಅಡಿ ಉದ್ದದ ಹೆಬ್ಬಾವು ಪ್ರತ್ಯಕ್ಷವಾಗಿದೆ. ಹೆಬ್ಬಾವು ಬಂಕ್ ಬಳಿ ಇರುವ ಪಂಚರ್ ಶಾಪ್ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತಿದೆ. ಬಳಿಕ ಸ್ಥಳೀಯರು ಭಯಭೀತರಾಗಿ ಉರಗಪ್ರೇಮಿ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇನ್ನೂ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಅಶೋಕ್ ಹೆಬ್ಬಾವನ್ನು ರಕ್ಷಣೆ ಮಾಡಿ ನಂತರ‌ ಕಾಡಿಗೆ ಬಿಟ್ಟಿದ್ದಾರೆ. ಇನ್ನೂ ಸೋಮವಾರಪೇಟೆ ಬಡಾವಣೆಯಲ್ಲಿ ಇದು ಮೂರನೇ ಹೆಬ್ಬಾವು ಪ್ರತ್ಯಕ್ಷವಾಗಿದ್ದು ನಿವಾಸಿಗಳಲ್ಲಿ ಭಯ ಉಂಟುಮಾಡಿದೆ.

0
Report
Chamarajanagar571313

ರಾಹುಲ್ ಗಾಂಧಿ ಮೀಸಲಾತಿ ವಿರೋಧಿ ಮನಸ್ಥಿತಿ ಇರುವ ವ್ಯಕ್ತಿ ನಗರದಲ್ಲಿ ಮಾಜಿ ಸಚಿವ ಎನ್.ಮಹೇಶ್

ManjukumarManjukumarSept 13, 2024 07:19:25
Chamarajanagar, Karnataka:
ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಕುರಿತು ನೀಡಿರುವ ಹೇಳಿಕೆ ಸಂವಿಧಾನ ವಿರೋಧಿ ಹೇಳಿಕೆ, ಬಿಜೆಪಿಯವರು ಸಂವಿಧಾನ ವಿರೋಧಿಗಳು ಅಂತ ಟೀಕೆ ಮಾಡುತ್ತಾರೆ ಆದರೆ ನಿಜವಾದ ಸಂವಿಧಾನ ವಿರೋಧಿಗಳು ಕಾಂಗ್ರೆಸ್ ಪಕ್ಷದವರು. ರಾಹುಲ್ ನೀಡಿರುವ ಹೇಳಿಕೆ ಅವಿವೇಕಿದತನದ ಹೇಳಿಕೆ. ನಾಳೆ ನಗರದಲ್ಲಿ ಕಾಂಗ್ರೆಸ್ ಹಟಾವೋ ಸಂವಿಧಾನ ಬಚಾವೋ ಅಭಿಯಾನದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
0
Report
Chamarajanagar571313

ನಗರದಲ್ಲಿ ಚಾಲಕನಿಗೆ ಚಾಕುವಿನಿಂದ ಹಲ್ಲೆ ಮಾಡಿದ ಯುವಕರು, ಸಿಸಿ‌ ಟಿವಿ ವೀಡಿಯೋ ವೈರಲ್

ManjukumarManjukumarSept 13, 2024 07:07:33
Chamarajanagar, Karnataka:
ಚಾಮರಾಜನಗರ ಸತ್ತಿ ರಸ್ತೆಯಲ್ಲಿರುವ ಹೆಚ್.ಪಿ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ರಾತ್ರಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ನಾಲ್ವರು ಮುಸ್ಲಿಂ ಯುವಕರು ಅಡ್ಡ ಹಾಕಿ ಹಲ್ಲೆ ಮಾಡಿ ಚಾಕುವಿನಿಂದ ತಲೆಗೆ ಚುಚ್ಚಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಬೈಕ್ ನಲ್ಲಿ ಬಂದ ನಾಲ್ವರು ಯುವಕರು ಕಾರು ಚಾಲಕ ಪ್ರಭು ಅವರಿಗೆ ಹಲ್ಲೆ ಮಾಡಿದ ನಾಲ್ವರು ಯುವಕರು ಮೇಲೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಮುಂದಿನ ಕ್ರಮ ಕೈಗೊಂಡಿದ್ದಾರೆ
0
Report
Chamarajanagar571313

ನಗರಸಭೆ ಅಧ್ಯಕ್ಷರಾಗಿ ಸುರೇಶ್, ಉಪಾಧ್ಯಕ್ಷರಾಗಿ ಮಮತ ಆಯ್ಕೆ, ಕಾಂಗ್ರೆಸ್ ಗೆ ಮುಖಭಂಗ

ManjukumarManjukumarSept 09, 2024 12:03:20
Chamarajanagar, Karnataka:
ಚಾಮರಾಜನಗರ ನಗರಸಭೆ ಕಚೇರಿಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ರಾಜಪ್ಪ ಅಧ್ಯಕ್ಷ ಸ್ಥಾನಕ್ಕ ಹಾಗೂ ಎಸ್ಡಿಪಿಐ ಪಕ್ಷದಿಂದ ಅಬ್ರಾರ್ ಮಹಮ್ಮದ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂದ ಸುರೇಶ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಮತ ನಾಮಪತ್ರ ಸಲ್ಲಿಸಿದರು. ಬಿಜೆಪಿ 15 ಮತಗಳನ್ನು ಪಡೆದುಕೊಂಡು ಗೆಲವು ಸಾಧಿಸಿತು. ಕಾಂಗ್ರೆಸ್ 14 ಮತಗಳನ್ನು ಪಡೆದುಕೊಂಡು ಒಂದು ಮತದ ಅಂತರದಿಂದ ಸೋಲು ಅನುಭವಿಸಿ ಕಾಂಗ್ರೆಸ್ ಮುಖಭಂಗವಾಗಿದೆ.
1
Report
Advertisement
Chamarajanagar571313

ಸೋಮವಾರಪೇಟೆ ಬಡಾವಣೆಯಲ್ಲಿ ಮತ್ತೊಂದು ಹೆಬ್ಬಾವು ಪ್ರತ್ಯಕ್ಷ, ಭಯಭೀತರಾದ ನಿವಾಸಿಗಳು

ManjukumarManjukumarSept 09, 2024 05:45:04
Chamarajanagar, Karnataka:

ಚಾಮರಾಜನಗರದ ಸೋಮವಾರಪೇಟೆ ಬಡಾವಣೆಯ ಎಚ್ ಪಿ ಪೆಟ್ರೋಲ್ ಬಂಕ್ ಬಳಿ ಸುಮಾರು 15 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ಹೆಬ್ಬಾವು ಬಂಕ್ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿತ್ತು. ಸ್ಥಳೀಯರು ಹೆಬ್ಬಾವನ್ನು ನೋಡಿ ಭಯಗೊಂಡು ಉರಗಪ್ರೇಮಿ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿದರು. ಸ್ನೇಕ್ ಅಶೋಕ್ ಸ್ಥಳಕ್ಕೆ ಬಂದು ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಸೋಮವಾರಪೇಟೆ ಬಡಾವಣೆಯಲ್ಲಿ ಇನ್ನೂ ಎರಡು ಹೆಬ್ಬಾವು ಕಾಣಿಸಿಕೊಂಡಿದ್ದು, ಇದರಿಂದ ಸ್ಥಳೀಯರಲ್ಲಿ ಭಯ ಉಂಟಾಗಿದೆ.

1
Report
Chamarajanagar571313

ಹೋಟೆಲ್ ಆವರಣದಲ್ಲಿ ಕಾಡಾನೆ ಓಡುತ್ತಿರುವ ವೀಡಿಯೋ ವೈರಲ್ ಆಗಿದೆ!

ManjukumarManjukumarSept 08, 2024 10:45:28
Chamarajanagar, Karnataka:
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮಯೂರ ಹೋಟೆಲ್ ಆವರಣದಲ್ಲಿ ಕಾಡಾನೆ ಓಡುತ್ತಿರುವುದು ಕಂಡು ಬಂದಿದೆ. ಇನ್ನೂ ಹೋಟೆಲ್ ನಲ್ಲಿರುವ ಸಿಬ್ಬಂದಿಗಳು ಹಾಗೂ ಪ್ರವಾಸಿಗರು ಆನೆ ನೋಡಿ ಭಯಭೀತರಾಗಿದ್ದಾರೆ. ಇನ್ನೂ ಹೋಟೆಲ್ ಆವರಣದಲ್ಲಿ ಓಡಾಡುತ್ತಿರುವ ಕಾಡಾನೆ ವೀಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
0
Report
Chamarajanagar571313

ಡಿಸಿ, ಎಡಿಸಿ ವಿರುದ್ಧ ನಗರದಲ್ಲಿ ಪೊಲೀಸರಿಗೆ ದೂರು ನೀಡಿದ ಅಂಬೇಡ್ಕರ್ ಪೀಪಲ್ ಪಾರ್ಟಿಯ ಅಧ್ಯಕ್ಷ ಕೃಷ್ಣ

ManjukumarManjukumarSept 08, 2024 05:53:38
Chamarajanagar, Karnataka:
ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಹಾಗೂ ಇತರರು ಸೇರಿ ಕಾನೂನು ಉಲ್ಲಂಘನೆ ಮಾಡಿ ಜಿಲ್ಲಾಡಳಿತ ಆವರಣದಲ್ಲಿ ಬಸವಣ್ಣ ಅವರ ಪುತ್ಥಳಿ ನಿರ್ಮಾಣ ಮಾಡುತ್ತಿದ್ದಾರೆ ಇವರು ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶನಿವಾರ ರಾತ್ರಿ ಚಾಮರಾಜನಗರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ಯುವ ಘಟಕದ ಅಧ್ಯಕ್ಷ ಸಿ.ಎಂ. ಕೃಷ್ಣ ಅವರು ಪಟ್ಟಣ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ರಾಜೇಶ್ ಅವರಿಗೆ ದೂರು ನೀಡಿದ್ದಾರೆ.
0
Report
Chamarajanagar571313

ಬಸವಣ್ಣನವರ ಪುತ್ಥಳಿ ನಿರ್ಮಾಣ ಕಾಮಗಾರಿ ನಿಲ್ಲಿಸಿ ಸ್ಥಳಾಂತರ ಮಾಡಬೇಕು ನಗರದಲ್ಲಿ ಯುವ ಘಟಕದ ಅಧ್ಯಕ್ಷ ಸಿ.ಎಂ.ಕೃಷ್ಣ

ManjukumarManjukumarSept 08, 2024 03:54:35
Chamarajanagar, Karnataka:

ಚಾಮರಾಜನಗರದಲ್ಲಿ ಅಂಬೇಡ್ಕರ್ ಪೀಪಲ್‌ ಪಾರ್ಟಿಯ ಯುವ ಘಟಕದ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ ಮಾತನಾಡಿ ಜಿಲ್ಲಾಡಳಿತ ಭವನದ ಮುಂದೆ ಜಿಲ್ಲಾಧಿಕಾರಿ ಹಾಗೂ ಎಡಿಸಿ ಅವರು ಸಮಾಜವನ್ನು ಮೆಚ್ಚಿಸಲು ಅಂಬೇಡ್ಕರ್ ಪುತ್ಥಳಿ ಬಳಿ‌ ಕಾನೂನು ಉಲ್ಲಂಘನೆ ಮಾಡಿ ಬಸವಣ್ಣನವರ ಪುತ್ಥಳಿಯನ್ನು ಅಕ್ರಮವಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಕೂಡಲೇ ಬಸವಣ್ಣನವರ ಪುತ್ಥಳಿ ಕಾಮಗಾರಿ ನಿಲ್ಲಿಸಿ ಮೊದಲು ನಿಗದಿಯಾಗಿದ್ದ ರಂಗಮಂದಿರದ ಮುಂದೆ ಸ್ಥಳಾಂತರ ಮಾಡಬೇಕು. 

0
Report
Chamarajanagar571313

ಶ್ರೀ ರಾಮನ ಪ್ರತಿರೂಪದ ಗಣಪತಿ ಪ್ರತಿಷ್ಠಾಪನೆ

ManjukumarManjukumarSept 07, 2024 15:49:57
Chamarajanagar, Karnataka:
ವಿದ್ಯಾಗಣಪತಿ ಮಂಡಳಿ ವತಿಯಿಂದ 62 ನೇ ವರ್ಷದ ಅಂಗವಾಗಿ ನಗರದ ರಥದಬೀದಿಯಲ್ಲಿ ಅಯೋಧ್ಯೆ ರಾಮನ ಪ್ರತಿರೂಪದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ ಶನಿವಾರ ಚಾಮರಾಜನಗರದ ರಥದ ಬೀದಿಯಲ್ಲಿರುವ ಗುರುನಂಜನ ಛತ್ರದ ಬಳಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ‌ ಈ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಅವರು ಪೂಜೆ ಸಲ್ಲಿಸಿದರು ಇದಕ್ಕೂ ಮೊದಲು ನಗರದ ಶ್ರೀ ಆದಿಶಕ್ತಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
0
Report
Chamarajanagar571313

ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ರೂಪ ಮೋಹನ್ ಅವಿರೋಧ ಆಯ್ಕೆ

ManjukumarManjukumarSept 04, 2024 15:57:35
Chamarajanagar, Karnataka:
ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರೂಪ ಮೋಹನ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ವಿಶಾಲಾಕ್ಷಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ನಿಗಧಿಯಾಗಿತ್ತು. ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರೂಪ ಮೋಹನ್ ಅವರು ಒಬ್ಬರೇ ನಾಮ ಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸುರೇಶ್ ಕುಮಾರ್ ಅಧಿಕೃತವಾಗಿ ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
0
Report
Chamarajanagar571313

ಸೋಮವಾರಪೇಟೆ ಬಡಾವಣೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ

ManjukumarManjukumarSept 02, 2024 04:21:38
Chamarajanagar, Karnataka:
ಭಾನುವಾರ ರಾತ್ರಿ ಚಾಮರಾಜನಗರದ ಸೋಮವಾರಪೇಟೆ ಬಡಾವಣೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದೆ. ಸೋಮವಾರಪೇಟೆ ಬಡಾವಣೆಯ ಶಿವಕುಮಾರಸ್ವಾಮಿ ಭವನದ ಮುಂದೆ ಸುಮಾರು 7 ರಿಂದ 8 ಅಡಿ ಉದ್ದದ ಹೆಬ್ಬಾವು ಸೇರಿಕೊಂಡಿದೆ. ಭಯಭೀತರಾದ ಜನ ಉರಗಪ್ರೇಮಿ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಇನ್ನೂ ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಅಶೋಕ್ ಹೆಬ್ಬಾವುವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
0
Report
Chamarajanagar571313

ಭಾರತೀಯ ರೈಲ್ವೆಯ ಖಾಸಗೀಕರಣ ಮತ್ತು ವ್ಯಾಪಾರೀಕರಣದ ವಿರೋಧಿಸಿ ನಗರದಲ್ಲಿ ಸಹಿ ಸಂಗ್ರಹ ಚಳುವಳಿಗೆ ಚಾಲನೆ

ManjukumarManjukumarAug 24, 2024 11:39:43
Chamarajanagar, Karnataka:

ಭಾರತೀಯ ರೈಲ್ವೆಯ ಖಾಸಗೀಕರಣ ಮತ್ತು ವಾಣಿಜ್ಯೀಕರಣದ ವಿರುದ್ಧ ಎಐಡಿವೈಒ ರಾಜ್ಯ ಸಮಿತಿಯಿಂದ ಶನಿವಾರ ಚಾಮರಾಜನಗರ ರೈಲು ನಿಲ್ದಾಣದಲ್ಲಿ ರಾಷ್ಟ್ರವ್ಯಾಪಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ನೂರಾರು ಪ್ರಯಾಣಿಕರು ಸಹಿ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಐಡಿವೈಒ ಸದಸ್ಯರಾದ ಸುನೀಲ್, ಕೋಡಿಮೋಳ್ ಕಾಂತರಾಜು, ನಾಗೇಂದ್ರ, ಶಿವಕುಮಾರ್, ಪ್ರಕಾಶ್, ನಿತಿನ್, ರಮೇಶ್, ಆನಂದ್ ಮತ್ತಿತರರು ಉಪಸ್ಥಿತರಿದ್ದರು.

0
Report
Chamarajanagar571313

ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರು ಬೈಕ್ ಅಪಘಾತ, ಸವಾರರಿಗೆ ಗಂಭೀರ ಗಾಯ

ManjukumarManjukumarAug 24, 2024 11:38:20
Chamarajanagar, Karnataka:
ಚಾಮರಾಜನಗರ ತಾಲೂಕಿನ ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇನ್ನೋವಾ ಕಾರು ಮತ್ತು ಬೈಕ್ ನಡುವೆ ಅಪಘಾತವಾಗಿದೆ. ಇನ್ನೂ ಬೈಕ್ ನಲ್ಲಿದ್ದ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದು‌. ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯು ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
0
Report
Chamarajanagar571313

ಅಧಿಕ ವೋಲ್ಟೇಜ್‌ನಿಂದ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಹೋಗಿರುವ ಕುರಿತು ಕೆಇಬಿ ಸಹಾಯವಾಣಿಗೆ ಕರೆ ಬಂದಿದೆ

ManjukumarManjukumarAug 23, 2024 12:04:30
Chamarajanagar, Karnataka:

ಚಾಮರಾಜನಗರದ ವಾರ್ಡ್ ಸಂಖ್ಯೆ 18ರಲ್ಲಿ ಅಧಿಕ ವೋಲ್ಟೇಜ್ ನಿಂದಾಗಿ ಬಲ್ಬ್, ಮೊಬೈಲ್ ಚಾರ್ಜರ್, ಟಿವಿ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿವೆ. ಮತ್ತೆ ಅದೇ ಫ್ಯೂಸ್, ಈ ಬಾರಿ ಅವನು ಹೆಲ್ ಲೈನ್‌ಗೆ ಕರೆ ಮಾಡಿದನು, ಕರೆ ಹೋಗಲಿಲ್ಲ ಮತ್ತು ಫೋನ್ ಎತ್ತಲಿಲ್ಲ. ಇಲ್ಲಿ ವಿದ್ಯುತ್ ಕಂಬ ಬಿದ್ದು ಹಲವು ವಿದ್ಯುತ್ ತಂತಿಗಳು ಬಿದ್ದಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

1
Report
Chamarajanagar571313

ಚಾಮರಾಜನಗರದಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು - ಶಾಸಕರ ಚಾಲನೆಯ ಬಗ್ಗೆ ಇಲ್ಲಿದೆ ವಿವರಗಳು

ManjukumarManjukumarAug 21, 2024 09:35:05
Chamarajanagar, Karnataka:

ಚಾಮರಾಜನಗರ ತಾಲೂಕು ಸಂತೇಮರಳ್ಳಿ ಜೆ.ಎಸ್.ಎಸ್. ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಜೆ.ಎಸ್.ಎಸ್. ಮಹಿಳಾ ಪದವಿ ಪೂರ್ವ ಕಾಲೇಜು ವತಿಯಿಂದ ಯಳಂದೂರು ತಾಲೂಕಿನ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರು ಮಾಡಿದರು. ಅವರು ತಮ್ಮ ಭಾಷಣದಲ್ಲಿ, ಕ್ರೀಡೆ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಸುಧಾರಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಚಿಂತನಶೀಲತೆಯೊಂದಿಗೆ ಭಾಗವಹಿಸುವ ಅಗತ್ಯವನ್ನು ಅವರು ಒತ್ತಿಸಿದರು.

0
Report
Chamarajanagar571313

ಬೇಡರಪುರ ಇಂಜಿನಿಯರಿಂಗ್ ಕಾಲೇಜು ಬಳಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ, ಏಳರಿಂದ ಎಂಟು ಪ್ರಯಾಣಿಕರ ಸ್ಥಿತಿ ಗಂಭೀರ

ManjukumarManjukumarAug 20, 2024 06:57:37
Badanaguppe, Karnataka:
ಚಾಮರಾಜನಗರ ತಾಲೂಕಿನ ಬೇಡರಪುರ ಇಂಜಿನಿಯರಿಂಗ್ ಕಾಲೇಜು ಬಳಿಸೋಮವಾರ ಸಂಜೆ 4.30 ರಲ್ಲಿ ಲಾರಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಡುವೆ ಭೀಕರ ಅಪಘಾತವಾಗಿದೆ. ಬಸ್ ನಲ್ಲಿದ್ದ ಕಂಡಕ್ಟರ್ ಸೇರಿ ಏಳರಿಂದ ಎಂಟು ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಮರಾಜನಗರದಿಂದ ಮೈಸೂರಿಗೆ ಹೋಗುತ್ತಿದ್ದ ಬಸ್ ಸ್ಟೀರಿಂಗ್ ಲಾಕ್ ಆದ ಹಿನ್ನೆಲೆ ಹಿಂದೆ ಬರುತ್ತಿದ್ದ ಲಾರಿ ಬಸ್ ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇನ್ನೂ ಗಾಯಗೊಂಡವರನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಸ್ಥಳಕ್ಕೆ ಚಾಮರಾಜನಗರ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ದೂರು ದಾಖಲುಮಾಡಿಕೊಂಡಿದ್ದಾರೆ.
0
Report