Back
Dakshina Kannada575001blurImage

ನಾನು ವ್ಯಾಪಾರಿ ಅಲ್ಲ ಎಂದ ಮಾಜಿ ಸಚಿವ!

Shamsheer
Jun 04, 2025 13:19:31
Mangaluru, Karnataka
ನನಗೆ ಹೊಯ್ಗೆ, ಕಲ್ಲು, ಮಣ್ಣು ವ್ಯಾಪಾರ ಇಲ್ಲ . ನಾನು ಯಾವುದೇ ವ್ಯಾಪಾರ ಇಲ್ಲದ ವ್ಯಕ್ತಿ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಬಕಾರಿ ಸಚಿವನಾಗಿದ್ದರೂ ಒಂದು ವೈನ್ ಶಾಪ್ ಮಾಡಿಲ್ಲ, ಸಾರಿಗೆ ಮಂತ್ರಿ ಅಗಿ ಸೇವೆ ಸಲ್ಲಿಸಿದ್ದರೂ ಒಂದು ಬಸ್ ಕೂಡಾ ನನ್ನಲ್ಲಿ ಇಲ್ಲ ಎಂದು ಹೇಳಿದರು. ಕೋಮು ಕ್ರಿಮಿನಲ್‌ಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮವನ್ನು ನಿರೀಕ್ಷಿಸುವ ಕಾಂಗ್ರೆಸ್ ನಾಯಕರು ಮರಳು ದಂಧೆಗೆ ಕಡಿವಾಣ ಹಾಕುವ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಾರೆ ಎಂಬ ಆರೋಪದ ಬಗ್ಗೆ ಗಮನ ಸೆಳೆದಾಗ ಅದು ನನಗೆ ಗೊತ್ತಿಲ್ಲ. ನನ್ನ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆ ಮಾಡಬಹುದು, ನಾನು ಎಲ್ಲ ರೀತಿಯಲ್ಲಿ ಸರಿ ಇದ್ದೇನೆ. ಜಾತ್ಯತೀತ ಸಿದ್ಧಾಂತಕ್ಕೆ ಶಾಶ್ವತವಾಗಿ ಬದ್ಧನಾದ ವ್ಯಕ್ತಿ. ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕು ಎನ್ನುವುದು ನನ್ನ ಆಗ್ರಹವಾಗಿದೆ ಎಂದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com